ಜಿಲ್ಲೆಯಲ್ಲಿ ಜಿಂಕೆವನ ಸ್ಥಾಪಿಸಿ
Team Udayavani, Jul 12, 2021, 8:05 PM IST
ಕೊಪ್ಪಳ: ಜಿಲ್ಲೆಯಲ್ಲಿ ಜಿಂಕೆ ಹಾವಳಿ ಹೆಚ್ಚಾಗುತ್ತಿದ್ದು, ಸರ್ಕಾರಕ್ಕೆ ಜಿಂಕೆ ವನ ಸ್ಥಾಪನೆ ಮಾಡಿ ಎಂದು ಹಲವು ಬಾರಿ ಒತ್ತಾಯ ಮಾಡಲಾಗಿದೆ. ಆದರೂ ಸರ್ಕಾರ ಕಾಳಜಿ ವಹಿಸಿಲ್ಲ. ಇನ್ನಾದರೂ ರೈತರ ಸಮಸ್ಯೆ ಅರಿತು ಜಿಂಕೆವನ ಸ್ಥಾಪಿಸಿ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರು ತಮ್ಮ ಹೊಲಗಳಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು, ಜಿಂಕೆ ಹಾವಳಿ ತಪ್ಪಿಸಲು ಪ್ಲಾಸ್ಟಿಕ್ ಹಾಳೆಯನ್ನು ಹೊಲದ ಸುತ್ತಲು ಕಟ್ಟುತ್ತಿದ್ದಾರೆ. ಇದರಿಂದ ಜಿಂಕೆಗಳು ಹಾಳೆಯ ಶಬ್ಧಕ್ಕೆ ಹೆದರಿ ಬರುವುದಿಲ್ಲ. ಕೆಲವರು ಹೊಲದಲ್ಲಿ ಗೊಂಬೆಗಳನ್ನು ಮಾಡಿಸಿ ನಿಲ್ಲಿಸುತ್ತಿದ್ದಾರೆ. ರೈತರು ವಿವಿಧ ಯತ್ನ ನಡೆಸಿ ಬೆಳೆ ರಕ್ಷಣೆಗೆ ಮುಂದಾದರೂ ಜಿಂಕೆಗಳು ಹೊಲದಲ್ಲಿ ಹಗಲು-ರಾತ್ರಿ ಸುತ್ತಾಡಿ ಬೆಳೆ ಹಾನಿ ಮಾಡುತ್ತಿವೆ. ಇದರಿಂದ ಬೆಳೆ ಕೈಗೆ ಬರುವ ಹಂತದಲ್ಲಿಯೇ ಎಲ್ಲವೂ ಹಾನಿಗೀಡಾಗುತ್ತಿದೆ. ಇಲ್ಲಿನ ಬೆಳೆ ಹಾನಿಯ ಕುರಿತು ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಮೌನವಾಗಿ ಕುಳಿತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಬಂದು ನೋಡುತ್ತಿಲ್ಲ. ರೈತರ ಸಂಕಷ್ಟ ಆಲಿಸುತ್ತಿಲ್ಲ. ಸರ್ಕಾರ ಇಂತ ಸಮಸ್ಯೆ ಅರಿತು ಕೂಡಲೇ ಜಿಂಕೆವನ ನಿರ್ಮಾಣ ಮಾಡಿ ಜಿಂಕೆ ಕಾಟವನ್ನು ತಪ್ಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರ ಬಾಳಲ್ಲಿ ಆಟವಾಡುತ್ತಿರುವ ಕಾಂಗ್ರೆಸ್ ಸರಕಾರ: ಸಿ.ಟಿ.ರವಿ ಆಕ್ರೋಶ
Koppala; ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಮಗು ಸಾವು; ಸಂಬಂಧಿಕರ ಆಕ್ರೋಶ
Nitte Institute of Communication; ಮೇ 31ರಂದು ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್
MLC Election: ರಘುಪತಿ ಭಟ್ ಸ್ಪರ್ಧೆ ಏನೂ ಪರಿಣಾಮ ಬೀರದು: ಬಿಎಸ್ ಯಡಿಯೂರಪ್ಪ
Magadi: ಹೇಮಾವತಿ ಕುಡಿಯುವ ನೀರು ಹೋರಾಟ; ಕೋಡಿಹಳ್ಳಿ ಚಂದ್ರಶೇಖರ್ ಸೇರಿ ರೈತರ ಬಂಧನ
MUST WATCH
ಹೊಸ ಸೇರ್ಪಡೆ
Sahara Movie; ಮಂಡ್ಯ ಹುಡುಗಿ ಕ್ರಿಕೆಟರ್ ಆದ ಕಥೆ…
School Reopen: ಈ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಫಲಿತಾಂಶ ದಿನದಂದೇ ಶಾಲಾ ಕಾಲೇಜು ಆರಂಭ…
UV Fusion: ಒಂದಾನೊಂದು ಕಾಲದ ರಾಜ ರಾಣಿ ಕಥೆ
Yadagiri: ರೈತರ ಬಾಳಲ್ಲಿ ಆಟವಾಡುತ್ತಿರುವ ಕಾಂಗ್ರೆಸ್ ಸರಕಾರ: ಸಿ.ಟಿ.ರವಿ ಆಕ್ರೋಶ
Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ