Grass: ಹುಲ್ಲು ತೃಣಮಾತ್ರವಲ್ಲ! ಪ್ರಪಂಚದಲ್ಲಿ 12,000 ಜಾತಿಯ ಹುಲ್ಲುಗಳಿವೆ…

ನಿರಂತರತೆಯಲ್ಲಿರುವ ಭೂಮಿ-ಹುಲ್ಲು ಹಳತರಲ್ಲಿರುವ ಹೊಸತನ್ನು ಸೂಸುತ್ತದೆ.

Team Udayavani, Aug 15, 2023, 4:45 PM IST

Grass: ಹುಲ್ಲು ತೃಣಮಾತ್ರವಲ್ಲ! ಪ್ರಪಂಚದಲ್ಲಿ 12,000 ಜಾತಿಯ ಹುಲ್ಲುಗಳಿವೆ…

ಅದೊ! ಹುಲ್ಲಿನ ಮಕಮಲ್ಲಿನ ಜೊಸಪಚ್ಚೆಯ ಜಮಖಾನೆ ಪಸರಿಸಿ ತಿರೆ ಮೈ ಮುಚ್ಚಿರೆ ಬೇರೆ ಬಣ್ಣವನೆ ಕಾಣೆ! ಕವಿಪುಂಗವ ಕುವೆಂಪು ಹಸಿರ ಹುಲ್ಲನ್ನು ವರ್ಣಿಸಿದ್ದು ಹೀಗೆ. ಜಾರ್ಜ್‌ ಬರ್ನಾರ್ಡ್‌ ಷಾ ಹೇಳಿದ್ದು – ಭೂಮಿಯ ಚರ್ಮವೇನಾದರೂ ಇದ್ದರೆ ಅದು ಹುಲ್ಲಂತೆ. ಆಹಾರದಿಂದ ಬಯೋಫ್ಯೂ ಯೆಲ್‌ ವರೆಗಿನ ಹಿಡಿತ ಹೊಂದಿರುವ ಹುಲ್ಲು ಬರಿಯ ಹುಲ್ಲಾಗಿ ಉಳಿದಿಲ್ಲ.

ಹುಲ್ಲು ಹೂ ಬಿಡುವ ಸಸ್ಯವರ್ಗದ ವೈವಿಧ್ಯಮಯ ಪ್ರಜಾತಿ. ಪ್ರಪಂಚದಲ್ಲಿ ಅಂದಾಜು 12,000 ಜಾತಿಯ ಹುಲ್ಲುಗಳಿವೆ. ಅದೆಷ್ಟು ಬಗೆಯ ಹುಲ್ಲನ್ನು ನೀವು ಗಮನಿಸಿದ್ದೀರಿ? ಮಜ್ಜಿಗೆ ಹುಲ್ಲು, ಲಾವಂಚ, ಗರಿಕೆ, ದರ್ಭೆ, ಚಪ್ಪರಿಕೆ, ಜೊಂಡು, ಚಾಪೆ ಹುಲ್ಲು, ಬಳುಕುವ ಹುಲ್ಲು, ಮುಳಿಹುಲ್ಲು, ಭತ್ತ-ಗೋಧಿ ಹುಲ್ಲು, ಟರ್ಫ್ ಕೆಂಟುಕಿ ಹುಲ್ಲು, ಗಾಲ್ಫ್ ಹಸಿರಿನ ಬರ್ಮುಡಾ ಹುಲ್ಲು, ರೇಶಿಮೆ ಹೂವಿನ ಪಂಪಾಸ್‌ ಹುಲ್ಲು ಹಾಗೂ ಹೆಸರಿಸಲಾಗದ ಇನ್ನೂ ಸಾವಿರಾರು. ಉದ್ಯಾನವನಗಳಲ್ಲಿ ಬೆಳೆಸುವ ಕಂಬಳಿಯ ನುಣುಪಿನ ಲಾನ್‌ ಹುಲ್ಲು ಇಂಚುಗಳಷ್ಟೆತ್ತರಕ್ಕೇ ಚಾಚಬಲ್ಲದು. ಚಾಪೆಯ ಹುಲ್ಲು, ಕಬ್ಬಿನ ಹುಲ್ಲು, ಬಿದಿರಿನ ಪ್ರಭೇದಗಳು ಆಕಾಶದೆತ್ತರಕ್ಕೂ ಬೆಳೆಯಬಲ್ಲವು. ಹುಲ್ಲು ಆಹಾರಧಾನ್ಯಗಳನ್ನು ಒದಗಿಸುವ ಪ್ರಮುಖ ಆಕರ. ಇಷ್ಟು ಮಾತ್ರವಲ್ಲದೇ ಅದು ಒದಗಿಸುವ ಜೀವನ ಪಾಠಗಳೂ ಅನೇಕ. ‌

ಕೃಶಕಾಯವಾಗಿದ್ದರೂ ಎಂತಹ ಕಾರ್ಪಣ್ಯಕ್ಕೂ ಹೊಂದಿಕೊಳ್ಳಿ ಎನ್ನುವುದನ್ನು ಹುಲ್ಲು ಕಲಿಸುತ್ತದೆ. ಗಾಳಿಬಂದಾಗ ತೂರಿಕೋ ಎನ್ನುವಂತೆ ಹುಲ್ಲು ಗಾಳಿಯಲ್ಲಿ ಬಾಗುತ್ತದೆ, ಆದರೆ ಅದು ಸೀಳುವುದಿಲ್ಲ. ಜೀವನದಲ್ಲಿ ಹೊಂದಿಕೊಳ್ಳುವುದು ಮುಖ್ಯ ಎಂದು ಇದು ನಮಗೆ ಕಲಿಸುತ್ತದೆ. ಜೀವನದಲ್ಲಿ ಸಂಭವಿಸುವ ಎಲ್ಲ ಘಟನೆಗಳನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಮ್ಮ ಪ್ರತಿಕ್ರಿಯೆಗಳನ್ನು ನಿಯಂತ್ರಿಸಬಹುದು. ನಾವು ತುಂಬಾ ಕಠಿನವಾಗಿದ್ದರೆ, ಜೀವನದ ಸವಾಲುಗಳಿಂದ ನಾವು ಸುಲಭವಾಗಿ ಆಘಾತಗೊಳ್ಳುತ್ತೇವೆ. ಹುಲ್ಲು ನಮ್ಯತೆಯ ಸಂಕೇತ.

ಎಂತಹ ಪ್ರತಿಕೂಲ ಪ್ರರಿಸ್ಥಿತಿಯಲ್ಲಿಯೂ ಸ್ಥಿತಿಸ್ಥಾಪಕರಾಗಿರಿ ಎನ್ನುವುದು ಹುಲ್ಲು ಹೇಳುವ ಇನ್ನೊಂದು ಪಾಠ. ಶೀತೋಷ್ಣಗಳನ್ನು ಸಹಿಸಿ ಕಠಿನ ಪರಿಸ್ಥಿತಿಗಳಲ್ಲಿಯೂ ಹುಲ್ಲು ಬದುಕಬಲ್ಲದು. ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥಿತಿಸ್ಥಾಪಕರಾಗಿ ಸ್ಥಿತಪ್ರಜ್ಞನಂತೆ ಸವಾಲುಗಳನ್ನು ಬೆನ್ನತ್ತಿ ಜಯಿಸುವ ಮಾರ್ಗವನ್ನು ಹುಲ್ಲು ಹೇಳುತ್ತದೆ. ಹುಲ್ಲು ತೆನೆಯುವುದು ಬದಲಾವಣೆಗೆ ತೆರೆದು ಮತ್ತೆ ಮೊಳೆಯುವ ಸಂಕೇತ. ಸತತ ನಿರಂತರತೆಯಲ್ಲಿರುವ ಭೂಮಿ-ಹುಲ್ಲು ಹಳತರಲ್ಲಿರುವ ಹೊಸತನ್ನು ಸೂಸುತ್ತದೆ. ಹುಲ್ಲಾ ಗು ಬೆಟ್ಟದಡಿ ಎನ್ನುವಂತೆ ತನ್ನತನಕ್ಕೆ ಸಂತುಷ್ಟರಾಗಿರುವ ಇನ್ನೊಂದು ವಿಷಯಕ್ಕೂ ಹುಲ್ಲು ಉದಾಹರಣೆ. ಹುಲ್ಲು ಹುಲ್ಲಿನಂತೆ ತೃಪ್ತ, ಸಂಪೂರ್ಣ. ನಮ್ಮಲ್ಲಿರುವುದರಿಂದ ನಾವು ತೃಪ್ತರಾಗಿರಬೇಕು ಎಂದು ಇದು ನಮಗೆ ಕಲಿಸುತ್ತದೆ. ಸಂತೋಷವಾಗಿರಲು ಪ್ರತಿಯೊಬ್ಬರೂ ಹೊಂದಿರುವ ಎಲ್ಲವನ್ನೂ ನಾವು ಹೊಂದಬೇಕಾಗಿಲ್ಲ.

ಸಾಮರಸ್ಯತೆ ಹುಲ್ಲು ಕಲಿಸುವ ಅಮೂಲ್ಯ ಮೌಲ್ಯ. ಹುಲ್ಲು ಒಂದು ದೊಡ್ಡ ಪರಿಸರ ವ್ಯವಸ್ಥೆಯ ಭಾಗವಾಗಿದೆ. ಇದು ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುತ್ತದೆ, ಮಣ್ಣನ್ನು ಹಿಡಿದಿಡುತ್ತದೆ. ಪರಸ್ಪರ ಮತ್ತು ನೈಸರ್ಗಿಕ ಪ್ರಪಂಚದೊಂದಿಗೆ ಸಂಪರ್ಕ ಹೊಂದಿರುವ ಹುಲ್ಲು ಮೇವಿನಿಂದ ಛಾವಣಿಯವರೆಗೂ ಹೊಂದಾಣಿಕೆಯ ತಣ್ತೀವನ್ನೇ ಹೇಳುತ್ತದೆ.

ಹುಲ್ಲು ಪರಿಸರ ವ್ಯವಸ್ಥೆಗೆ ವ್ಯಾಪಕವಾದ ಪ್ರಯೋಜನಗಳನ್ನು ಹೊಂದಿರುವ ಹಾಗೂ ಗಡುಸಾದ ಸಸ್ಯಗಳಾಗಿವೆ. ಪರಿಸರ ವ್ಯವಸ್ಥೆಯಲ್ಲಿ ಮಣ್ಣಿನ ಸ್ಥಿರೀಕರಣ, ಇಂಗಾಲದ ಸೀಕ್ವೆಸ್ಟ್ರೇಶನ್‌, ಆವಾಸಸ್ಥಾನ ಸೃಷ್ಟಿ, ಮಣ್ಣಿನ ಸವೆತ ನಿಯಂತ್ರಣ ಮತ್ತು ಜಾನುವಾರು ಆಹಾರದಲ್ಲಿ ಹುಲ್ಲು ನಿರ್ಣಾಯಕ ಪಾತ್ರವಹಿಸುತ್ತವೆ. ಹಾಗಾಗಿ ತೃಣ ಮಾತ್ರವಲ್ಲ, ಅಸಾಮಾನ್ಯ.

*ವಿಶ್ವನಾಥ ಭಟ್‌ , ಧಾರವಾಡ

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.