Kunigal: ಮದುವೆ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ
ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಬಯಸಿದ್ದ ವಿದ್ಯಾರ್ಥಿನಿ
Team Udayavani, Dec 21, 2023, 10:43 AM IST
ಕುಣಿಗಲ್: ಇನ್ನೂ ಓದಬೇಕೆಂದು ಬಯಸಿದ್ದ ವಿದ್ಯಾರ್ಥಿನಿಗೆ ಮದುವೆ ಮಾಡಿಸಿದ್ದಕ್ಕೆ ಮನನೊಂದು ಆಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ಡಿಗೆರೆ ಗ್ರಾಮದಲ್ಲಿ ಡಿ.20ರ ಬುಧವಾರ ನಡೆದಿದೆ.
ತಾಲೂಕಿನ ಎಡಿಯೂರು ಹೋಬಳಿ ಸಿಡಿಲುಹಟ್ಟಿ ಗ್ರಾಮದ ನಿವಾಸಿ ಜಿ.ಟಿ.ರಕ್ಷಿತಾ (19) ಮೃತ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಘಟನೆಯ ವಿವರ: ರಕ್ಷಿತಾ ಕುಣಿಗಲ್ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಳೆದ ನ.31 ರಂದು ರಕ್ಷಿತಾ ತಾಯಿ ತನ್ನ ತಮ್ಮ ಸಂತೋಷನೊಂದಿಗೆ ರಕ್ಷಿತಾಳನ್ನು ಮದುವೆ ಮಾಡಿದರು.
ಆದರೆ ರಕ್ಷಿತಾ, ನಾನು ಇನ್ನೂ ಓದಬೇಕಾಗಿತ್ತು. ನನಗೆ ಮದುವೆ ಮಾಡಿಸಿದ್ದೀರ ಎಂದು ತಿಳಿಸುತ್ತಿದ್ದಳು ಎನ್ನಲಾಗಿದ್ದು, ಮತ್ತೊಂದು ಮಾಹಿತಿ ಪ್ರಕಾರ ರಕ್ಷಿತಾ ಆನಾರೋಗ್ಯದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಮಂಗಳವಾರ ರಕ್ಷಿತಾ ಮನೆಯಿಂದ ಹೊರ ಹೋದವಳು ಮತ್ತೆ ಮನೆಗೆ ವಾಪಸ್ಸಾಗಲಿಲ್ಲ. ಪೋಷಕರು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಬುಧವಾರ ಯಡ್ಡಿಗೆರೆ ಕೆರೆಯಲ್ಲಿ ರಕ್ಷಿತಾ ಶವ ಪತ್ತೆಯಾಗಿದೆ.
ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ
Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು
Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ