ಒಳ ರಸ್ತೆಗಳ ಬದಿಯಲ್ಲಿ ತೆರವಾಗಬೇಕಿದೆ ಹುಲ್ಲು ಪೊದೆ
ಪಾದಚಾರಿಗಳ ಸಂಚಾರಕ್ಕೆ ಸಂಕಷ್ಟ
Team Udayavani, Oct 16, 2022, 12:42 PM IST
ಮಹಾನಗರ: ನಗರ ಒಳ ರಸ್ತೆ, ಕೆಲವು ಮುಖ್ಯ ರಸ್ತೆಗಳ ಬದಿಗಳಲ್ಲಿ ಹುಲ್ಲು ಪೊದೆಗಳು ಆವರಿಸಿ ಕೊಂಡಿದ್ದು, ಸಾರ್ವ ಜನಿಕರ ಸುಗಮ ಓಡಾಟಕ್ಕಾಗಿ ಇವುಗಳನ್ನು ತೆರವುಗೊಳಿಸುವ ಅಗತ್ಯವಿದೆ.
ಒಂದೆಡೆ ಮಳೆಯಬ್ಬರ ಕಡಿಮೆಯಾಗಿದ್ದು, ಇನ್ನೊಂದೆಡೆ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳು ವಿಷಜಂತುಗಳ ಸಂಚಾರ ಹೆಚ್ಚಿರುವ ಕಾಲ. ಹೀಗಾಗಿ ರಸ್ತೆ ಬದಿಯ ಹುಲ್ಲು- ಪೊದೆಗಳನ್ನು ತತ್ಕ್ಷಣ ತೆರವುಗೊಳಿಸು ವುದು ಸೂಕ್ತ. ಕೆಲವು ಕಡೆಗಳಲ್ಲಿ ರಸ್ತೆಯ ಅಂಚಿನ ವರೆಗೆ ಪೊದೆಗಳು ಬೆಳೆದಿದ್ದು, ಸಾರ್ವಜನಿಕರು ರಸ್ತೆಯಲ್ಲೇ ನಡೆದು ಕೊಂಡು ಹೋಗಬೇಕಾದ ಸ್ಥಿತಿ ಇದೆ.
ರಾತ್ರಿ ಹೊತ್ತು ಅಪಾಯಕಾರಿ
ವಿಷ ಜಂತುಗಳು ಕತ್ತಲಾದ ಬಳಿಕ ಪೊದೆಗಳಿಂದ ಹೊರಬರುತ್ತವೆ. ಕೆಲವೆಡೆ ಬೀದಿ ದೀಪಗಳೂ ಇಲ್ಲ. ಹಾಗಾಗಿ ರಾತ್ರಿ ಹೊತ್ತು ನಡೆದುಕೊಂಡು ಹೋಗುವರಿಗೆ, ಮುಂಜಾನೆ ವಾಕಿಂಗ್, ಜಾಗಿಂಗ್ ಹೋಗುವವರಿಗೆ ರಸ್ತೆ ಬದಿಯಲ್ಲಿರುವ ಹುಲ್ಲುಪೊದೆಗಳು ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿದೆ.
ಸದ್ಯ ಬಹುತೇಕ ಕಡೆ ಹುಲ್ಲು ಕಟಾವು ಕೆಲಸಗಳು ಕಟಾವು ಯಂತ್ರದ ಮೂಲಕವೇ ನಡೆಯುತ್ತದೆ. ಇತ್ತೀಚೆಗೆ ದಸರಾ ಸಂದರ್ಭದಲ್ಲಿ ಕೆಲವೆಡೆ ಹುಲ್ಲು ಕಟಾವು ಮಾಡಲಾಗಿದೆ. ಆದರೆ ಹುಲ್ಲನ್ನು ತೆರವು ಮಾಡದೆ ಹಾಗೇ ರಸ್ತೆ ಬದಿಯಲ್ಲಿ ಬಿಡಲಾ ಗಿದೆ. ಇದರಿಂದ ಮಳೆ ಬಿದ್ದು ಒಣ ಹುಲ್ಲುಗಳು ಮತ್ತೆ ಚಿಗುರುತ್ತಿದೆ. ಮಳೆಗೆ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗುತ್ತಿದೆ.
ಹೆದ್ದಾರಿ ಬದಿಯಲ್ಲೂ ಇದೆ
ನಗರದ ವ್ಯಾಪ್ತಿಯ ಹೆದ್ದಾರಿ ಬದಿ ಯಲ್ಲೂ ಹುಲ್ಲುಗಳು ಬೆಳೆದಿವೆ. ಇತ್ತೀ ಚೆಗೆ ಪ್ರಧಾನಿ ನರೇಂದ್ರ ಮೋದಿಯ ವರ ಮಂಗಳೂರು ಕಾರ್ಯಕ್ರ ಮದ ಹಿನ್ನೆಲೆಯಲ್ಲಿ ನಂತೂರು- ಕೂಳೂರು- ಪಣಂಬೂರು ಹೆದ್ದಾರಿಯಲ್ಲಿ ತೆರವುಗೊಳಿಸಲಾಗಿತ್ತು.ಆದರೆ ಪಡೀಲ್, ಮರೋಳಿ ಸಹಿತ ಇತರೆಡೆಗಳಲ್ಲಿ ಹುಲ್ಲು ಪೊದೆಗಳು ಹಾಗೇ ಬೆಳೆದಿದ್ದು, ಅವುಗಳನ್ನೂ ಶೀಘ್ರ ತೆರವುಗೊಳಿಸಬೇಕಿದೆ.
ಡಿವೈಡರ್ಗಳಲ್ಲೂ ಪೊದೆ
ಕೆಲವು ರಸ್ತೆಗಳಲ್ಲಿ ಡಿವೈಡರ್ಗಳಲ್ಲಿ ಬೆಳೆಸಲಾದ ಗಿಡಗಳೂ ಪೊದೆಯಂತಾ ಗಿದ್ದು, ಇವುಗಳನ್ನೂ ಸಮರ್ಪಕವಾಗಿ ಕತ್ತರಿಸಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು.
ತೆರವಿಗೆ ಸೂಚನೆ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಹುಲ್ಲು ಪೊದೆಗಳನ್ನು ತೆರವುಗೊಳಿಸುವ ಕೆಲಸ ಕೆಲವು ವಾರ್ಡ್ಗಳಲ್ಲಿ ನಡೆದಿದೆ. ಎಲ್ಲಿ ಹೆಚ್ಚು ಆವರಿಸಿದೆಯೂ ಅಲ್ಲಿ ತೆರವುಗೊಳಿಸುವ ಸೂಚನೆ ನೀಡಲಾಗುವುದು. –ಜಯಾನಂದ ಅಂಚನ್, ಪಾಲಿಕೆ ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ
Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್ ಗಾಂಧಿ
Hampankatta: ಪಾರ್ಕಿಂಗ್ ಸಮಸ್ಯೆಗೆ ‘ಮಲ್ಟಿ ಲೆವೆಲ್’ ಉತ್ತರ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.