ಬೋರೆ ಆ್ಯಪಲ್‌ ಬಳ್ಳಾರಿಗೆ ಬಂತು


Team Udayavani, Apr 24, 2017, 3:45 AM IST

apple.jpg

ಬರಕ್ಕೆ ಒಗ್ಗಿಕೊಳ್ಳುವ, ಕಡಿಮೆ ನೀರು ಬೇಡುವ ಥಾಯ್‌ಲ್ಯಾಂಡ್‌ ಮೂಲದ ಆ್ಯಪಲ್‌ ಬೋರೆ ಬಳ್ಳಾರಿ ಜಿಲ್ಲೆಯಲ್ಲಿ ಬೇರೂರಿದೆ. ಗಿಡ ನೆಟ್ಟ ರೈತರಿಗೆ ಕೈತುಂಬಾ ಹಣ ತಂದುಕೊಡುತ್ತಿದೆ. ಹೌದು, ಸಿರುಗುಪ್ಪದ ತೆಕ್ಕಲಕೋಟೆ ಹೋಬಳಿಯ ಮಾಳಾಪುರ ಗ್ರಾಮದ ಬಳಿ ರೈತ ರವೀಂದ್ರ ಆರು ಎಕರೆ ಬೋರ್‌ವೆಲ್‌ ಆಧರಿತ ಮರಳು ಮಿತ್ರ ಕೆಂಪು ಮಣ್ಣಿನ ಜಮೀನಿನಲ್ಲಿ ಆ್ಯಪಲ್‌ ಬೋರೆ ನೆಟ್ಟಿದ್ದಾರೆ. ತಾವು ತೆಗೆದುಕೊಂಡ ನಿರ್ಧಾರ ಉತ್ತಮ ಫ‌ಲಿತಾಂಶ ನೀಡಿದೆ ಎಂದು ನಗೆ ಬೀರಿದ್ದಾರೆ.

ಎಂತಹ ಬಿಸಿಲಿಗೂ ತಾಳಿಕೊಳ್ಳುವ, ಸುದೀರ್ಘ‌ 20 ವರ್ಷಕ್ಕೂ ಅಧಿಕ ಕಾಲ ಫ‌ಲ ಕೊಡುವ ಸಾಧಾರಣ ಎತ್ತರದ ಗಿಡದಲ್ಲಿ ಸುವಾಸನೆ ಭರಿತ, ವಿಶಿಷ್ಟ ಸ್ವಾದದ ಈ ಹೊಸ ಬೋರೇಹಣ್ಣು, ಗಿಡ ನೆಟ್ಟ ಆರು ತಿಂಗಳಲ್ಲಿಯೇ ಫ‌ಲ ನೀಡಲು ಆರಂಭಿಸಿದೆ. ಪ್ರತಿ ಗಿಡದ ಟೊಂಗೆ ಟೊಂಗೆಯಲ್ಲಿ ಹತ್ತಾರು ಬೃಹತ್‌ ಗಾತ್ರದ ಹಣ್ಣು ಬಿಟ್ಟಿದ್ದು ಬರದ ಕತ್ತಲಿನ ನಡುವೆ ಸಮೃದ್ಧಿಯ ಬೆಳಕು ಕಾಣಿಸುತ್ತಿದೆ. ರವೀಂದ್ರ ಅವರದ್ದು ಇದೇ ಪ್ರದೇಶದಲ್ಲಿ ಅಂಜೂರ ತೋಟವಿದೆ. ಇದರ ಮಾರ್ಕೆಟ್‌ ಹೈದ್ರಾಬಾದ್‌, ಬೆಂಗಳೂರು, ಚೆನ್ನೈ.  ಕಳೆದ ವರ್ಷ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ರವೀಂದ್ರ ಹೊಸ ಬೋರೆ ಹಣ್ಣಿನ ಕೃಷಿಗೆ ಮುಂದಾದರು. ಯಶಸ್ಸು ಗಳಿಸಿದರು.ಆ್ಯಪಲ್‌ ಬೋರೆ ಸ್ವಾದಿಷ್ಟ ಹುಳಿ ಮಿತ್ರ ಸಿಹಿ ರುಚಿ ಹೊಂದಿದ್ದು, ಸಾಕಷ್ಟು ಆಹ್ಲಾದಕರ ಸುವಾಸನೆ ಹೊಂದಿದೆ. ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಲlಮೇರ್‌ ನ್ಯೂನತೆಯನ್ನು ಸರಿಪಡಿಸುವ ಗುಣ ಈ ಹಣ್ಣು ಹೊಂದಿದೆ. ಬುದ್ಧಿಶಕ್ತಿ ಬೆಳೆಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದೊಂದು ಉತ್ತಮ ಹಣ್ಣು ಎನ್ನುವುದರಿಂದಲೇ ಬೇಡಿಕೆ ಹೆಚ್ಚು.

ಬೋರೆ ಕೃಷಿ
ರವೀಂದ್ರ ಗುತ್ತಿಗೆ ಪಡೆದ ಜಮೀನಿನಲ್ಲಿ ಪ್ರತಿ 10*12 ಅಡಿಗೆ ಒಂದರಂತೆ ಪ್ರತಿ ಎಕರೆಗೆ 350 ಬೋರೆ ಗಿಡ ನೆಟ್ಟಿದ್ದಾರೆ (ಆರು ಎಕರೆಗೆ 2100 ಗಿಡ). ಹೈದರಾಬಾದ್‌ ನರ್ಸರಿಯಿಂದ ತರಿಸಿರುವ ಪ್ರತಿ ಸಸಿಗೆ ತಲಾ 35ರೂ. ಖರ್ಚು. ಹನಿ ನೀರಾವರಿ ಸೇರಿದಂತೆ ಆರಂಭಿಕ ಎಕರೆಗೆ 75-80 ಸಾವಿರ ರೂಗಳನ್ನು ವೆಚ್ಚ ಮಾಡಿದ್ದಾರೆ. ಇದು ಮೊದಲ ವರ್ಷ. ಪ್ರತಿ ಗಿಡದಿಂದ 25-30 ಕಿಲೋ ಬೋರೆಹಣ್ಣು ದೊರೆಯುತ್ತಿದೆ. ಅಂದರೆ 2,100 ಗಿಡದಿಂದ, 25 ರೂನಂತೆ ಇಟ್ಟು ಕೊಂಡರೂ ಹೆಚ್ಚು ಕಡಿಮೆ ಎರಡು ಲಕ್ಷದಷ್ಟು  ಆದಾಯ. ಮುಂದಿನ ವರ್ಷಗಳಲ್ಲಿ 50-100 ಕಿಲೋಗಳಿಗೆ ಏರಲಿದೆ. ಇದೇ ಹಣ್ಣಿನ ವಿಶೇಷ ಗುಣ.  ಹೈದರಾಬಾದ್‌ ಇದರ ಮಾರುಕಟ್ಟೆ. ಈ ಹಣ್ಣನ್ನು ಕೊಯ್ಲು ಮಾಡುವುದು ಸುಲಭ. ಇದರಿಂದ ಕಡಿಮೆ ಮಾನವ ಶ್ರಮ ಬೇಡುತ್ತದೆ ಎನ್ನುತ್ತಾರೆ ರವೀಂದ್ರ. ಈಗಾಗಲೇ ಮಾಳಾಪುರದಲ್ಲಿ 10, ಎಮ್ಮಿಗನೂರು, ಕಂಪ್ಲಿ ಪ್ರದೇಶದಲ್ಲಿ 5 ಎಕರೆ ಜಮೀನಿನಲ್ಲಿ ಆ್ಯಪಲ್‌ ಬೋರೆ ನಾಟಿ ಮಾಡಲಾಗಿದೆ. ರೈತರಿಗೆ ಇಲಾಖೆಯ ವತಿಯಿಂದ ಅಗತ್ಯವಿರುವ ಎಲ್ಲ ನೆರವನ್ನೂ ನೀಡಲಾಗುತ್ತಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಚಿದಾನಂದಪ್ಪ.

– ಎಂ.ಮುರಳಿ ಕೃಷ್ಣ

ಟಾಪ್ ನ್ಯೂಸ್

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

rajinikanth

Rajinikanth ಬಯೋಪಿಕ್‌ಗೆ ಭರ್ಜರಿ ತಯಾರಿ; ಬಾಲಿವುಡ್‌ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ

Udupi: ಪರಿಸರ ಸ್ನೇಹಿ ಸಿಎನ್‌ಜಿ ಬಸ್‌ ಸಂಚಾರ-ಸಿಎನ್‌ಜಿ ಲಭ್ಯತೆ ಸಮಸ್ಯೆ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

ಬರಪೀಡಿತ ಪಟ್ಟಿಯಲ್ಲಿ ಸೇರಿದ ಕಾರ್ಕಳಕ್ಕೆ 152 ಕೆರೆಗಳೇ ಶ್ರೀರಕ್ಷೆ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

Davanagere; ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರಿಗೆ ಮಾತೃ ವಿಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.