ಅತಿಥಿ ದೇವೋಭವ


Team Udayavani, Jul 17, 2021, 6:56 PM IST

desiswara

ಟ್ರೂéಲಿ ಏಷ್ಯಾ ಎಂದೇ ಕರೆಯಲ್ಪಡುವ ಮಲೇಷ್ಯಾ ಪ್ರವಾಸೋದ್ಯಮ ವರ್ಷಕ್ಕೆ ಲಕ್ಷಾಂತರ ವಿದೇಶಿಗರನ್ನು ತನ್ನತ್ತ ಸೆಳೆಯುತ್ತದೆ.

2018ರ ಸಮೀಕ್ಷೆಯಲ್ಲಿ ಸುಮಾರು 2 ರಿಂದ 3 ಕೋಟಿ ಪ್ರವಾಸಿಗರಿದ್ದು, 1,000 ಕೋಟಿಗೂ ಹೆಚ್ಚು ರೂ. ಆದಾಯ ತಂದುಕೊಟ್ಟಿತು. ವಿಶ್ವದ ಪ್ರವಾಸೋದ್ಯಮ ದೇಶಗಳ ಪೈಕಿ ಮಲೇಷ್ಯಾ ಮೊದಲ ಹತ್ತು ದೇಶಗಳಲ್ಲಿ ಒಂದಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರವಾಸೋದ್ಯಮಕ್ಕೆ ಇಲ್ಲಿ ಮೂರನೇ ಸ್ಥಾನವಿದೆ.

ಆಗ್ನೇಯ ಏಷ್ಯಾ ದ್ವೀಪವಾಗಿರುವ ಮಲೇಷ್ಯಾ ತನ್ನ ಅನೇಕ ಆಚಾರ-ವಿಚಾರ, ವೈವಿಧ್ಯಮಯ ತಿನಿಸುಗಳು,  ಜಲಕ್ರೀಡೆ ಹಾಗೂ ಸಂವೃದ್ಧವಾಗಿರುವ ಇತಿಹಾಸದಿಂದ ಪ್ರಪಂಚವನ್ನು ತನ್ನತ್ತ ಆಕರ್ಷಿಸುತ್ತಿದೆ. ಇದೆಲ್ಲದರ ಜತೆಗೆ ಬಜೆಟ್‌ ಫ್ರೆಂಡ್ಲಿ ದೇಶವಾಗಿದ್ದು, ಸಹೃದಯ ಜನರನ್ನು ಹೊಂದಿದೆ. ಮಲೇಷ್ಯಾದ ಪ್ರಸಿದ್ಧ ಸ್ಥಳಗಳಾದ ಕೌಲಲಾಂಪುರದ ಟ್ವಿನ್‌ ಟವರ್‌, ಮೆಲಕ, ಪೆನಾಂಗ್‌, ಲಂಕಾವಿ, ಇಲ್ಲಿನ ಸಮುದ್ರ ತೀರಗಳು, ಚಿಕ್ಕ ಪುಟ್ಟ ದ್ವೀಪಗಳು ಎಲ್ಲಕ್ಕಿಂತ ಹೆಚ್ಚಾಗಿ ಸೀಫ‌ುಡ್‌ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದ್ದು, ನೂರಾರು ಕೋಟಿ ರಿಂಗೆಟ್ಟುಗಳ ಆದಾಯವನ್ನು ಪ್ರತಿ ವರ್ಷ ತಂದುಕೊಡುತ್ತಿವೆ.

ಕೋವಿಡ್‌ನಿಂದ ಉದ್ಭವಿಸಿದ ಆರ್ಥಿಕ ಸಂಕಷ್ಟ

ಕೋವಿಡ್‌-19ರಿಂದ ಇಡೀ ಪ್ರಪಂಚವೇ ನಲುಗಿದ್ದು  ಪ್ರವಾಸೋದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ. ವಿಮಾನ ಹಾರಾಟ ನಿರ್ಬಂಧಗಳಿಂದ, ಪ್ರವಾಸೋದ್ಯಮ ಚಟುವಟಿಕೆಗಳು ಬಹುತೇಕ ನಿಂತೇ ಹೋಗಿವೆ. ಕೇವಲ ಪ್ರವಾಸೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವ ಅನೇಕ ಸಂಸಾರಗಳು, ಹೊಟೇಲ್‌ ಉದ್ಯಮ, ಟೂರಿಸಂ ಏಜನ್ಸಿಗಳಿಗೆ ಆರ್ಥಿಕವಾಗಿ ದೊಡ್ಡ ಹೊಡೆತವನ್ನೇ ನೀಡಿದೆ.

2019ರಲ್ಲಿ ಸುಮಾರು 26 ಮಿಲಿಯನ್‌ ಜನರನ್ನು ಮಲೇಷ್ಯಾ ಪ್ರವಾಸೋದ್ಯಮ ಆಕರ್ಷಿಸಿದ್ದರೆ 2020ರಲ್ಲಿ ಇದು 4.3 ಮಿಲಿಯನ್‌ಗೆ ಇಳಿದಿದೆ. 2019ರಲ್ಲಿ ಪ್ರವಾಸೋದ್ಯಮದಿಂದ ಬಂದ ಆದಾಯ 86 ಬಿಲಿಯನ್‌ ಮಲೇಷ್ಯನ್‌ ರಿಂಗೆಟ್‌. ಆದರೆ 2020 ರಲ್ಲಿ ಸುಮಾರು ಹತ್ತು ಪಟ್ಟು ಇಳಿಕೆಯಾಗಿದ್ದು ಕೇವಲ 12.7 ಬಿಲಿಯನ್‌ ಗಳಿಸಿದೆ. ಗಮನಿಸಬೇಕಾದ  ಇನ್ನೊಂದು ವಿಷಯವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಪ್ರವಾಸೋದ್ಯಮದ ಆದಾಯದ ಗಳಿಕೆ  ಇಷ್ಟು ಕುಸಿದಿರುವುದು ಇದೇ ಮೊದಲ ಬಾರಿ. ಇದಕ್ಕೆ ಮುಂಚಿನ ಪ್ರವಾಸೋದ್ಯಮ ಆದಾಯದ ಕನಿಷ್ಠ ಗಳಿಕೆ 2009ರಲ್ಲಿ 53 ಬಿಲಿಯನ್‌ ರಿಂಗೆಟ್ಟುಗಳಾಗಿತ್ತು.

ಪ್ರವಾಸೋದ್ಯಮಿಗಳೂ ಇಲ್ಲಿ ಫ್ರಂಟ್‌ ಲೈನ್‌ ವಾರಿಯರ್‌

ದೇಶದ ಆರ್ಥಿಕತೆಯ ಒಂದು ಭಾಗವಾಗಿರುವ ಪ್ರವಾಸೋದ್ಯಮ ದುಸ್ಥಿತಿಯಿಂದ ದೇಶದ ಬಹುಮುಖ್ಯ ಆದಾಯದ ಮೂಲ ನಿಂತುಹೋಗಿದೆ. ಸದ್ಯ ಇಲ್ಲಿನ ಸರಕಾರ ತನ್ನ 2021ರ ಬಜೆಟ್‌ ನಲ್ಲಿ ಸರಿಸುಮಾರು 50 ಮಿಲಿಯನ್‌ ಮಲೇಷ್ಯನ್‌ ರಿಂಗೆಟ್‌ ಹಣವನ್ನು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ  ಜನರಿಗೆ ಹಾಗೂ ಮೂಲಸೌಕರ್ಯಗಳಿಗೆ ಮೀಸಲಿಟ್ಟಿದೆ. ಸುರಕ್ಷೆಗೆ ಹೆಚ್ಚು ಮಹತ್ವ ನೀಡುವ ಸರಕಾರ ಪ್ರವಾಸೋದ್ಯಮದವರನ್ನು ಫ್ರಂಟ್‌ ಲೈನ್‌ ವಾರಿಯರ್‌ ಎಂದು ಪರಿಗಣಿಸಿ ವ್ಯಾಕ್ಸಿನೇಷನ್‌ಗೆ ಪ್ರಮುಖ ಸ್ಥಾನ ಕೊಡುವಲ್ಲಿ ಮುಂದಾಗಿದೆ. ಇದಕ್ಕೆ ತಕ್ಕ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಸರಿಸುಮಾರು  20 ಮಿಲಿಯನ್‌ ಮಲೇಷ್ಯನ್‌ ರಿಂಗೆಟ್‌ ವೆಚ್ಚದಲ್ಲಿ ವ್ಯಾಕ್ಸಿನೇಷನ್‌ ಕಾರ್ಯಕ್ರಮವನ್ನು ಹೊರತಂದಿದ್ದು, ಇಲ್ಲಿನ ಪ್ರವಾಸೋದ್ಯಮ ಮತ್ತೆ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡು ಎಂದಿನಂತೆ ತನ್ನತ್ತ ಕೋಟಿ ಕೋಟಿ ಜನರನ್ನು ಆಕರ್ಷಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

 

ಅಕ್ಷಯ ರಾವ್‌,  ಮಲೇಷ್ಯಾ

ಟಾಪ್ ನ್ಯೂಸ್

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.