ದ್ರಾಕ್ಷಿ ಸೌಂದರ್ಯದ ಖಜಾನೆ


Team Udayavani, Feb 3, 2017, 3:45 AM IST

Drakshe-facemask.jpg

ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿಯೇ ಇರಲಿ ರುಚಿಯೂ ಚೆನ್ನ , ಆರೋಗ್ಯಕ್ಕೂ ಉತ್ತಮ. ಜೊತೆಗೆ ಹಲವು ಸೌಂದರ್ಯವರ್ಧಕ ಗುಣಗಳನ್ನು ಹೊಂದಿರುವುದರಿಂದ ನಿತ್ಯೋಪಯೋಗಿ “ಕಾಸೆ¾ಟಿಕ್‌’ ಗಳ ರೀತಿಯಲ್ಲಿ ನೈಸರ್ಗಿಕವಾಗಿ ಮನೆಯಲ್ಲಿಯೇ ದ್ರಾಕ್ಷಿಗಳನ್ನು ಉಪಯೋಗಿಸಿ ಸೌಂದರ್ಯ ವರ್ಧಿಸಬಹುದು. ಸೌಂದರ್ಯ ರಕ್ಷಿಸಿಕೊಳ್ಳಬಹುದು.

. ತಾಜಾ ದ್ರಾಕ್ಷಿ ಹಣ್ಣುಗಳು ಹಲವು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು , ಫೈಟೋ ನ್ಯೂಟ್ರಿಯೆಂಟ್‌ಗಳಿಂದಲೂ ಸಮೃದ್ಧವಾಗಿದೆ.

6-8 ಹಸಿದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು ಅರೆದು ಸ್ವಲ್ಪ ಗುಲಾಬಿ ಜಲದೊಂದಿಗೆ ಮುಖಕ್ಕೆ ಲೇಪಿಸಬೇಕು. 20 ನಿಮಿಷದ ಬಳಿಕ ತೊಳೆಯಬೇಕು. ಇದರಿಂದ ಒಣಚರ್ಮ, ಒರಟು ಚರ್ಮ ನಿವಾರಣೆಯಾಗುತ್ತದೆ. ಚರ್ಮದ ಮೃದುತ್ವ ಹಾಗೂ ತಾಜಾತನ ವೃದ್ಧಿಯಾಗುತ್ತದೆ.

. ಒಣದ್ರಾಕ್ಷಿಗಳಲ್ಲಿ ಚರ್ಮದ ಉರಿಯೂತ ನಿವಾರಕ ಗುಣವಿರುವುದರಿಂದ ಇದನ್ನು ಮೊಡವೆಗಳಿಗೆ ಲೇಪಿಸಿದರೆ ಗುಣಕಾರಿ.

ವಿಧಾನ: 10-15 ಒಣದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು 1/4 ಕಪ್‌ ನೀರಿನಲ್ಲಿ ನೆನೆಸಬೇಕು. ನಂತರ ಅರ್ಧ ಗಂಟೆಯ ಬಳಿಕ ಚೆನ್ನಾಗಿ ಅರೆದು ಪೇಸ್ಟ್‌ ತಯಾರಿಸಬೇಕು. ಇದಕ್ಕೆ ಸ್ವಲ್ಪ ಜೇನು ಬೆರೆಸಿ ಇಡೀ ಮುಖಕ್ಕೆ ತೆಳ್ಳಗೆ ಲೇಪಿಸಬೇಕು. ಮೊಡವೆ ಇರುವ ಭಾಗದಲ್ಲಿ ದಪ್ಪ ಪದರದಂತೆ ಲೇಪಿಸಿ 1/2 ಗಂಟೆಯ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಇದರಿಂದ ಇಡೀ ಮೊಗದ ಕಾಂತಿ ವರ್ಧಿಸುವುದು ಮಾತ್ರವಲ್ಲ, ಮೊಡವೆಯು ಮಾಯುತ್ತದೆ ಹಾಗೂ ಕಲೆ ನಿವಾರಕವೂ ಹೌದು.

ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಲೇಪಿಸಬಹುದು. ಶ್ವೇತವರ್ಣ ವೃದ್ಧಿಗೆ ಕಪ್ಪು ದ್ರಾಕ್ಷಿÒಯ ಮಾಸ್ಕ್ ಚರ್ಮ ಬಿಳಿಯಾಗಲು ಈ ಮಾಸ್ಕ್ ಬಹಳ ಪರಿಣಾಮಕಾರಿ. 1/4 ಕಪ್‌ ಕಪ್ಪು ದ್ರಾಕ್ಷಿಯನ್ನು ಅರೆದು ಅದಕ್ಕೆ 2 ಚಮಚ ನೀರಿನಲ್ಲಿ ಕರಗಿಸಿದ ಕೇಸರಿಯ ದಳ (10-12)ಗಳನ್ನು ಬೆರೆಸಬೇಕು. ಒಂದು ಚಮಚ ಜೇನು, 2 ಚಮಚ ಆಲೂಗಡ್ಡೆಯ ರಸ, 1/2 ಚಮಚ ಅರಸಿನ, 1 ಚಮಚ ಚಂದನ ಬೆರೆಸಿ ಪೇಸ್ಟ್‌ ತಯಾರಿಸಬೇಕು.

ಇದನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಿ 20 ನಿಮಿಷಗಳ ಬಳಿಕ ತೊಳೆಯಬೇಕು. ಇದರಿಂದ ಮುಖ ಶುಭ್ರ ಹಾಗೂ ಮೃದು ಮತ್ತು ಬಿಳಿಯಾಗುತ್ತದೆ. ಕಲೆ ನಿವಾರಕವೂ ಹೌದು.

ದ್ರಾಕ್ಷಿಯಲ್ಲಿ ಅಧಿಕ ಫ್ಲೇವನಾಯ್ಡ ಗಳು ಇರುವುದರಿಂದ ಈ ರೀತಿಯಲ್ಲಿ ಮುಖಕ್ಕೆ ಫೇಸ್‌ಮಾಸ್ಕ್ ಲೇಪಿಸುವುದರಿಂದ ಮುಖ ಬಿಳಿಯಾಗುತ್ತದೆ ಹಾಗೂ ಕಲೆಯು ನಿವಾರಣೆಯಾಗಿ ಕಾಂತಿ ವರ್ಧಿಸುತ್ತದೆ.

1/2 ಕಪ್‌ ಹಸಿದ್ರಾಕ್ಷೆ ಮತ್ತು 10 ನೆನೆಸಿದ ಒಣದ್ರಾಕ್ಷಿÒಗಳನ್ನು ಮಿಕ್ಸರ್‌ನಲ್ಲಿ ತಿರುವಿ ಜ್ಯೂಸ್‌ ತಯಾರಿಸಿ ಅದಕ್ಕೆ 1 ಚಮಚ ಜೇನು ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದೂ ಮುಖದ ಬಿಳಿ ವರ್ಣ ಕಾಂತಿ ವರ್ಧಿಸುತ್ತದೆ. ಚರ್ಮ ಸ್ನಿಗ್ಧವಾಗುತ್ತದೆ. ಮೊಡವೆ ನಿವಾರಕವೂ ಹೌದು.

ಜಿಡ್ಡುನಿವಾರಕ ದ್ರಾಕ್ಷಿ-ಮುಲ್ತಾನಿ ಮಿಟ್ಟಿ ಫೇಸ್‌ಪ್ಯಾಕ್‌
ಕಪ್ಪು ತಾಜಾ ದ್ರಾಕ್ಷೆಗಳನ್ನು ಅರೆದು 5 ಚಮಚದಷ್ಟು ತೆಗೆದುಕೊಂಡು ಅದಕ್ಕೆ 2 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ತುದಿ ಬೆರಳುಗಳಿಂದ ಮಾಲೀಶು ಮಾಡಿ ಲೇಪಿಸಿ ಫೇಸ್‌ಪ್ಯಾಕ್‌ ಮಾಡಬೇಕು. ಅರ್ಧ ಗಂಟೆಯ ಬಳಿಕ ಬಿಸಿನೀರಿನಿಂದ ಮುಖ ತೊಳೆದರೆ ಅಧಿಕ ಜಿಡ್ಡು, ಕೊಳೆ ನಿವಾರಣೆಯಾಗಿ ಮುಖ ಶುಭ್ರ ಹಾಗೂ ಹೊಳಪಿನಿಂದ ಕೂಡಿರುತ್ತದೆ.

ಗ್ರೇಪ್‌ ಸðಬ್‌
ತಾಜಾ ಕಪ್ಪು ದ್ರಾಕ್ಷಿಗಳನ್ನು ಅರ್ಧಕ್ಕೆ ಕತ್ತರಿಸಿ, ಬೀಜ ತೆಗೆಯಬೇಕು. ಅದರ ಮೇಲೆ ಸಕ್ಕರೆಯನ್ನು ಚಿಮುಕಿಸಿ ಅದನ್ನು ಬ್ಲ್ಯಾಕ್‌ ಹೆಡ್ಸ್‌ , ವೈಟ್‌ ಹೆಡ್ಸ್‌ ಇರುವ ಭಾಗದಲ್ಲಿ ಮೃದುವಾಗಿ ಮಾಲೀಶು ಮಾಡಬೇಕು. ತದನಂತರ ಅದೇ ಭಾಗದಲ್ಲಿ 10 ನಿಮಿಷ ಇಟ್ಟು , ಈ ಅರ್ಧ ಕತ್ತರಿಸಿದ ದ್ರಾಕ್ಷಿಗಳನ್ನು ಮುಖದಿಂದ ತೆಗೆದು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಈ ರೀತಿ ನಿತ್ಯ ಮುಖಕ್ಕೆ ದ್ರಾಕ್ಷಿಯ ಸðಬ್‌ ಬಳಸಿದರೆ 2-3 ವಾರಗಳಲ್ಲಿ ಬ್ಲ್ಯಾಕ್‌ ಹೆಡ್ಸ್‌ ಹಾಗೂ ವೈಟ್‌ ಹೆಡ್ಸ್‌ ನಿವಾರಣೆಯಾಗುತ್ತದೆ.

ನಿತ್ಯ ಒಣದ್ರಾಕ್ಷಿ 10-12 ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚರ್ಮದ ತೊಂದರೆ, ರೋಗಗಳಲ್ಲಿ ಶಮನಕಾರಿ ಹಾಗೂ ಕಾಂತಿವರ್ಧಕವಾಗಿದೆ.

– ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.