ಸಿಎಂ ಆಗಮನ: ಕುಷ್ಟಗಿಯಲ್ಲಿ ರಸ್ತೆಯ ಹಂಪ್ಸ್ ತೆರವು
Team Udayavani, Oct 12, 2022, 5:55 PM IST
ಕುಷ್ಟಗಿ: ಸಿಎಂ ಬಸವರಾಜ್ ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಪಟ್ಟಣದ ಶಾಖಾಪೂರ ರಸ್ತೆಯಲ್ಲಿ ಏಳೆಂಟು ಹಂಪ್ಸ್ ಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಗಿದೆ. ಸಿಎಂ ಅವರು ಬಿಜೆಪಿ ಕಚೇರಿ “ಅಂಜನಾದ್ರಿ” ಉದ್ಘಾಟಿಸಲು ಆಗಮಿಸಿದ್ರು.
ರಸ್ತೆಯಲ್ಲಿ ಸಿಎಂ ಕಾರು ಸಂಚರಿಸುವ ವೇಳೆ ಹಂಪ್ಸ್ ನಿಂದ ತೊಂದರೆಯಾಗಬಾರದು ಎಂದು ಹಂಪ್ಸ್ ತೆರವುಗೊಳಿಸಿದ್ದಾರೆ, ಮತ್ತೆ ಹಾಕಿಸಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾವರಗೇರಾ ರಸ್ತೆಯ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಸಿಎಂ, ಜನರ ಮನವಿ ಸ್ವೀಕರಿಸಿ ನೇರವಾಗಿ ಶಾಖಾಪೂರ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಯವರೆಗೂ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆಗೊಳಿಸಿದ್ದು ಪೊಲೀಸರು ರಿಯರ್ಸಲ್ ನಡೆಸಿದ್ದರಿಂದ ಕೆಲ ಸಮಯ ಬಸವೇಶ್ವರ ವೃತ್ತ, ಮಾರುತಿ ವೃತ್ತ ಹಾಗೂ ಕನಕದಾಸ ವೃತ್ತದಲ್ಲಿ ಬೈಕ್ ಸವಾರರಿಗೆ ಕಿರಿಕಿರಿಗೆ ಕಾರಣವಾಯಿತು.