BJP ಯಿಂದ ಯತ್ನಾಳ್ ಗೆ ತೆಲಂಗಾಣ ಚುನಾವಣೆ ಹೊಣೆ
ಹಿಂದುತ್ವದ ಮೇಲೆಯೇ ಚುನಾವಣೆ ಎದುರಿಸಲಿದ್ದೇವೆ....
Team Udayavani, Aug 18, 2023, 7:15 PM IST
ವಿಜಯಪುರ :ನೆರೆಯ ತೆಲಂಗಾಣದಲ್ಲಿ ವಿಧಾನಸಭೆ ಚುನವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಕ್ಷ ಅಲ್ಲಿನ 8 ಕ್ಷೇತ್ರಗಳ ಜವಾಬ್ದಾರಿ ನೀಡಿದೆ. ನಾಳೆ ಹೈದ್ರಾಬಾದ್ನಲ್ಲಿ ತರಬೇತಿ ಇದ್ದು, ಇಂದೇ ತೆಲಂಗಾಣ ರಾಜ್ಯಕ್ಕೆ ತೆರಳುತ್ತಿದ್ದೇನೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. ಓವೈಸಿ ಶಾಡೋ ಸರಕಾರದಂತಿರುವ ಟಿಆರ್ ಎಸ್ ಪಕ್ಷದ ಸರಕಾರ ಅಲ್ಪಸಂಖ್ಯಾತರ ಹೆಸರಿನಲ್ಲಿ ಓಲೈಕೆ ಮಾಡುತ್ತ ಒಂದರ್ಥದಲ್ಲಿ ಮುಸ್ಲಿಂ ಸರಕಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದುತ್ವದ ಮೇಲೆ ನಿಂತಿರುವ ಬಿಜೆಪಿ, ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಹಿಂದುತ್ವದ ಮೇಲೆಯೇ ನಾವು ಚುನಾವಣೆ ಎದುರಿಸಲಿದ್ದೇವೆ. ಅಲ್ಲಿನ ಮತದಾರರು, ಓಲೈಕೆ ಸರಕಾರದ ವರ್ತನೆಯಿಂದ ರೋಸಿಹೋಗಿದ್ದು, ಬದಲಾವಣೆ ಬಯಸಿದ್ದಾರೆ ಎಂದರು.