Fraud Case ಒಟಿಪಿ ರವಾನಿಸಿ 3.24 ಲಕ್ಷ ರೂ. ವಂಚನೆ
Team Udayavani, Sep 21, 2023, 12:18 AM IST
ಪಡುಬಿದ್ರಿ: ಎರ್ಮಾಳಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಸೈಬರ್ ಚೋರನೊಬ್ಬ ತಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದೇನೆ. ಎರ್ಮಾಳು ಕೆನರಾ ಬ್ಯಾಂಕ್ ಶಾಖೆಯ ನಿಮ್ಮ ಖಾತೆ ಸ್ತಂಭನವಾಗಿದೆ.
ಸರಿಪಡಿಸಲು ಮೊಬೈಲ್ಗೆ ಬರುವ ಒಟಿಪಿ ವಿವರ ತನಗೆ ನೀಡಿ ಎಂದು ಪುಸಲಾಯಿಸಿ ವ್ಯಕ್ತಿಯ ಖಾತೆಯಿಂದ 3.24 ಲಕ್ಷ ರೂ.ಗಳನ್ನು ಲಪಟಾಯಿಸಿದ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಹಣ ನಗದೀಕರಣದ ಕುರಿತಾದ ಮೆಸೇಜ್ ಬಂದಾಗಲೇ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಶಾಖೆಗೆ ಆಗಮಿಸಿ ಪರಿಶೀಲಿಸಿದಾಗ ಇದು ದೃಢಪಟ್ಟಿದೆ.
ಎಚ್ಚರಿಕೆ ಅಗತ್ಯ
ಬ್ಯಾಂಕ್ನ ಯಾರೇ ಅಧಿಕಾರಿಯಾಗಲೀ, ನೌಕರರಾಗಲೀ ಗ್ರಾಹಕನಿಗೆ ಒಟಿಪಿ ರವಾನಿಸಲಾರರು. ಮೊಬೈಲ್ ಬ್ಯಾಂಕಿಂಗ್ ಕುರಿತಾಗಿ ಸೈಬರ್ ಕಳ್ಳರು ಗ್ರಾಹಕರ ಹಣ ದೋಚಲು ನಾನಾ ಬಗೆಯ ದಾರಿಗಳನ್ನು ಕಂಡುಕೊಳ್ಳುತ್ತಿದ್ದು, ಗ್ರಾಹಕರು ಈ ಕುರಿತಾಗಿ ಎಚ್ಚರಿಕೆಯಿಂದ ಇರಬೇಕಿದೆ. ಯಾವುದೇ ಕಾರಣಕ್ಕೂ ಇಂತಹ ಜಾಲಗಳಿಗೆ ಬಲಿಯಾಗಬಾರದು ಎಂದು ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು
Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ
Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು