ಕಾರ್ಕಳದ ಮಹಿಳೆಯ ಕಣ್ಣೀರ ಕಥೆ: ಒಂದೇ ಹಟ್ಟಿಯ 16 ಹಸುಗಳು ಕಟುಕರ ಪಾಲು!

ಸಾಲುಸಾಲು ಗೋ ಕಳವು; ಬರಿದಾಗಿದೆ ಹಟ್ಟಿ

Team Udayavani, Jan 10, 2022, 8:10 AM IST

ಕಾರ್ಕಳದ ಮಹಿಳೆಯ ಕಣ್ಣೀರ ಕಥೆ: ಒಂದೇ ಹಟ್ಟಿಯ 16 ಹಸುಗಳು ಕಟುಕರ ಪಾಲು!

ಕಾರ್ಕಳ: ಇಲ್ಲೊಬ್ಬಳು ಮಹಿಳೆ ಮಕ್ಕಳಂತೆ ಸಾಕಿ ಸಲಹಿದ್ದ 16 ಗೋವುಗಳು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಕಟುಕರ ಪಾಲಾಗಿದ್ದು, ಆ ಮಾತೆಯ ಮನೆಯಲ್ಲೀಗ ಸೂತಕದ ಛಾಯೆ ಮನೆ ಮಾಡಿದೆ.

ಕಾರ್ಕಳ ತಾಲೂಕು ಕರಿಯಕಲ್ಲು ಕಜೆ ನಿವಾಸಿ 58ರ ಹರೆಯದ ಯಶೋದಾ 18 ವರ್ಷಗಳಿಂದ ಹೈನು ಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮುಖ್ಯ ರಸ್ತೆಯಿಂದ 1.5 ಕಿ.ಮೀ. ದೂರದಲ್ಲಿರುವ ಪುಟ್ಟ ಹೆಂಚಿನ ಮನೆಯಲ್ಲಿ ಪುತ್ರಿ ಯೊಂದಿಗೆ ವಾಸ. ಪತಿ ವಿಟಲ ಆಚಾರ್ಯ 24 ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಅಂದಿನಿಂದ ತಾಯಿ-ಮಗಳಿಗೆ ಹೈನುಗಾರಿಕೆಯೇ ಜೀವನಾಧಾರ.

ಇತ್ತೀಚಿನ ವರ್ಷಗಳಲ್ಲಿ ಕರಾವಳಿಯಲ್ಲಿ ದನಗಳ್ಳರ ಹಾವಳಿ ಮಿತಿ ಮೀರಿದ್ದು ಹಟ್ಟಿಗೇ ನುಗ್ಗುವ ಧೈರ್ಯ  ತೋರುತ್ತಿದ್ದಾರೆ. ತಲವಾರು ತೋರಿಸಿ ಮನೆಮಂದಿಯನ್ನು ಹೆದರಿಸಿ ಹಸುಗಳನ್ನು ಸೆಳೆದೊಯ್ದ ಪ್ರಕರಣ ಗಳೂ ಇವೆ. ಮೇಯಲು ಕಟ್ಟಿರುವುದನ್ನು ಕದ್ದೊಯ್ಯುವುದೂ ಇದೆ. ಅಂತೆಯೇ ಯಶೋದಾ ಕಳೆದ ಒಂದೂ ವರ್ಷದಿಂದ 15 ದನಗಳನ್ನು ಕಳೆದುಕೊಂಡಿದ್ದರು. ಕೊನೆಯದಾಗಿ ಜ. 3ರ ರಾತ್ರಿ ಹಟ್ಟಿಯಲ್ಲಿದ್ದ ತುಂಬು ಗಬ್ಬದ ಹಸು ಕಟುಕರ ಪಾಲಾಗಿದೆ. ಕಳ್ಳರು ನುಗ್ಗಿರುವ ವಿಷಯ ತಿಳಿದರೂ ತಲವಾರಿನ ಭಯದಿಂದ ತಾಯಿ-ಮಗಳು ಮನೆಯಿಂದ ಹೊರಗೆ ಬರಲಿಲ್ಲ. 16ನೇ ಹಸುವನ್ನೂ ಕಳೆದುಕೊಂಡು ದಿಕ್ಕೇ ತೋಚದೆ ಕಣ್ಣೀರು ಸುರಿಸುತ್ತಿದ್ದಾರೆ.

ಹೊಸ ಮನೆ ಕನಸು ಛಿದ್ರ
ದಿನವೊಂದಕ್ಕೆ 25ರಿಂದ 30 ಲೀ. ಹಾಲು ಡೈರಿಗೆ ಹಾಕುತ್ತಿದ್ದರು. ಮಾಸಿಕ 10ರಿಂದ 15 ಸಾವಿರ ರೂ. ಆದಾಯ ಬರುತ್ತಿತ್ತು. ಹಸುಗಳನ್ನೇ ನಂಬಿ 6 ಲಕ್ಷ ರೂ. ಬ್ಯಾಂಕ್‌ ಸಾಲ ಮಾಡಿ ಮನೆ ಕಟ್ಟಲು ಆರಂಭಿಸಿದ್ದರು. ಒಂದೊಂದೇ ಹಸುಗಳು ಕಳ್ಳರ ಪಾಲಾಗುತ್ತಿದ್ದಂತೆ ಆದಾಯಕ್ಕೂ ಕುತ್ತು ಬಂದಿದೆ. ಸರಕಾರದ ಕಡೆಯಿಂದಲೂ ಪರಿಹಾರ ಸಿಕ್ಕಿಲ್ಲ. ಮನೆ ಕೆಲಸ ಅರ್ಧದಲ್ಲೇ ಉಳಿದಿದೆ. ತಾಯಿ-ಮಗಳು ದಿಕ್ಕೆಟ್ಟು ಕುಳಿತಿದ್ದಾರೆ.

ಈ ಹಿಂದಿನ ಪ್ರಕರಣಗಳನ್ನು ಪೊಲೀಸರ ಗಮನಕ್ಕೆ ತಂದಿದ್ದರೂ ಯಾವುದೇ ಪರಿಣಾಮ ಆಗಿಲ್ಲ ಎನ್ನುತ್ತಾರೆ ಸಂತ್ರಸ್ತೆ ಯಶೋದಾ.

ಇದನ್ನೂ ಓದಿ:ಭಾರತದತ್ತ ಬಂದಿದ್ದ ಪಾಕ್‌ ದೋಣಿ ವಶ; 10 ಜನರ ಬಂಧನ

ಪಕ್ಕದ ಮನೆಯ 12 ಹಸು ಕಳವು!
ಯಶೋದಾ ಅವರ ಮನೆಯಿಂದ ಅನತಿ ದೂರದಲ್ಲಿರುವ ಗ್ರಾ.ಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ ಅವರ ಹಟ್ಟಿಯಿಂದಲೂ ಇದುವರೆಗೆ 12 ಗೋವುಗಳ ಕಳವಾಗಿದೆ. ಯಶೋದಾ ಅವರ ಹಸುವಿನ ಕಳವು ನಡೆದ ಎರಡು ದಿನಗಳಲ್ಲಿ ಇವರ ಹಟ್ಟಿಯಿಂದಲೂ ಹಾಲು ಕೊಡುವ ಹಸುವನ್ನು ಕಟುಕರು ಕದ್ದೊಯ್ದಿದ್ದಾರೆ.

ಪರಿಸರದ ಹಲವು ಮನೆಯವರ ಹಟ್ಟಿಯಿಂದಲೂ ನಿರಂತರ ದನಗಳ ಕಳವು ನಡೆಯುತ್ತಿದೆ. ಆದರೆ ಹೆಚ್ಚಿನವರೂ ಪೊಲೀಸರಿಗೆ ದೂರು ನೀಡುವುದರಿಂದ “ಪ್ರಯೋಜನ ಶೂನ್ಯ’ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದರೂ ಕಳ್ಳತನ ನಿರಂತರವಾಗಿದೆ.

ಯಶೋದಾ ಅವರ ಗಬ್ಬದ ಹಸು ಕಳವಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಿಸಿ ಕೆಮರಾ ಇತ್ಯಾದಿ ಪರಿಶೀಲನೆ ನಡೆಸುತ್ತಿದ್ದೇವೆ. ಒಂದಿಬ್ಬರ ಮೇಲೆ ಅನುಮಾನ ವ್ಯಕವಾಗಿದ್ದು, ಅವರನ್ನು ವಿಚಾರಿಸುತ್ತಿದ್ದೇವೆ.
– ಮಧು ಬಿ.ಇ. ಉಪನಿರೀಕ್ಷಕರು, ಕಾರ್ಕಳ ನಗರ ಠಾಣೆ

ಮಕ್ಕಳಂತೆ ಸಾಕಿದ್ದ ನನ್ನ ಹಸುಗಳೆಲ್ಲ ಕಟುಕರ ಪಾಲಾಗಿವೆ. ಮನೆಯಲ್ಲಿ ತಾಯಿ-ಮಗಳು ನಾವಿಬ್ಬರೇ ಇರುವುದು. ದನಗಳ್ಳರ ಕಾರಣದಿಂದ ರಾತ್ರಿ ಮನೆಯಿಂದ ಹೊರಬರುವುದಕ್ಕೂ ಭಯವಾಗುತ್ತಿದೆ. ಹಸುಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದೆವು. ಈ ಅದೂ ಇಲ್ಲವಾಗಿದೆ.
– ಯಶೋದಾ ಆಚಾರ್ಯ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.