Kundapura: ಬೆಳೆ ವಿಮೆ: ಸಿಕ್ಕವರಿಗೆ ಬಂಪರ್‌, ಮಿಕ್ಕವರಿಗೆ ನಿರಾಧಾರ್‌


Team Udayavani, Dec 5, 2023, 5:56 PM IST

Kundapura: ಬೆಳೆ ವಿಮೆ: ಸಿಕ್ಕವರಿಗೆ ಬಂಪರ್‌, ಮಿಕ್ಕವರಿಗೆ ನಿರಾಧಾರ್‌

ಕುಂದಾಪುರ: ಹವಾಮಾನ ಆಧಾರಿತ ಬೆಳೆ ವಿಮೆ ಬಾಬ್ತು ಕೇಂದ್ರ ಸರಕಾರದ ಯೋಜನೆಯಲ್ಲಿ ವಿಮಾ ಕಂಪೆನಿಗಳ ಮೂಲಕ ತೋಟಗಾರಿಕೆ ಇಲಾಖೆ ರೈತರ ಬ್ಯಾಂಕ್‌ ಖಾತೆಗಳಿಗೆ ವಿಮಾ ಹಣ ಹಾಕಿದೆ. ಸಿಕ್ಕವರಿಗೆ ಬಂಪರ್‌, ಮಿಕ್ಕವರಿಗೆ ನಿರಾಧಾರ್‌ ಎಂಬಂತೆ ಮಂಜೂರಾದ ರೈತರಿಗೆ ವಿಮೆ ಹಣ ಬರೋಬ್ಬರಿ ದೊರೆತಿದೆ. ಇತರರು ಇನ್ನೂ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡದ ಕಾರಣ ಹಣ ಇಲಾಖೆಯಲ್ಲೇ ಬಾಕಿಯಾಗಿದೆ. ಕುಂದಾಪುರಕ್ಕೆ 10.2 ಕೋ.ರೂ., ಬೈಂದೂರಿಗೆ 4.3 ಕೋ. ರೂ., ಭಾಗಶಃ ಹೆಬ್ರಿಗೆ 35 ಲಕ್ಷ ರೂ. ಹಣ ಬಂದಿದೆ.

40 ಗ್ರಾಮಗಳಿಗೆ 14.91 ಕೋ.ರೂ. 2022-23 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೆಬ್ರಿ ತಾಲೂಕಿನ 2, ಬೈಂದೂರು ತಾಲೂಕಿನ 12, ಕುಂದಾಪುರ ತಾಲೂಕಿನ 26 ಗ್ರಾಮಗಳಿಗೆ ವಿಮಾ ಹಣ ಮಂಜೂರಾಗಿದೆ.

ಬೈಂದೂರು ತಾಲೂಕಿನ 12 ಗ್ರಾಮಗಳಲ್ಲಿ ಅಡಿಕೆ ಬೆಳೆಯ 1,064 ಪ್ರಕರಣಗಳಿಗೆ 3.80ಕೋ.ರೂ., ಕಾಳುಮೆಣಸು ಬೆಳೆಯ
423 ಪ್ರಕರಣಗಳಿಗೆ 49.37 ಲಕ್ಷ ರೂ., ಕುಂದಾಪುರದ 26 ಗ್ರಾಮಗಳಲ್ಲಿ ಅಡಿಕೆ ಬೆಳೆಯ 3,322 ಪ್ರಕರಣಗಳಿಗೆ 9.15 ಕೋ.ರೂ., ಕಾಳುಮೆಣಸು ಬೆಳೆಯ 833 ಪ್ರಕರಣಗಳಿಗೆ 1.10 ಕೋ.ರೂ., ಹೆಬ್ರಿಯ ಬೆಳ್ವೆ ಮತ್ತು ಮಡಾಮಕ್ಕಿ ಗ್ರಾಮಗಳಲ್ಲಿ ಅಡಿಕೆ ಬೆಳೆಯ 83 ಪ್ರಕರಣಗಳಿಗೆ 34.49 ಲಕ್ಷ ರೂ., ಕಾಳುಮೆಣಸು ಬೆಳೆಯ 7 ಪ್ರಕರಣಗಳಿಗೆ 1.44 ಲಕ್ಷ ರೂ. ವಿಮೆ ಹಣ ದೊರೆತಿದೆ.

ನಿರಾಧಾರ್‌ 
ಸಾಕಷ್ಟು ಬಾರಿ ಮಾಹಿತಿ ನೀಡಿಯೂ, ರೈತರ ನಿರಾಸಕ್ತಿ, ಮಾಹಿತಿ ಕೊರತೆಯ ಪರಿಣಾಮ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಆಗಿಲ್ಲ. ಇಂತಹ ತಾಂತ್ರಿಕ ಸಮಸ್ಯೆಯಿಂದಾಗಿ ಒಟ್ಟು 82 ಪ್ರಕರಣಗಳಲ್ಲಿ, 28.92 ಲಕ್ಷ ರೂ.ಗಳನ್ನು ರೈತರಿಗೆ ಪಾವತಿಸಲು ಸಾಧ್ಯವಾಗಿಲ್ಲ.

ಗ್ರಾಮವಾರು ಬೈಂದೂರು ತಾಲೂಕಿನ ಬಿಜೂರು 3.24 ಲಕ್ಷ ರೂ., ಬೈಂದೂರು ಪ.ಪಂ. 5.56 ಲಕ್ಷ ರೂ., ಗೋಳಿಹೊಳೆ 1.36 ಲಕ್ಷ ರೂ., ಹಳ್ಳಿಹೊಳೆ 2.6 ಕೋ.ರೂ., ಹೇರೂರು 9.67 ಲಕ್ಷ ರೂ., ಜಡ್ಕಲ್‌ 1.05 ಕೋ.ರೂ., ಕಾಲೊ¤àಡು 10.5 ಲಕ್ಷ ರೂ., ಕಂಬದಕೋಣೆ 2.19ಲಕ್ಷ ರೂ., ಕಿರಿಮಂಜೇಶ್ವರ 39 ಸಾವಿರ ರೂ., ಕೊಲ್ಲೂರು 21.91 ಲಕ್ಷ ರೂ., ನಾಡ 10.86ಲಕ್ಷ ರೂ., ಉಪ್ಪುಂದ 21 ಸಾವಿರ ರೂ. ಮಂಜೂರಾಗಿದೆ.

ಹೆಬ್ರಿ ತಾಲೂಕಿನ ಬೆಳ್ವೆ 17.91 ಲಕ್ಷ ರೂ., ಮಡಾಮಕ್ಕಿ 18.02 ಲಕ್ಷ ರೂ. ಮಂಜೂರಾಗಿದೆ. ಕುಂದಾಪುರ ತಾಲೂಕಿನ ಆಜ್ರಿ 3.41 ಕೋ.ರೂ., ಆಲೂರು 13.48 ಲಕ್ಷ ರೂ., ಅಮಾಸೆಬೈಲು 1.65 ಕೋ.ರೂ., ಅಂಪಾರು 52.25 ಲಕ್ಷ ರೂ.,ಬಸ್ರೂರು 66 ಸಾವಿರ ರೂ., ಬೇಳೂರು 58 ಸಾವಿರ ರೂ., ಚಿತ್ತೂರು 5.25 ಲಕ್ಷ ರೂ., ಗುಲ್ವಾಡಿ 7.5 ಲಕ್ಷ ರೂ., ಹಕ್ಲಾಡಿ 1.4 ಲಕ್ಷ ರೂ.,ಹಾಲಾಡಿ 11.82 ಲಕ್ಷ ರೂ., ಹಟ್ಟಿಯಂಗಡಿ 41 ಸಾವಿರ ರೂ., ಹೆಂಗವಳ್ಳಿ 23.07 ಲಕ್ಷ ರೂ., ಹೊಂಬಾಡಿ-ಮಂಡಾಡಿ 6.62 ಲಕ್ಷ ರೂ., ಹೊಸಂಗಡಿ 19.21 ಲಕ್ಷ ರೂ., ಇಡೂರು ಕುಂಜ್ಞಾಡಿ 7.91 ಲಕ್ಷ ರೂ., ಕರ್ಕುಂಜೆ 2.52 ಲಕ್ಷ ರೂ., ಕಾವ್ರಾಡಿ 4.16 ಲಕ್ಷ ರೂ., ಕೆದೂರು 3.5 ಲಕ್ಷ ರೂ.,
ಕೆರಾಡಿ 20.19 ಲಕ್ಷ ರೂ., ಕೊರ್ಗಿ 87 ಸಾವಿರ ರೂ., ಮೊಳಹಳ್ಳಿ 2.35 ಲಕ್ಷ ರೂ., ಶಂಕರನಾರಾಯಣ 69.73 ಲಕ್ಷ ರೂ., ಸಿದ್ದಾಪುರ 46.17 ಲಕ್ಷ ರೂ., ಉಳ್ಳೂರು 74- 1 ಕೋ.ರೂ., ವಂಡ್ಸೆ 1.27 ಲಕ್ಷ ರೂ., ಯಡಮೊಗೆ 1.43 ಕೋ.ರೂ. ಪಾವತಿಯಾಗಿದೆ.

ಬೆಳೆವಾರು
ಒಟ್ಟು ಅಡಿಕೆ ಬೆಳೆಯ 4,469 ಪ್ರಕರಣಗಳಿಗೆ 11.30ಕೋ. ರೂ., ಕಾಳುಮೆಣಸು ಬೆಳೆಯ 1,262 ಪ್ರಕರಣಗಳಿಗೆ 1.61ಕೋ.ರೂ. ಸೇರಿ ಒಟ್ಟು 5,731 ಪ್ರಕರಣಗಳಿಗೆ 14.91 ಕೋ.ರೂ. ರೈತರ ಖಾತೆಗೆ ನೇರ ಪಾವತಿಯಾಗಿದೆ. ಬೈಂದೂರಿನ 4, ಕುಂದಾಪುರದ 77 ಮಂದಿಗೆ ಹಣ ಪಾವತಿಯಾಗದೇ ಬಾಕಿಯಾಗಿದೆ.

ಆಧಾರ್‌ ಲಿಂಕ್‌  ಮಾಡಿದರೆ ದೊರೆಯುತ್ತದೆ
ಕುಂದಾಪುರ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 5,731 ಪ್ರಕರಣಗಳಿಗೆ 14.91 ಕೋ. ರೂ.ಗಳನ್ನು ರೈತರ ಖಾತೆಗೆ ನೇರ
ಪಾವತಿಸಲಾಗಿದೆ. 82 ಮಂದಿಗೆ ಪಾವತಿ ಬಾಕಿ ಇದೆ. ಆಧಾರ್‌ ಜೋಡಣೆಯ ತಾಂತ್ರಿಕ ಸಮಸ್ಯೆಗಳನ್ನು ವಿಮಾ ಕಂತನ್ನು
ಪಾವತಿಸಿದ ಬ್ಯಾಂಕ್‌ಗೆ ಭೇಟಿ ನೀಡಿ ಸರಿ ಪಡಿಸಿಕೊಳ್ಳಬೇಕು. ಬಾಕಿಯಾದ ಪಾವತಿ ರೈತರಿಗೆ ದೊರೆಯುತ್ತದೆ.
ಕೆ.ಜೆ.ನಿಧೀಶ್‌ ಹೊಳ್ಳ, ಸಹಾಯಕ
ನಿರ್ದೇಶಕ, ತೋಟಗಾರಿಕೆ ಇಲಾಖೆ, ಕುಂದಾಪುರ

*ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Siddapura ಪುಸಲಾಯಿಸಿ ವಿದ್ಯಾರ್ಥಿನಿ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Byndoor ಟಿ.ಸಿ. ವಿಷಯ: ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Fraud  Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

Fraud Case ಟೂರ್‌ ಪ್ಯಾಕೇಜ್‌ ಹೆಸರಿನಲ್ಲಿ ವಂಚನೆ; ದೂರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

9-davangere

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

8-doddanagudde

ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

raichur

Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.