ಕಳಸದ ಕಳಸೇಶ್ವರ


Team Udayavani, Feb 18, 2017, 12:39 PM IST

1004.jpg

    ಚಿಕ್ಕಮಗಳೂರಿನಿಂದ ಕೇವಲ 96 ಕಿ.ಮೀ ಅಂತರದಲ್ಲಿರುವ  ಈ ಪುಣ್ಯ ಕ್ಷೇತ್ರವೇ  ಕಳಸ.   ಭದ್ರಾ ನದಿಯ ತಟದಲ್ಲಿರುವ ಈ ಕ್ಷೇತ್ರ  ಶಿವ ನೆಲೆಸಿದ  ಪಾವನ ಭೂಮಿಯಾಗಿದೆ.ಇಲ್ಲಿ ಶಿವ ಕಳಸೇಶ್ವರನಾಗಿ  ನೆಲೆನಿಂತಿದ್ದಾನೆ.ಇದರ  ಹಿಂದೆ ಒಂದು  ಐತಿಹ್ಯವೇ ಇದೆ.

      ಹಿಂದೆ  ಶಿವ-ಪಾರ್ವತಿಯರ  ಕಲ್ಯಾಣೋತ್ಸವದ ಸಂದರ್ಭದಲ್ಲಿ  ಎಲ್ಲ  ಸುರರು, ಕಿಂಕರರು, ಗಣಗಳು, ಯಕ್ಷರು, ಸಾಧುಸಂತರು,ದೇವ ದೇವತೆಗಳು ಹಿಮಾಲಯದ ಕೈಲಾಸ  ಪರ್ವತ‌ದಲ್ಲಿ ನೆರೆದಿದ್ದರು. ಹೀಗೆ  ಸರ್ವರೂ  ಒಂದೆಡೆ  ಸಮ್ಮಿàಲಿತರಾದಾಗ ಭೂಲೋಕವೇ  ವಾಲತೊಡಗಿತು. ಇದರಿಂದ ಚಿಂತಿತನಾದ  ಶಿವ  ಅಗಸ್ತ್ಯ  ಮುನಿಗಳಿಗೆ ದಕ್ಷಿಣ  ದಿಕ್ಕಿನಲ್ಲಿರುವ ಎತ್ತರದ  ಸ್ಥಳವೊಂದಕ್ಕೆ ತೆರಳಿ  ಭೂಲೋಕದ  ಸಮತೋಲನ  ಕಾಪಾಡುವಂತೆ ಆಜಾnಪಿಸಿದನು. ಆತನ   ಆಜ್ಞೆಯನ್ನು   ಪಾಲಿಸಲೇಬೇಕು. ಆಗ  ಅಗಸ್ತ್ಯರು  ಗಿರಿಜಾ ಕಲ್ಯಾಣವನ್ನು   ನೋಡಬೇಕೆಂಬ ತಮ್ಮ  ಹೆಬ್ಬಯಕೆಯನ್ನು   ವ್ಯಕ್ತಪಡಿದಾಗ  ಇದಕ್ಕೆ  ಒಪ್ಪಿದ  ಶಿವ ಅಗಸ್ತ್ಯರಿಗೊಂದು  ವರ ಕರುಣಿಸುತ್ತಾನೆ.   ಅದೇನೆಂದರೆ  ಅಗಸ್ತ್ಯರು  ಎಲ್ಲೇ ಇದ್ದರೂ  ಗಿರಿಜಾಕಲ್ಯಾಣ ವೀಕ್ಷಿಸಬಹುದು ಎಂಬ ಜಾnನ  ದೃಷ್ಟಿಯನ್ನು  ಅನುಗ್ರಹಿಸುತ್ತಾನೆ.   ಇದರಿಂದ ಸಂತಸಗೊಂಡ ಮುನಿಗಳು ದಕ್ಷಿಣ  ದಿಕ್ಕಿಗಿರುವ ಪ್ರಸ್ತುತ  ಕಳಸ  ಕ್ಷೇತ್ರಕ್ಕೆ ಬಂದು ನೆಲೆಸುತ್ತಾರೆ. ಮಹಾಜಾnನಿಗಳಾದ  ಇವರ  ಆಗಮನದಿಂದ  ಭೂಲೋಕದಲ್ಲಿ  ಮತ್ತೆ ಮೊದಲಿನಂತೆ ಸಮತೋಲನ  ಉಂಟಾಗುತ‌¤ದೆ.  ಆಗ  ಮುನಿಗಳು  ಈ ಕ್ಷೇತ್ರದಲ್ಲೆ  ತಮ್ಮ   ಬಳಿ ಇದ್ದ  ಕಳಸದಿಂದಲೇ  ಗಿರಿಜಾಕಲ್ಯಾಣವನ್ನು  ವೀಕ್ಷಿಸುತ್ತಾರೆ.  ಅವರ  ಕಳಸದಿಂದ ಒಂದು ಶಿವಲಿಂಗ ಉದ್ಭವವಾಗುತ್ತದೆ  ಅದನ್ನು  ಈ ಕ್ಷೇತ್ರದಲ್ಲಿ  ಪ್ರತಿಷ್ಠಾಪಿಸುತ್ತಾರೆ.   ಆದ್ದರಿಂದ  ಕಳಸದಿಂದ  ಹುಟ್ಟಿದ  ಶಿವನು  ಇಲ್ಲಿ  ಕಳಸೇಶ್ವರನಾಗಿ  ಹೆಸರು ಪಡೆಯುತ್ತಾನೆ.   ಅಂತೆಯೇ ಈ  ಕ್ಷೇತ್ರ ಕಳಸ ಎಂದು  ಹೆಸರು ಪಡೆದುಕೊಂಡಿದೆ.     

  ಈ ಕಳಸೇಶ್ವರನ  ಜೊತೆಗೆ   ಪಾರ್ವತಿಯದೇ  ಸರ್ವಾಂಗ ಸುಂದರಿ ಅಮ್ಮನಾಗಿ  ಇಲ್ಲಿ  ನೆಲೆಸಿದ್ದಾಳೆ.  ಈ  ಕ್ಷೇತ್ರದ  ಇನ್ನೊಂದು ವೈಶಿಷ್ಟ್ಯತೆಯೆನೆಂದರೆ ಇಲ್ಲಿ  ಗಣಪತಿಯು ಗಂಡುರೂಪ ಹಾಗೂ ಹೆಣ್ಣುರೂಪದಲ್ಲಿ  ನೆಲೆಸಿದ್ದಾನೆ. ಇದಕ್ಕೂ ಕೂಡ ಒಂದು ಐತಿಹ್ಯವಿದೆ. ಹಿಂದೆ ಈ  ಪ್ರದೇಶದಲ್ಲಿದ್ದ  ತಾಳಕಾಸುರನೆಂಬ ರಾಕ್ಷಸನನ್ನು  ಗಣಪತಿ ಗಜ ಸ್ವರೂಪದಲ್ಲಿ  ಸಂಹರಿಸಿರುತ್ತಾನೆ.ಇದಕ್ಕೆ  ಒಂದು ಗಂಡು ಆನೆ ಕೂಡ ಸಹಕರಿಸಿರುತ್ತದೆ. ಆದ್ದರಿಂದ ಇಲ್ಲಿ  ಗಣಪತಿಯ  ಎರಡು ರೂಪಗಳ  ವಿಗ್ರಹಗಳನ್ನು   ಪ್ರತಿಷ್ಠಾಪಿಸಲಾಗಿದೆ.

ಹಚ್ಚ  ಹಸಿರಿನ ಸುಂದರವಾದ ಪ್ರಕೃತಿ ಮಡಿಲಿನಲ್ಲಿ ನೆಲೆನಿಂತಿರುವ ಈ  ಕಳಸೇಶ್ವರ ದೇವಸ್ಥಾನ ಸಾಕಷ್ಟು  ವಿಶಾಲವಾದ ಆವರಣ ಹೊಂದಿದ್ದು, ಒಳಭಾಗದಲ್ಲಿ  ಒಂದು ಗಂಡು ಗಣಪತಿ ಹಾಗೂ ಹೆಣ್ಣು ಗಣಪತಿಯ ಪ್ರತ್ಯೇಕ ಎರಡು ಚಿಕ್ಕ  ಮಂದಿರಗಳಿವೆ.  ಮುಂದೆ  ಹೊದಂತೆ  ಪ್ರದಕ್ಷಿಣೆಗಾಗಿ  ದೊಡ್ಡದಾದ ಪ್ರಾಕಾರವನ್ನು  ನಿರ್ಮಿಸಲಾಗಿದೆ.  ಒಳ ಭಾಗದ ಗರ್ಭಗುಡಿಯಲ್ಲಿ ಬೆಳ್ಳಿಯ  ಪ್ರಭಾವಳಿಯ ಮಧ್ಯದಲ್ಲಿ  ಕಳಸೇಶ್ವರ  ಲಿಂಗರೂಪದಲ್ಲಿ ನೆಲೆಸಿದ್ದಾನೆ.

ಇನ್ನು   ಈ ಕಳಸ ಕ್ಷೇತ್ರವು  5 ಕಿ.ಮೀ ವ್ಯಾಪ್ತಿಯಲ್ಲಿ ಐದು  ಅತ್ಯಮೂಲ್ಯವಾದ ತೀರ್ಥಹೊಂಡಗಳನ್ನು  ಹೊಂದಿದೆ. ಅವುಗಳೆಂದರೆ  ವಸಿಷ್ಠತೀರ್ಥ,  ನಾಗತೀರ್ಥ – ಇಲ್ಲಿ  ಸ್ನಾನ  ಮಾಡುವುದರಿಂದ ನಾಗದೋಷ ಪರಿಹಾರ, ಕೋಟಿ ತೀರ್ಥ – ಅಗಸ್ತ್ಯರ  ಕೋರಿಕೆಯಂತೆ ಕೋಟಿ  ದೇವತೆಗಳು ನೆಲೆಸಿದ  ತೀರ್ಥ,  ರುದ್ರತೀರ್ಥ, ಅಂಬುತೀರ್ಥ – ಪಾರ್ವತಿ ದೇವಿಗೆ ಅರ್ಪಿತವಾಗಿರುವ  ತೀರ್ಥಕುಂಡ. ಹೀಗೆ ಪಂಚ ತೀರ್ಥಗಳು  ಈ ಕ್ಷೇತ್ರದಲ್ಲಿರುವುದೇ ಇಲ್ಲಿನ  ಇನ್ನೊಂದು ವಿಶೇಷ ಎನ್ನಲಾಗುತ್ತಿದೆ.ಇನ್ನು  ಪ್ರತಿವರ್ಷ  ಶಿವರಾತ್ರಿ ಹಾಗೂ ಗಿರಿಜಾಕಲ್ಯಾಣವನ್ನು ಇಲ್ಲಿ  ಅದ್ದೂರಿಯಾಗಿ   ಆಚರಿಸಲಾಗುತ್ತದೆ.

ಆಶಾ. ಎಸ್‌.ಕುಲಕರ್ಣಿ

ಟಾಪ್ ನ್ಯೂಸ್

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.