Tour Circle: ಐತಿಹಾಸಿಕ ನಗರಿ ಶಿರಾ ಹಿನ್ನೋಟ


Team Udayavani, Feb 27, 2024, 7:30 AM IST

9-uv-fusion

ಐತಿಹಾಸಿಕ ಪರಂಪರೆಯಲ್ಲಿ ಮಿಂಚಿ ಮರೆಯಾದ ನಗರಗಳಲ್ಲಿ ಶಿರಾ ಕೂಡ ಒಂದು. ಅದೆಷ್ಟೋ ರಾಜ ಮನೆತನಗಳು, ಪಾಳೆಗಾರರು, ಮೊಘಲರು, ಮರಾಠರು, ಆದಿಲ್‌ ಶಾಹಿಗಳು, ಸುಲ್ತಾನರನ್ನು ನೋಡಿದಂತಹ ನಗರವಿದು.

ಶಿರಾ ಪ್ರಕೃತಿಯನ್ನು ವರ್ಣಿಸಲು ನಮ್ಮದು ಮಲೆನಾಡಲ್ಲ, ಬರದ ನಾಡು. ಇಲ್ಲಿ ಮಳೆಯಾಗುವುದೇ ಕಡಿಮೆ, ಇನ್ನು ಪ್ರಕೃತಿ, ಹಚ್ಚ ಹಸುರು ಎಂಬ ಮಾತೆಲ್ಲಿ. ಇಲ್ಲಿ ಕಾಣ ಸಿಗುವುದು ಬರೀ ಜಾಲಿ ಮರಗಳು ಮಾತ್ರ. ಸರಕಾರದಿಂದ ಬಿಡುಗಡೆಯಾದ ಬರದ ತಾಲೂಕುಗಳಲ್ಲಿ ಶಿರಾದು ಮೇಲುಗೈ.

ಐತಿಹಾಸಿಕ ಪರಂಪರೆ

ರತ್ನಗಿರಿಯ ಪಾಳೆಗಾರನಾದ ರಂಗಪ್ಪ ನಾಯಕನು ಶಿರಾ ಪ್ರದೇಶದಲ್ಲಿ ಸಂಚರಿಸುವಾಗ ಮೊಲವೊಂದು ನಾಯಿಗಳನ್ನು ಎದುರಿಸುತ್ತಿರುವುದನ್ನು ಕಾಣುತ್ತಾನೆ. ಈ ಘಟನೆಯನ್ನು ಕಂಡ ಮೇಲೆ ವೀರತನದ ಮಣ್ಣು ಎಂದು ನಗರವನ್ನು ಕಟ್ಟಲು ನಿರ್ಣಯಿಸುತ್ತಾನೆ. ದೇವಣ, ಸಿರಿಯಣ ಎಂಬುವವರ ಸಹಾಯ ತೆಗೆದುಕೊಂಡು ಕಟ್ಟಲು ಶುರು ಮಾಡುತ್ತಾನೆ. ಕೋಟೆ ಕಟ್ಟುವ ಸಮಯದಲ್ಲಿ ಹೇರಳವಾದ ಸಂಪತ್ತು ಸಿಕ್ಕಿ ಕೋಟೆ ನಿರ್ಮಾಣವಾಗುತ್ತದೆ.

ಅಂದಿನಿಂದ ರಂಗಪ್ಪ ನಾಯಕನು ಕಸ್ತೂರಿ ರಂಗಪ್ಪ ನಾಯಕ ಎಂಬ ಬಿರುದು ಪಡೆಯುತ್ತಾನೆ. 15ನೇ ಶತಮಾನದಲ್ಲಿ ಈ ಕೋಟೆಯು ನಿರ್ಮಾಣವಾಯಿತು ಎಂದು ಇತಿಹಾಸಕಾರರು ತಿಳಿಸಿಕೊಟ್ಟಿದ್ದಾರೆ. ಕೋಟೆಯು ವಿವಿಧ ಸಂರಕ್ಷಣ ವಿಧಾನದಿಂದ ನಿರ್ಮಿಸಿದ್ದಾರೆ. ಮುಂದೆ ಈ ಕೋಟೆಯನ್ನು ದಿಲಾವರ್‌ ಖಾನ್‌ನು ಅಭಿವೃದ್ಧಿ ಮಾಡುತ್ತಾನೆ. ಈ ಕೋಟೆಯೇ ಟಿಪ್ಪುಸುಲ್ತಾನ್‌ ಶ್ರೀರಂಗಪಟ್ಟಣದಲ್ಲಿ ಕಟ್ಟಿದ ಕೋಟೆಗೆ ಸ್ಫೂರ್ತಿ ಎನ್ನುತ್ತಾರೆ.

ಪ್ರೇಕ್ಷಣಿಯ ಸ್ಥಳಗಳು

ಶಿರಾ ತಾಲೂಕಿನ ಪ್ರಮುಖ ಆಕರ್ಷಣೆ ಎಂದರೆ ತಪ್ಪಿಲ್ಲ. ಅನೇಕ ರಾಷ್ಟ್ರಗಳಿಂದ ಇಲ್ಲಿಗೆ ಬಂದು ತಮ್ಮ ವಂಶಾಭಿವೃದ್ಧಿ ಮಾಡುತ್ತವೆ. ಈ ಸ್ಥಳವನ್ನು 1999ರಲ್ಲಿ ಪಕ್ಷಿಧಾಮವೆಂದು ಸರಕಾರವು ಗುರುತಿಸಿತು. ರಾಜ್ಯದ 2ನೇ ದೊಡ್ಡ ಬಣ್ಣದ ಕೊಕ್ಕರೆಗಳ ಸ್ಥಳವಾಗಿದೆ. ಮಾಗೋಡು ಹೂವಿನ ತೇರು, ಸ್ಪಟಿಕಪುರಿ ಕಲ್ಲುಗಾಲಿ ರಥ, ಮರಡಿ ಗುಡ್ಡ, ಕಳುವರಹಳ್ಳಿ ಜುಂಜಪ್ಪ, ಮಲ್ಲಿಕ್‌ ರೆಹನ್‌ ದರ್ಗಾ, ಕಸ್ತೂರಿ ರಂಗಪ್ಪ ನಾಯಕ ಕೋಟೆ ಇನ್ನು ಮುಂತಾದ ಐತಿಹಾಸಿಕ ಸ್ಥಳಗಳು, ದೇವಾಲಯಗಳು, ಶಾಸನಗಳು, ಪ್ರೇಕ್ಷಣೀಯ ಸ್ಥಳಗಳನ್ನು ಕಾಣಬಹುದಾಗಿದೆ.

ನಾಡೋಜ ಬರಗೂರರು  ಈ ತಾಲೂಕಿನ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.  ಇವರ ಅನೇಕ ಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣ ನಡೆದಿದೆ. ಇಲ್ಲಿ ಆಚರಿಸುವ ವೈಭವಯುತ ಜಾತ್ರೆ ಎಂದರೆ ಅದು ಕಂಬದ ರಂಗಸ್ವಾಮಿ ಜಾತ್ರಾ ಮಹೋತ್ಸವ ಮತ್ತು ತೇರಿನ ಉತ್ಸವವಾಗಿದೆ. ಒಂದು ಕಾಲದ ಐತಿಹಾಸಿಕ ನಗರವಾದ ಶಿರಾ ಈಗ ಸಂಪೂರ್ಣ ಬದಲಾಗಿ ಆಧುನೀಕರಣದ ಗಾಳಿ ಸೋಕುತ್ತಿದೆ.

ಇಲ್ಲಿರುವ ಪಕ್ಷಿಧಾಮಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಅಧಿಕವಾಗುತ್ತಿದ್ದು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರ ಕೂಡ ಸಂಪೂರ್ಣ ನೆರವು ನೀಡುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶಿರಾ ಪ್ರಚಲಿತವಾದರೆ ಇಲ್ಲಿನ ಬಹುತೇಕ ವ್ಯವಸ್ಥೆಗಳು ಅಭಿವೃದ್ಧಿ ಕಾಣುವುದರಲ್ಲಿ ಅನುಮಾನ ಇಲ್ಲ ಎನ್ನಬಹುದು.

-ಲೋಕೇಶ್‌ ಸೂರಿ

ಶಿರಾ

ಟಾಪ್ ನ್ಯೂಸ್

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

3 students of Indian origin passed away in Georgia

Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು

ಎನ್‌ಇಪಿ ರದ್ದು, ರಾಜಕೀಯ ಪ್ರೇರಿತ: ಬೊಮ್ಮಾಯಿ

Bidar; ಎನ್‌ಇಪಿ ರದ್ದು ರಾಜಕೀಯ ಪ್ರೇರಿತ: ಬೊಮ್ಮಾಯಿ

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.