UV Fusion: ಬದುಕಿನ ಸೂತ್ರಕ್ಕೊಂದು ಪಾತ್ರದ ಆಯ್ಕೆ


Team Udayavani, Feb 20, 2024, 10:42 AM IST

2-drama-1

ಬದುಕಿನಲ್ಲಿ ಪಾತ್ರಗಳು ಎಷ್ಟು ಮುಖ್ಯವೋ, ಆಯ್ಕೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಕಾರಣ ಜಗತ್ತಿನಲ್ಲಿ ಎರಡು ರೀತಿ ನಟಿಸುವವರಿದ್ದಾರೆ. ಒಂದು ಬಣ್ಣ ಹಚ್ಚಿ ನಟಿಸುವವರು, ಎರಡನೆಯದು ಬಣ್ಣ ಹಚ್ಚದೇ ನಟಿಸುವವರು. ವ್ಯತ್ಯಾಸ ಇಷ್ಟೇ, ಮೊದಲನೆಯವರು ರಂಗದ ಮೇಲೆ ನಟಿಸಿದರೆ, ಎರಡನೆಯವರು ವ್ಯಕ್ತಿಗಳ ಬದುಕಿನಲ್ಲಿ ನಟಿಸುವ ಹೀನ ಮನಸ್ಥಿತಿ ಉಳ್ಳವರು.

ಜಗತ್ತು ವಿಶಾಲವಾಗಿ, ಅಷ್ಟೇ ವೇಗವಾಗಿ ಬದಲಾಗುತ್ತಾ ಹೋಗುತ್ತಿದೆ. ವಿಚಿತ್ರವೋ ವಿಶಿಷ್ಟವೋ ವಿಚಾರಗಳು, ಯೋಚನೆಗಳು, ಆಸೆ, ಆಚರಣೆಗಳು ಹೀಗೆ ಇನ್ನೂ ಹಲವು ವಿಷಯಗಳು ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತಿವೆ. ಹೀಗಿರುವಾಗ ಬದುಕಿನಲ್ಲಿ ವೇಷ ಮರೆಸಿಕೊಂಡು ಬರುವ ಅನೇಕ ಪಾತ್ರಗಳು ತಮ್ಮ ನಟನೆಯಲ್ಲಿ ನಾವೇ ಒಂದು ಕೈ ಮೇಲು ಅಂದುಕೊಂಡು ಮುಂದುವರೆಯುತ್ತದೆ. ಈ ಪಾತ್ರಗಳಿಗೆ ಸ್ನೇಹ-ಪ್ರೀತಿ, ಅಣ್ಣ-ಅಕ್ಕ, ತಂಗಿ-ತಮ್ಮ ಹೀಗೆ ನಾನಾ ಹೆಸರುಗಳಿವೆ ಎಂಬುವುದು ನಿಮಗೂ ತಿಳಿದಿರಬಹುದು.

ಹಾಗಿದ್ದರೆ ಈ ಎಲ್ಲ ಆಕಸ್ಮಿಕ ಆಗಮನದ ಪಾತ್ರಗಳು ಶಾಶ್ವತವೇ? ನಿಮ್ಮನ್ನು ನೀವು ಎಂದಾದರು ಪ್ರಶ್ನಿಸಿದ್ದೀರಾ? ಪ್ರಶ್ನಿಸಿಕೊಂಡಿದ್ದೇ ಆದಲ್ಲಿ ಎಲ್ಲವೂ ಸರಿ ಇದೆಯೇ? ಇಲ್ಲವಾದಲ್ಲಿ, ಎಡವಿದ್ದೆಲ್ಲಿ? ಅನ್ನುವ ನೂರಾರು ಪ್ರಶ್ನೆಗಳು ತಲೆತುಂಬಾ ಹರಿದಾಡಿದರೂ, ಪಾತ್ರಗಳು ಮಾತ್ರ ಹಾಯಾಗಿರುತ್ತವೆ ಬೆದರು ಬೊಂಬೆಯಂತೆ.

ಕೆಲವೊಮ್ಮೆ ನಾವೆಷ್ಟು ವಿಚಲಿತರಾಗುತ್ತೇವೆ ಎಂದರೆ ಪಾತ್ರಗಳಿಲ್ಲದೆ ಜೀವನವೇ ಮುಗಿದು ಹೋಯಿತು ಎನ್ನುವಷ್ಟು. ಅದೇಕೆ ಇನ್ನೊಬ್ಬರ ಮೇಲೆ ಅಷ್ಟೊಂದು ಅವಲಂಬನೆ ಎಂದು ತಿಳಿಯುವಷ್ಟರಲ್ಲಿ ಎಲ್ಲವೂ ಕತ್ತಲಾಗಿರುತ್ತದೆ. ಹಾಗೆಯೇ ಹೊರಬರುವಷ್ಟರಲ್ಲಿ ಎಲ್ಲರ ಕಣ್ಣಲ್ಲಿ ತಪ್ಪಿತಸ್ಥರಂತೆ ಬಿಂಬಿತರಾಗಿರುತ್ತೇವೆ.

ಬದುಕಿನಲ್ಲಿ ಪಾತ್ರಗಳು ಮುಖ್ಯ ಅನ್ನುವ ಸತ್ಯ ಇನ್ನಷ್ಟು ಕಹಿಯಾಗಿದೆ. ಪ್ರತಿಯೊಂದು ಹೆಜ್ಜೆಯಲ್ಲು ಒಂದೊಂದು ತೆರನಾದ ಪಾತ್ರಗಳು ಸುತ್ತುವರಿದು ನೆಲೆಯೂರಲು ಪ್ರಯತ್ನಿಸುತ್ತದೆ.

ಸನಿಹ ಸುಳಿಯುವ ಎಲ್ಲ ಪಾತ್ರಗಳು ಒಂದೊಳ್ಳೆ ನಿಶಾನೆ ನೀಡುತ್ತವೆ ಎಂದರೆ ತಪ್ಪು, ಹಾಗಂತ ಎಲ್ಲವೂ ತಪ್ಪು ಅನ್ನುವುದು ಕೂಡ ತಪ್ಪು. ಹಾಗಾಗಿ ಎಲ್ಲವೂ ಕೈ ಮೀರಿ ನಡೆಯುವ ಮುನ್ನ ಆಲೋಚಿಸುವುದು ಉತ್ತಮ. ಪ್ರತಿಯೊಂದು ಪಾತ್ರಗಳ ಆಯ್ಕೆ ನಮ್ಮ ಬದುಕಿಗೆ ಒಳಿತಾಗುವಂತೆ ಇರಲಿ, ಅದೇ ರೀತಿ ಆ ಪಾತ್ರಕ್ಕೂ ಒಳಿತಾಗಲಿ ಅನ್ನುವ ಹಾಗೆ ಇರಲಿ.

-ವಿಜಿತಾ ಅಮೀನ್‌

ಬಂಟ್ವಾಳ

ಟಾಪ್ ನ್ಯೂಸ್

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.