ಕರಾವಳಿಯ ಪ್ರಮುಖ ವಾಣಿಜ್ಯ ಕೃಷಿ – ಮಲ್ಲಿಗೆ ಕೃಷಿ


Team Udayavani, Jul 18, 2021, 7:09 PM IST

College Campus

ಹೂವು ಇವತ್ತು ಅರಳಿ ನಾಳೆ ಬಾಡುತ್ತದಾದರೂ ಅದು ಮಾನವನ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ನಂತರವೂ ತನ್ನ ಉನ್ನತ ಸ್ಥಾನವನ್ನು ಇಟ್ಟುಕೊಂಡಿದೆ. ಪುಷ್ಪ ಕೃಷಿಯಲ್ಲಿ ಹೆಚ್ಚು ಹೆಸರುವಾಸಿ ಹಾಗೂ ಪ್ರಮುಖ ವಾಣಿಜ್ಯ ಕೃಷಿ ಯಾವುದೆಂದರೆ ಅದುವೇ ಮಲ್ಲಿಗೆ ಕೃಷಿ. ನಮ್ಮ ಕರಾವಳಿ ಪ್ರದೇಶದಲ್ಲಿ ಅದು ನಮ್ಮ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಮಟ್ಟದಲ್ಲಿ ಹೆಸರು ಮಾಡಿರುವಂತಹ ಹಾಗೂ ಸರ್ವರನ್ನು ಆಕರ್ಷಿಸುವಂತಹ ಕೃಷಿಯೆಂದರೆ ಮಲ್ಲಿಗೆ ಕೃಷಿ.ಈ ನಮ್ಮ ಪ್ರದೇಶದಲ್ಲಿ ಪ್ರಚಲಿತವಾಗಿರುವಂತಹದ್ದು ಉಡುಪಿ ಮಲ್ಲಿಗೆ.

ಇದನ್ನೂ ಓದಿ :  ಷರತ್ತಿಗೊಳಪಟ್ಟು ನಾಳೆಯಿಂದ ಕಾಸರಗೋಡು ಬಸ್ ಸಂಚಾರ ಆರಂಭ

ಉಡುಪಿ ಮಲ್ಲಿಗೆ ಸಾಧಾರಣವಾಗಿ ಪೊದೆಯಾಕಾರದಲ್ಲಿ ಬೆಳೆದು ಹೆಚ್ಚಿನ ಪರಿಮಳವನ್ನು ಹೊಂದಿರುತ್ತದೆ.. ಹೀಗಾಗಿ ಉಡುಪಿ ಮಲ್ಲಿಗೆಗೆ ಸ್ಥಳೀಯ ಹಾಗೂ ಬೇರೆ ರಾಜ್ಯಗಳ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ, ಹಾಗೂ ಇನ್ನೂ ಹೊರದೇಶದಲ್ಲಿ ಸುಗಂಧದ್ರವ್ಯದ ಉಪಯೋಗಕ್ಕಾಗಿ ಆಮದು ಮಾಡಿಕೊಳ್ಳುತ್ತಾರೆ. ಈ ಮಲ್ಲಿಗೆ ಗಿಡಗಳು ವರ್ಷಾದ್ಯಂತ ಹೂ ಬಿಟ್ಟರು ಅತಿ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಹೂಬಿಡುವ ಪ್ರಮಾಣ ಕಡಿಮೆ. ನಮ್ಮ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಲ್ಲಿಗೆ ಬೆಳೆಯುವಂತದ್ದು ಶಂಕರಪುರ ಪ್ರದೇಶದಲ್ಲಿ. ಇಲ್ಲಿ ನಾವು ಅತಿ ಹೆಚ್ಚು ಜನರ ಮನೆಯ ವಠಾರದಲ್ಲಿ ಸದಾ ಹಸನ್ಮುಖಿಯಾಗಿ ಇರುವಂತಹ ಮಲ್ಲಿಗೆಯ ಗಿಡಗಳನ್ನು ಕಾಣಬಹುದು.

ಹವಾಗುಣ ಮತ್ತು ಮಣ್ಣು:

ಮಲ್ಲಿಗೆ ಕೃಷಿಗೆ ದಿನಪೂರ್ತಿ ಬಿಸಿಲು ಹಾಗೂ ವಾತಾವರಣದಲ್ಲಿ ತೇವಾಂಶದಿಂದ ಕೂಡಿದ ಹವಾಗುಣ ಅನುಕೂಲ. ನೆರಳು ಇರುವ ಜಾಗದಲ್ಲಿ ಗಿಡ ಚೆನ್ನಾಗಿ ಬೆಳೆದರು ಹೂವಿನ ಇಳುವರಿ ಕಡಿಮೆ. ಮಲ್ಲಿಗೆಯನ್ನು ನೆಡಲು ಚೆನ್ನಾಗಿ ಬಿಸಿಲು ಬೀಳುವ ಹಾಗೂ ಮಳೆಗಾಲದಲ್ಲಿ ನೀರು ನಿಲ್ಲದಂತಹ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ನೀರು ಚೆನ್ನಾಗಿ ಬಸಿದು ಹೋಗುವಂತಹ ಮರಳು ಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಸೂಕ್ತ. ಉಡುಪಿ ಮಲ್ಲಿಗೆ ಇದು ಪೊದೆಯಾಕಾರದಲ್ಲಿ ಬೆಳೆಯುವ ತಳಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶೇ.85 ಪ್ರದೇಶದಲ್ಲಿ ಈ ತಳಿಯನ್ನು ಬೆಳೆಯಲಾಗುತ್ತದೆ.

ನಾಟಿ:

ಕರಾವಳಿ ಪ್ರದೇಶದಲ್ಲಿ ಮಲ್ಲಿಗೆ ಗಿಡಗಳನ್ನು ನಾಟಿ ಮಾಡಲು ಸೂಕ್ತ ಕಾಲ ಆಗಸ್ಟ್ -ಸೆಪ್ಟೆಂಬರ್ ತಿಂಗಳು. ಜೂನ್ ತಿಂಗಳಲ್ಲಿ ಅಧಿಕ ಮಳೆ ಬೀಳುವುದರಿಂದ ಗಿಡಕ್ಕೆ ಹಾನಿಯಾಗುವ ಸಂಭವ ಜಾಸ್ತಿ ಇರುತ್ತದೆ. ಮಲ್ಲಿಗೆ ಗಿಡಗಳನ್ನು ಬೆಳೆಯಲು ಸಾಧಾರಣವಾಗಿ 2×2×2 ಅಗಲ, ಉದ್ದ, ಮತ್ತು ಆಳದ ಹೊಂಡ ಸಾಕಾಗುತ್ತದೆ. ಹೊಂಡದಿಂದ ಹೊಂಡಕ್ಕೆ ಆರರಿಂದ ಎಂಟು ಅಡಿ ಅಂತರವಿರಬೇಕು ಆಗುತ್ತದೆ. ಹೀಗೆ ತೆಗೆದ ಹೊಂಡಗಳನ್ನು ಕನಿಷ್ಠ 20 ದಿನಗಳ ಕಾಲ ಬಿಸಿಲಿಗೆ ಒಣಗಲು ಬಿಡುವುದು ಒಳ್ಳೆಯದು. ನಂತರ ಚೆನ್ನಾಗಿ ಕೊಳೆತ 20 ಕೆ.ಜಿ. ಹಟ್ಟಿ ಗೊಬ್ಬರ ಮತ್ತು ಭೂಮಿಯ ಮೇಲ್ಮಣ್ಣಿನ ಜೊತೆ ಮಿಶ್ರಣ ಮಾಡಿ ಕಹಿಬೇವಿನ ಹಿಂಡಿಯನ್ನು ಸೇರಿಸಿ ಅದರ ಮೇಲೆ 20 ಗ್ರಾಂ ಕಾರ್ಬೋಫ್ಯೂರಾನ್ ಹರಳುಗಳನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಮಧ್ಯಭಾಗದಲ್ಲಿ ಸಣ್ಣ ಗುಳಿ ತೆಗೆದು ಗಿಡಗಳನ್ನು ನೆಡಬೇಕು. ಮಲ್ಲಿಗೆ ಗಿಡಗಳನ್ನು ಸರಿಯಾಗಿ ಬೆಳೆಯಲು ಉತ್ತೇಜಿಸಬೇಕು ಕೊಡೆಯ ಆಕಾರದಲ್ಲಿ ಬೆಳೆಯುವಂತೆ ಮಾಡಬೇಕು. ಏಕೆಂದರೆ ಕೊಡೆಯಾಕಾರದ ಗಿಡದ ಮೇಲೆ ಬಿಸಿಲು ಒಂದೇ ರೀತಿಯಲ್ಲಿ ಸಮನಾಗಿ ಬೀಳುತ್ತದೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಹಾಗೂ ರೋಗ ಮತ್ತು ಕೀಟಗಳ ಬಾಧೆಯಿಂದ ರಕ್ಷಿಸಿದಂತಾಗುತ್ತದೆ.

ಮಲ್ಲಿಗೆ ಬೆಳೆಯಲ್ಲಿ ಕಂಡುಬರುವ ಮುಖ್ಯ ಕೀಟಗಳು ರೋಗಗಳು-

*ಕೀಟಗಳು

  1. ನುಸಿ ಮತ್ತು ಬಿಳಿ ನೊಣಗಳು
  2. ಎಲೆ ತಿನ್ನುವ ಹುಳು, ಬೂಸ್ಟ್ ತಿಗಣೆ, ಮೊಗ್ಗನ್ನು ಕೊರೆಯುವ ಹುಳು

*ರೋಗಗಳು

1 ಎಲೆ ಚುಕ್ಕಿ ರೋಗ

2 ಸೊರಗು ರೋಗ

ಕೊಯ್ಲು ಮತ್ತು ಇಳುವರಿ

ಗಿಡಗಳನ್ನು ನೆಟ್ಟ ವರ್ಷವೇ ಹೂ ಬಿಡಲು ಪ್ರಾರಂಭವಾಗುತ್ತದೆ. ಪ್ರಾರಂಭದ ದಿನಗಳಲ್ಲಿ ಕಡಿಮೆ ಪ್ರಮಾಣದ ಹೂವು ಸಿಗುತ್ತದೆ. ದಿನಕಳೆದಂತೆ ಇಳುವರಿ ಹೆಚ್ಚಾಗುತ್ತದೆ. ನಾಟಿಯ 15 ರಿಂದ 20 ವರ್ಷಗಳವರೆಗೆ ಅತಿ ಹೆಚ್ಚು ಇಳುವರಿಯನ್ನು ಪಡೆಯಬಹುದು.

– ವೆನಿಶಾ ರವೀನಾ ರೋಡ್ರಿಗಸ್

ಇದನ್ನೂ ಓದಿ :  ದೇಶದ ಎಲ್ಲಾ ಪೋಸ್ಟ್ ಆಫೀಸ್ ಗಳಲ್ಲಿ ಐಟಿಆರ್ ಫೈಲಿಂಗ್ ಗೆ ಅವಕಾಶ  

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.