![malpeKasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು](https://www.udayavani.com/wp-content/uploads/2024/06/malpe-1-415x234.jpg)
Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ
ನಿನ್ನೆ ಗಂಡು-ಇಂದು ಹೆಣ್ಣು... ಗ್ರಾಮದಲ್ಲಿ 24 ಗಂಟೆ ಅಂತರದಲ್ಲಿ ಎರಡನೇ ಹುಲಿ ಸೆರೆ
Team Udayavani, May 6, 2024, 9:17 PM IST
![1-wqeeqw](https://www.udayavani.com/wp-content/uploads/2024/05/1-wqeeqw-620x358.jpg)
ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಹಣ್ಣಿ ತೋಟದಲ್ಲಿ ಸೇರಿಕೊಂಡಿದ್ದ ಮೂರು ವರ್ಷ ಪ್ರಾಯದ ಹೆಣ್ಣು ಹುಲಿಯೊಂದು ಸೆರೆಯಾಗಿದೆ.
ಉದ್ಯಾನದಂಚಿನ ಮಳಲಿ ಗ್ರಾಮದ ಸುಬ್ರಮಣಿ ಎಂಬುವವರ ಹಣ್ಣಿನ ತೋಟದಲ್ಲಿ ಹುಲಿ ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತತ್ ಕ್ಷಣವೇ ಕಾರ್ಯಪ್ರವೃತ್ತರಾದ ಅಂತರೆಸಂತೆ ವಲಯದ ಅರಣ್ಯಸಿಬ್ಬಂದಿಗಳು ದೌಡಾಯಿಸಿ ಹುಲಿ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮುಖ್ಯ ವನ್ಯಜೀವಿ ಪರಿಪಾಲರ ನಿರ್ದೇಶನದಂತೆ ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ, ಎಚ್.ಡಿ.ಕೋಟೆ ಡಿಸಿಎಫ್. ಅಭಿಷೇಕ್, ಎಸಿಎಫ್ ರಂಗಸ್ವಾಮಿ ಹಾಗೂ ನಾಗರಹೊಳೆ ಆನೆಪ್ರಭಾರಕರಾದ ಡಾ.ಎಚ್.ರಮೇಶ್ ಮಾರ್ಗದರ್ಶನದಲ್ಲಿ ಕುಮ್ಕಿ ಆನೆಗಳಾದ ಮಹೇಂದ್ರ ಮತ್ತು ಭೀಮ ಆನೆಗಳೊಂದಿಗೆ ಸಿಬ್ಬಂದಿಗಳು ಹುಲಿ ಆಶ್ರಯ ಪಡೆದಿದ್ದ ತೋಟವನ್ನು ಸುತ್ತುವರೆದರು.
ಸಿಬ್ಬಂದಿಗಳ ತಂಡ ಕುಮ್ಕಿ ಆನೆಗಳೊಂದಿಗೆಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯಲಾಯಿತು.ನಿನ್ನೆಯಷ್ಟೆ ಗಂಡು ಹುಲಿಯನ್ನು ಬಾಳೆ ತೋಟದಲ್ಲಿ ಸೆರೆ ಹಿಡಿದು ಬನ್ನೇರು ಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು.
ಸೆರೆ ಸಿಕ್ಕ ಹುಲಿಯ ಆರೋಗ್ಯ ತಪಾಸಣೆ ನಡೆಸಿ, ಮುಖ್ಯ ವನ್ಯಜೀವಿಪರಿಪಾಲಕರ ನಿರ್ದೇಶನದಂತೆ ಮತ್ತೆ ಅರಣ್ಯಕ್ಕೆ ಸೇರಿಸಲಾಯಿತೆಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಚ್.ಡಿ.ಕೋಟೆ ಡಿಸಿಎಫ್. ಅಭಿಷೇಕ್, ನಾಗರಹೊಳೆ ಆನೆಪ್ರಭಾರಕರಾದ ಡಾ.ಎಚ್.ರಮೇಶ್, ಆರ್.ಎಫ್.ಓ.ಗಳಾದ ಭರತ್ ತಳವಾರ್, ಎಸ್.ಡಿ.ಮಧು, ಕೆ.ಎನ್.ಹರ್ಷಿತ್, ಪೂಜಾಯಾಲಿಗಾರ್, ರಂಜನ್, ಡಿ.ಆರ್.ಎಫ್.ಓ.ಗಳು, ದುಬಾರೆ,ಅಂತರಸಂತೆ ಅರಣ್ಯ ಸಿಬ್ಬಂದಿ, ಎಸ್.ಟಿಎಫ್ ತಂಡ, ಅಂತರ ಸಂತೆ ಠಾಣೆ ಪೊಲೀಸರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
![malpeKasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು](https://www.udayavani.com/wp-content/uploads/2024/06/malpe-1-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-dharwad](https://www.udayavani.com/wp-content/uploads/2024/06/1-dharwad-150x84.jpg)
Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!
![renukaacharya](https://www.udayavani.com/wp-content/uploads/2024/06/renukaacharya-1-150x100.jpg)
BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ
![ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/06/maski-150x90.jpg)
ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
![Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ](https://www.udayavani.com/wp-content/uploads/2024/06/banuprakash-150x84.jpg)
Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ
![ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ](https://www.udayavani.com/wp-content/uploads/2024/06/timmapura-150x84.jpg)
ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.