400 ಕೋಟಿಗೂ ಅಧಿಕ ಗಳಿಕೆ ಕಂಡ ʼಕಾಂತಾರʼ ಆಸ್ಕರ್ ರೇಸ್ ನಿಂದ ಹೊರಬೀಳಲು ಈ ಅಂಶವೇ ಕಾರಣವೆಂದ ನಿರ್ಮಾಪಕ

'ಕಾಂತಾರ-2ʼ ಆಸ್ಕರ್‌ ಅಥವಾ ಗೋಲ್ಡನ್‌ ಗ್ಲೋಬ್‌ ಗೆಲ್ಲಬಹುದು

Team Udayavani, Feb 2, 2023, 5:16 PM IST

400 ಕೋಟಿಗೂ ಅಧಿಕ ಗಳಿಕೆ ಕಂಡ ʼಕಾಂತಾರʼ ಆಸ್ಕರ್‌ ರೇಸ್‌ ಹೋಗದಿರಲು ಈ ಅಂಶವೇ ಕಾರಣವೆಂದ ನಿರ್ಮಾಪಕ

ಬೆಂಗಳೂರು: ಬಾಕ್ಸ್‌ ಆಫೀಸ್‌ ನಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ದೊಡ್ಡ ಗೆಲುವು ಕಂಡ ʼಕಾಂತಾರʼ ಸಿನಿಮಾ ಆಸ್ಕರ್‌ ರೇಸ್‌ ಗೆ ಅರ್ಹತೆ ಪಡೆದುಕೊಂಡರೂ, ಆಸ್ಕರ್‌ ಗೆ ನಾಮಿನೇಟ್‌ ಆಗದೇ ಇದ್ದದ್ದು ಅನೇಕರಿಗೆ ನಿರಾಶೆ ಮೂಡಿಸಿತ್ತು.

ಈಗಾಗಲೇ ಮುಂದಿನ 5 ವರ್ಷ ಸಿನಿಮಾರಂಗದಲ್ಲಿ 3000 ಕೋಟಿ ಬಂಡವಾಳ ಹಾಕಿರುವ  ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ರಂಗದಲ್ಲೂ ನಿರ್ಮಾಣದ ಹೆಜ್ಜೆಯನ್ನಿಟ್ಟಿದೆ.

ಎಲ್ಲರ ಮನ ಗೆದ್ದ ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಪ್ರತಿಷ್ಠಿತ ಆಸ್ಕರ್‌ ರೇಸ್‌ ಗೆ ಯಾಕೆ ನಾಮಿನೇಟ್‌ ಆಗಿಲ್ಲ. ಸಿನಿಮಾ ನಿಜಕ್ಕೂ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಗೊಳ್ಳದಿರಲು ಕಾರಣವೇನು ಎನ್ನುವುದರ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು ʼಇಂಡಿಯಾ ಟುಡೇʼ  ಜೊತೆ ಮಾತನಾಡಿದ್ದಾರೆ.

ಇದನ್ನೂ ಓದಿ: 500 ಹುಡುಗಿಯರ ಜೊತೆ ಪರೀಕ್ಷೆಗೆ ಕೂತ ಏಕೈಕ ವಿದ್ಯಾರ್ಥಿ: ಅಷ್ಟೂ ಹುಡುಗಿಯರನ್ನು ನೋಡಿ ಮೂರ್ಛೆ ಹೋದ.!

ಮೊದಲು ನಾವು ಬೇರಿನ ಅಂದರೆ ನಮ್ಮ ಸ್ಥಳೀಯ ಕಥೆಗಳನ್ನು ಜಗತ್ತಿಗೆ ಹೇಳಬೇಕು. ʼಕಾಂತಾರʼ ಹಾಗೂ ʼಆರ್‌ ಆರ್‌ ಆರ್‌ʼ ಎರಡೂ ಸಿನಿಮಾಗಳು ಇದರಲ್ಲಿ ಗೆದ್ದಿದೆ. ಕೋವಿಡ್‌ ನಿಂದ ಜನ ಎಲ್ಲಾ ಬಗೆಯ ಮನರಂಜನೆಯ ಕಥೆಯನ್ನು ಓಟಿಟಿಯಲ್ಲಿ ನೋಡಿದ್ದಾರೆ. ನಿರ್ದೇಶಕರು ಈಗ ಪ್ರೇಕ್ಷಕರು ಏನನ್ನ ನೋಡಿಲ್ವೋ ಅಂಥ ಕಥೆಯನ್ನು ತೆರೆ ಮೇಲೆ ತರಬೇಕು. ನಮ್ಮ ಸಂಸ್ಕೃತಿಯನ್ನು ಮೊದಲು ದಾಖಲು ಮಾಡಬೇಕು. ʼಕಾಂತಾರʼದಲ್ಲಿ ತುಳು ಸಂಸ್ಕೃತಿಯನ್ನು ದಾಖಲು ಮಾಡಿದ ಹಾಗೆ. ಜಗತ್ತಿಗೆ ಈಗ ʼಕಾಂತಾರʼದಲ್ಲಿನ ತುಳುನಾಡಿನ ಸಂಸ್ಕೃತಿ , ಸಂಪ್ರದಾಯ ಕರ್ನಾಟಕದ ಕರಾವಳಿ ಪ್ರದೇಶದೆಂದು ತಿಳಿದಿದೆ ಎಂದು ಹೇಳಿದ್ದಾರೆ.

ʼಆರ್‌ ಆರ್‌ ಆರ್‌ʼ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಕರ್‌, ಗೋಲ್ಡನ್‌ ಗ್ಲೋಬ್‌ ನಂತಹ ಪ್ರಶಸ್ತಿ ಸಮಾರಂಭದಲ್ಲಿ ಸದ್ದು ಮಾಡಿದೆ. ಹೊಂಬಾಳೆ ಕೂಡ ಪ್ರಶಸ್ತಿಗಳತ್ತ ಮುಂದೆ ನೋಡುತ್ತಿರಬಹುದೆನ್ನುವ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕರು, “ಹೌದು ʼಕಾಂತಾರʼದಿಂದ ನಾವು ಅದನ್ನು ನಿರೀಕ್ಷೆ ಮಾಡಿದ್ದೆವು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಪ್ರಚಾರ ಮಾಡಲು ಅಷ್ಟು ಸಮಯ ಸಾಕಾಗಲಿಲ್ಲ. ʼಆರ್‌ ಆರ್‌ ಆರ್‌ʼ ಸಿನಿಮಾ ನಮ್ಮ ಚಿತ್ರಕ್ಕಿಂತ ಬೇಗನೇ ರಿಲೀಸ್‌ ಆಯಿತು. ಅವರಿಗೆ ಪ್ರಚಾರಕ್ಕೆ ಒಳ್ಳೆಯ ಸಮಯ ಸಿಕ್ಕಿತ್ತು. ನಾವು ಕನಿಷ್ಠ ಪ್ರಶಸ್ತಿಯ ವಿಚಾರವಾಗಿ 6 ತಿಂಗಳು ಮೊದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಯೋಚಿಸಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ರಿಲೀಸ್‌ ಮಾಡಬೇಕಿತ್ತು. ಆ ಬಳಿಕ ಅಲ್ಲಿಂದ ಜನ ವೋಟ್‌ ಮಾಡುತ್ತಾರೋ ಇಲ್ವೋ ಆದರೆ ನಾವು ಸಿನಿಮಾವನ್ನು ರಿಲೀಸ್‌ ಮಾಡಬೇಕಿತ್ತು ಎಂದಿದ್ದಾರೆ.

ನಾವು ಹಿಂದಿನ ತಪ್ಪಿನಿಂದ ಪಾಠ ಕಲಿತುಕೊಂಡಿದ್ದೇವೆ. ಮುಂದೆ ಸಾಗುತ್ತಿದ್ದೇವೆ. ಖಂಡಿತ ಮುಂದೆ ಆಸ್ಕರ್‌ ಅಥವಾ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು ನಮ್ಮ ಚಿತ್ರಗಳಿಗೆ ಸಿಗಬೇಕು ಎನ್ನುವುದು ನಮ್ಮ ಇರಾದೆ ಎಂದಿದ್ದಾರೆ.

ʼಕಾಂತಾರ-2ʼ ಸಿನಿಮಾ ಖಂಡಿತ ಪ್ರಶಸ್ತಿ ಗೆಲ್ಲಬಹುದು ಎಂದು, ಹೇಳಿ ಸಿನಿಮಾಕ್ಕೆ ಮಾರ್ಕೆಟಿಂಗ್‌ ಅನ್ನೋದು ಕೂಡ ಮುಖ್ಯ ಎಂದಿದ್ದಾರೆ ನಿರ್ಮಾಪಕರು.ಸದ್ಯ ʼಕಾಂತಾರ-2ʼ ಸಿನಿಮಾದ ಲೋಕೇಷನ್‌ ಹಾಗೂ ಸ್ಕ್ರಿಪ್ಟಿಂಗ್‌ ಕೆಲಸಗಳು ಭರದಿಂದ ಸಾಗುತ್ತಿದೆ.

ಟಾಪ್ ನ್ಯೂಸ್

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Bank Of Bhagyalakshmi: ಬ್ಯಾಂಕ್‌ನತ್ತ ದೀಕ್ಷಿತ್‌ ಚಿತ್ತ

13-ragini-dance

Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್‌ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.