Ranchi Test ನಾಟಕೀಯ ತಿರುವು; ರಾಹುಲ್‌ ಲಭ್ಯರಿಲ್ಲ: ತಂಡಕ್ಕೆ ಮುಕೇಶ್‌ ವಾಪಸ್‌


Team Udayavani, Feb 22, 2024, 6:00 AM IST

1-rahul

ರಾಂಚಿ: ಟೀಮ್‌ ಇಂಡಿಯಾದ ಟೆಸ್ಟ್‌ ತಂಡ ಮತ್ತೂಂದು ನಾಟಕೀಯ ತಿರುವು ಪಡೆದಿದೆ. ರಾಂಚಿಯಲ್ಲಿ ನಡೆಯುವ 4ನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ ಎಂಬಂತಿದ್ದ ಕೆ.ಎಲ್‌. ರಾಹುಲ್‌ ಈಗ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಅವರು ತೊಡೆ ಸಂದು ನೋವಿನಿಂದ ಸಂಪೂರ್ಣ ಚೇತರಿಸಿ ಕೊಂಡಿಲ್ಲ ಎಂಬುದಾಗಿ ಬಿಸಿಸಿಐ ತಿಳಿಸಿದೆ.

ರಾಹುಲ್‌ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಷ್ಟೇ ಆಡಿದ್ದರು. ಇಲ್ಲಿ ಅವರ ಗಳಿಕೆ 86 ಮತ್ತು 22 ರನ್‌. ರಾಜ್‌ಕೋಟ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ಪ್ರಕಟನೆಯೊಂದನ್ನು ನೀಡಿದ ಬಿಸಿಸಿಐ, ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿರುವ ರಾಹುಲ್‌ ಶೇ. 90ರಷ್ಟು ಚೇತರಿಕೆ ಕಂಡಿದ್ದಾರೆ ಎಂದು ತಿಳಿಸಿತ್ತು. ರಾಂಚಿ ಟೆಸ್ಟ್‌ ವೇಳೆ ಸಂಪೂರ್ಣ ಫಿಟ್‌ನೆಸ್‌ಗೆ ಮರಳುವ ಅವರು ತಂಡಕ್ಕೆ ಮರಳಲಿ ದ್ದಾರೆ ಎಂಬ ರೀತಿಯಲ್ಲಿ ವರದಿಯಾಗಿತ್ತು. ಆದರೀಗ ರಾಹುಲ್‌ ರಾಂಚಿ ಟೆಸ್ಟ್‌ನಿಂದಲೂ ಬೇರ್ಪಡಲಿದ್ದಾರೆ. ಇದರೊಂದಿಗೆ ಅವರು ಈ ಸರಣಿಯ ಸತತ 3 ಟೆಸ್ಟ್‌ ಪಂದ್ಯಗಳನ್ನು ಕಳೆದುಕೊಂಡಂತಾಗುತ್ತದೆ. ಫಿಟ್‌ ಆದರಷ್ಟೇ ಧರ್ಮಶಾಲಾದ ಅಂತಿಮ ಟೆಸ್ಟ್‌ನಲ್ಲಿ ಆಡುವರು ಎಂದೂ ಬಿಸಿಸಿಐ ತಿಳಿಸಿದೆ.
ಬುಮ್ರಾಗೆ ರೆಸ್ಟ್‌
ನಿರೀಕ್ಷೆಯಂತೆ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ಆವರಿಗೆ ವಿಶ್ರಾಂತಿ ನೀಡಲಾಗಿದೆ. ಕಳೆದ ಕೆಲವು ಸಮಯದಿಂದ ಸತತವಾಗಿ ಆಡುತ್ತಲೇ ಇರುವ ಅವರಿಗೆ ಇದೊಂದು ಪುಟ್ಟ ಬ್ರೇಕ್‌ ಆಗಿದೆ. ಮುಂಬರುವ ಐಪಿಎಲ್‌ ಹಾಗೂ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಇಂಗ್ಲೆಂಡ್‌ ಎದುರಿನ ಸರಣಿಯಲ್ಲಿ ಈಗಾಗಲೇ 80.5 ಓವರ್‌ ಎಸೆದಿರುವ ಬುಮ್ರಾ, 13.64ರ ಸರಾಸರಿಯಲ್ಲಿ ಸರ್ವಾಧಿಕ 17 ವಿಕೆಟ್‌ ಕೆಡವಿದ್ದಾರೆ.

ಬುಮ್ರಾ ಸ್ಥಾನಕ್ಕೆ ಬಂಗಾಲದ ವೇಗಿ ಮುಕೇಶ್‌ ಕುಮಾರ್‌ ಅವರನ್ನು ಮರಳಿ ಕರೆಸಲಾಗಿದೆ. 2ನೇ ಟೆಸ್ಟ್‌ ಪಂದ್ಯದ ಬಳಿಕ ಮುಕೇಶ್‌ ಅವರನ್ನು ರಣಜಿ ತಂಡಕ್ಕೆ ಬಿಟ್ಟುಕೊಡಲಾಗಿತ್ತು. ಬಿಹಾರ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಅವರು 50 ರನ್ನಿಗೆ 10 ವಿಕೆಟ್‌ ಉಡಾಯಿಸಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು.

4ನೇ ಟೆಸ್ಟ್‌ಗೆ ಭಾರತ ತಂಡ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಜತ್‌ ಪಾಟಿದಾರ್‌, ಸರ್ಫರಾಜ್‌ ಖಾನ್‌, ದೇವದತ್ತ ಪಡಿಕ್ಕಲ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಧ್ರುವ ಜುರೆಲ್‌, ಕೆ.ಎಸ್‌. ಭರತ್‌, ಮೊಹಮ್ಮದ್‌ ಸಿರಾಜ್‌, ಮುಕೇಶ್‌ ಕುಮಾರ್‌. ಆಕಾಶ್‌ ದೀಪ್‌.

ಟಾಪ್ ನ್ಯೂಸ್

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

1-wewew

Dubai; 12 ವರ್ಷದ ಯತ್ನ: 8 ಕೋಟಿ ರೂ. ಗೆದ್ದ ಭಾರತೀಯ ಮಹಿಳೆ!

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.