Bantwal; ಹಿರಿಯ ರಂಗ ನಿರ್ದೇಶಕ ಮಂಜು ವಿಟ್ಲ ನಿಧನ
Team Udayavani, Sep 6, 2023, 6:04 PM IST
ಬಂಟ್ವಾಳ: ಹಿರಿಯ ಚಿತ್ರ ಕಲಾವಿದ, ರಂಗ ನಿರ್ದೇಶಕ ಮಂಜು ವಿಟ್ಲ(76) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿರುವ ಪುತ್ರಿನ ಮನೆಯಲ್ಲಿ ಸೆ. 6 ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಖ್ಯಾತ ನಿರೂಪಕರಾಗಿ ಗುರುತಿಸಿಕೊಂಡಿದ್ದ ಅವರು, ಚಿತ್ರಕಲೆ, ಮೂರ್ತಿ ಕಲೆ, ನಾಟಕ ನಿರ್ದೇಶನ, ರಂಗಸಜ್ಜಿಕೆ, ಪ್ರಸಾದನ, ಅಭಿನಯ, ಲೇಖನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದರು.
ಪಂಚಾಯತ್ ರಾಜ್ ರಾಷ್ಟ್ರೀಯ ತರಬೇತುದಾರರಾಗಿದ್ದ ಅವರು ಸಾವಿರಕ್ಕೂ ಅಧಿಕ ತರಬೇತಿ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದರು. ಜತೆಗೆ 500ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯ ಮಾಡಿದ್ದರು.