ʼSky Forceʼ ಮೂಲಕ ಭಾರತದ ಮೊದಲ ವೈಮಾನಿಕ ದಾಳಿಯ ಕಥೆ ಹೇಳಲು ಹೊರಟ ಅಕ್ಷಯ್ ಕುಮಾರ್
Team Udayavani, Oct 2, 2023, 1:06 PM IST
ಮುಂಬಯಿ: ಬಾಲಿವುಡ್ ನಲ್ಲಿ ʼಕಿಲಾಡಿʼ ಅಕ್ಷಯ್ ವರ್ಷಕ್ಕೆ ನಾಲ್ಕೈದು ಸಿನಿಮಾಗಳನ್ನು ಮಾಡುತ್ತಾರೆ. ಈ ವರ್ಷ ಅವರ ʼಓ ಮೈ ಗಾಡ್-2ʼ ಸಿನಿಮಾ ಹಿಟ್ ಆಗಿದೆ. ಅದರ ಬೆನ್ನಲ್ಲೇ ಅವರು ಸೋಮವಾರ (ಅ.2 ರಂದು) ಹೊಸ ಸಿನಿಮಾವೊಂದನ್ನು ಅಕ್ಷಯ್ ಕುಮಾರ್ ಘೋಷಿಸಿದ್ದಾರೆ.
ಅಕ್ಷಯ್ ಕುಮಾರ್ ಅವರ ʼ ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸಿಕ್ಯೂʼ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ನಡುವೆ ಅಕ್ಕಿ ಮತ್ತೊಂದು ಸಿನಿಮಾವನ್ನುಅನೌನ್ಸ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಗಾಂಧಿ ಜಯಂತಿಯ ದಿನ ಅಕ್ಷಯ್ ಭಾರತದ ಮೊದಲ ವೈಮಾನಿಕ ದಾಳಿಯ ಕಥೆಯನ್ನೊಳಗೊಂಡ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾಕ್ಕೆ ʼಸ್ಕೈ ಫೋರ್ಸ್ʼ(Sky Force) ಎಂದು ಟೈಟಲ್ ಇಡಲಾಗಿದೆ.
ಈ ಸಿನಿಮಾ ಪಾಕಿಸ್ತಾನದ ವಿರುದ್ಧ ಭಾರತದ ಚೊಚ್ಚಲ ಮತ್ತು ಮಾರಣಾಂತಿಕ ವೈಮಾನಿಕ ದಾಳಿಯನ್ನು ಕಾರ್ಯಗತಗೊಳಿಸುವ ಹಿಂದಿನ ಕಥೆಯನ್ನು ಒಳಗೊಂಡಿದೆ. ಅಂದಿನ ಪಾಕ್ ಅಧ್ಯಕ್ಷ ಮಹಮದ್ ಆಯೂಬ್ ಖಾನ್ ಹಾಗೂ ಭಾರತದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಧ್ವನಿಯೊಂದಿಗೆ ಆರಂಭವಾಗುವ ಗ್ಲಿಂಪ್ಸ್ ನಲ್ಲಿ ಸಿನಿಮಾದ ರಿಲೀಸ್ ಡೇಟ್ ನ್ನು ಚಿತ್ರತಂಡ ರಿವೀಲ್ ಮಾಡಿದೆ.
ಇದನ್ನೂ ಓದಿ: Thalapathy 68: ದಳಪತಿ – ವೆಂಕಟ್ ಪ್ರಭು ಚಿತ್ರಕ್ಕೆ ಟಾಲಿವುಡ್ ಬೆಡಗಿ ನಾಯಕಿ?
“ಇಂದು ಗಾಂಧಿ-ಶಾಸ್ತ್ರಿ ಜಯಂತಿಯಂದು ಇಡೀ ದೇಶವೇ ಹೇಳುತ್ತಿದೆ – ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಸಂಶೋಧನೆ” ಇದಕ್ಕಿಂತ ಒಳ್ಳೆಯ ದಿನ ʼಸ್ಕೈ ಫೋರ್ಸ್ʼ ಅನೌನ್ಸ್ ಮಾಡಲು ಬೇರೊಂದಿಲ್ಲ” ಎಂದು ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸಂದೀಪ್ ಕೆಲ್ವಾನಿ ಮತ್ತು ಅಭಿಷೇಕ್ ಕಪೂರ್ ನಿರ್ದೇಶನ ಮಾಡಲಿದ್ದು,ದಿನೇಶ್ ವಿಜನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಲಿದ್ದಾರೆ. ಅಕ್ಟೋಬರ್ 2, 2024 ರಂದು ಸಿನಿಮಾ ತೆರೆಗೆ ಬರಲಿದೆ.
ಈ ಸಿನಿಮಾದಲ್ಲಿ ನವನಟ ವೀರ್ ಪಹಾರಿಯಾ ಅವರು ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಅವರು ಕೂಡ ಪಾತ್ರವರ್ಗದಲ್ಲಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IMDb ಟಾಪ್ 100 ಇಂಡಿಯನ್ ಸೆಲೆಬ್ರಿಟಿ ಲಿಸ್ಟ್: ದೀಪಿಕಾ ನಂ.1, ಸ್ಥಾನ ಪಡೆದ ಕನ್ನಡದ ಈ ನಟ
Bollywood: ‘ಧಡಕ್ -2ʼ ಅನೌನ್ಸ್: ಮತ್ತೆ ಲವ್ ಸ್ಟೋರಿ ಹೇಳಲು ಹೊರಟ ಕರಣ್ ಜೋಹರ್
Anant-Radhika 2nd Pre-wed: ಐಷಾರಾಮಿ ಹಡಗು, 800 ಅತಿಥಿಗಳು.. ಏನಿರಲಿದೆ ಈ ಬಾರಿ ವಿಶೇಷ?
Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ
Deepika Padukone ತಾಯ್ತನ ಪ್ರಶ್ನಿಸಿದ ನೆಟ್ಟಿಗರಿಗೆ ಪತಿ ರಣವೀರ್ ತಿರುಗೇಟು
MUST WATCH
ಹೊಸ ಸೇರ್ಪಡೆ
8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ
ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್ ಹಾರಿಸಿದ ಉ.ಕೊರಿಯ
Arvind Kejriwal ಕಾಂಗ್ರೆಸ್ ಜತೆಗಿನ ಮೈತ್ರಿ ತಾತ್ಕಾಲಿಕ: ಕೇಜ್ರಿವಾಲ್
CM ಪುತ್ರ ಯತೀಂದ್ರ, ಸಚಿವ ಬೋಸರಾಜ್ಗೆ ಕಾಂಗ್ರೆಸ್ ಟಿಕೆಟ್?
ಲೈಂಗಿಕ ಕಿರುಕುಳ ಪ್ರಕರಣ; ಪ್ರಜ್ವಲ್ನಿಂದ ನಿರೀಕ್ಷಣ ಜಾಮೀನಿಗೆ ಅರ್ಜಿ