ಹೊರಬಂತು “ಕದ್ದ ಚಿತ್ರ” ಕ್ಯಾರೆಕ್ಟರ್ ಟೀಸರ್
Team Udayavani, Aug 29, 2022, 3:37 PM IST
ವಿಜಯ ರಾಘವೇಂದ್ರ, ನಮ್ರತಾ ಸುರೇಂದ್ರನಾಥ, ರಾಘು ಶಿವಮೊಗ್ಗ, ಬಾಲಾಜಿ ಮನೋಹರ್, ಸುಜಿತ್ ಸುಪ್ರಭ್, ಬೇಬಿ ಆರಾಧ್ಯ, ವಿನಯ್, ಸ್ಟೀಫನ್ ಮುಂತಾದವರು ಅಭಿನಯಿಸಿರುವ “ಕದ್ದ ಚಿತ್ರ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಪ್ರಚಾರದ ಭಾಗವಾಗಿ ಇತ್ತೀಚೆಗೆ “ಕದ್ದ ಚಿತ್ರ’ ಸಿನಿಮಾದ ಮೊದಲ ಕ್ಯಾರೆಕ್ಟರ್ ಟೀಸರ್ ಮತ್ತು “ಮೊದಲ ಮಳೆ…’ ಎಂಬ ಹಾಡು ಬಿಡುಗಡೆಯಾಗಿದೆ. ಇದೇ ವೇಳೆ ಹಾಜರಿದ್ದ ನಟ ಶಿವರಾಜಕುಮಾರ್, “ಕದ್ದ ಚಿತ್ರ’ ಸಿನಿಮಾಕ್ಕೆ ಶುಭ ಹಾರೈಸಿದರು.
ಇನ್ನು ಬಿಡುಗಡೆಯಾಗಿರುವ “ಕದ್ದ ಚಿತ್ರ’ ಟೀಸರ್ನಲ್ಲಿ ಪಾತ್ರ ಪರಿಚಯ ಮಾಡಿಕೊಡಲಾಗಿದ್ದು, ಬಿಡುಗಡೆಯಾಗಿರುವ “ಮೊದಲ ಮಳೆಯ…’ ಎಂಬ ಗೀತೆಗೆ ಕೃಷ್ಣರಾಜ್ ಸಂಗೀತ ಸಂಯೋಜಿಸಿದ್ದಾರೆ. ಗೀತೆಗೆ ಅನಿಕೇತ್ ಶ್ರೀವತ್ಸ ಸಾಹಿತ್ಯವಿದ್ದು, ಸೂರಜ್ ಸಂತೋಷ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಸುಹಾಸ್ ಕೃಷ್ಣ, “ಇದೊಂದು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಕೃತಿ ಚೌರ್ಯದ ಕಥೆ ಸಿನಿಮಾದಲ್ಲಿದೆ. ಬರಹಗಾರನ ವೃತ್ತಿ, ವೈಯಕ್ತಿಕ ಜೀವನದಲ್ಲಿ ಹಲವು ಅಡೆತಡೆಗಳು ಬರುತ್ತವೆ. ಅವಲ್ಲವನ್ನು ಆತ ಹೇಗೆ ಎದುರಿಸುತ್ತಾನೆ ಎನ್ನುವುದು ಸಿನಿಮಾದ ಕಥೆಯ ಒಂದು ಎಳೆ’ ಎಂದು ಕಥಾಹಂದರ ಬಿಚ್ಚಿಟ್ಟರು.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ನಟ ವಿಜಯ ರಾಘವೇಂದ್ರ, “ನಿರ್ದೇಶಕರು ನನ್ನೊಂದಿಗೆ ಮಾತನಾಡುವಾಗ ಅವರಲ್ಲಿರುವ ಹಸಿವು, ಆತುರ ಕಾಣಿಸಿತು. ಪಾತ್ರಕ್ಕೆ ತಕ್ಕಂತೆ ಮೊದಲ ಬಾರಿ ಸಿಗರೇಟ್ ಸೇದಿದ್ದೇನೆ. ಒಮ್ಮೆ ಶಾಂತ ಸ್ವಭಾವ, ಮತ್ತೂಮ್ಮೆ ಕೋಪದಿಂದ ಒಮ್ಮೆಲೇ ಪ್ರೇರಿತನಾಗುವಂಥ ಪಾತ್ರ ನಿರ್ವಹಿಸಿದ್ದೇನೆ. ಅದೆಲ್ಲದಕ್ಕೂ ಬಲವಾದ ಕಾರಣವಿರುತ್ತದೆ. ಅದೇನು ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು’ ಎಂದರು.
“ಶಾನ್ವಿ ಟಾಕೀಸ್’ ಬ್ಯಾನರ್ನಲ್ಲಿ ಸಂದೀಪ್ ಹೆಚ್. ಕೆ. ನಿರ್ಮಿಸಿರುವ “ಕದ್ದ ಚಿತ್ರ’ ಚಿತ್ರಕ್ಕೆ ಶ್ರೀ ಕ್ರೇಜಿಮೈಂಡ್ ಸಂಕಲನ, ಗೌತಮ್ ಮನು ಛಾಯಾಗ್ರಹಣವಿದೆ. ಸದ್ಯ ಪ್ರಚಾರ ಕಾರ್ಯದಲ್ಲಿರುವ “ಕದ್ದ ಚಿತ್ರ’ ಸಿನಿಮಾವನ್ನು ಅಕ್ಟೋಬರ್ನಲ್ಲಿ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bank Of Bhagyalakshmi: ಬ್ಯಾಂಕ್ನತ್ತ ದೀಕ್ಷಿತ್ ಚಿತ್ತ
Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್
YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…
ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ
Sandalwood: ರಿಷಿ ಖುಷಿ!: ಅಕೌಂಟ್ಗೆ ಮತ್ತೊಂದು ಚಿತ್ರ ತ್ತೊ
MUST WATCH
ಹೊಸ ಸೇರ್ಪಡೆ
Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು
Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ