ಕಂದಾ, ನಿನಗೇಕೆ ಪೆಟ್ಟು ಕೊಟ್ಟೆ ಗೊತ್ತಾ?


Team Udayavani, Jun 28, 2017, 3:45 AM IST

kanda.jpg

ನಾನು ಪೆಟ್ಟು ಕೊಟ್ಟಾಗ, ನೀನು ಅತ್ತೂ ಅತ್ತೂ ನಿದ್ರೆಗೆ ಜಾರುತ್ತೀ. ಆದರೆ, ನನಗೆ ಅಂದು ನಿದ್ರೆ ಬರುವುದಿಲ್ಲ ಪುಟ್ಟಾ. ನಿನ್ನ ಮುದ್ದು ಮೋರೆಯ ಪಕ್ಕದಲ್ಲಿ ನನ್ನ ಮುಖವನ್ನು ತಂದು, ನಿನ್ನ ಕೂದಲನ್ನು ನೇವರಿಸುತ್ತೇನೆ…

ಪ್ರೀತಿಯ ಮಗಳೇ…
ನಾನು ಕೆಲಸ ಮುಗಿಸಿ, ಮನೆಗೆ ಬಂದಾಗ, ಅಪಾರ ಖುಷಿಯಲ್ಲಿ ನನ್ನನ್ನು ಸ್ವಾಗತಿಸುತ್ತೀ. ನಿನ್ನ ಮೊಗದ ಆ ನಗುವಿನ ಅಂದ ಅನೇಕ ಸಲ ನನ್ನ ಮನಸ್ಸನ್ನು ಹೂವಾಗಿಸುತ್ತದೆ. ಆದರೆ, ಇನ್ನೂ ಕೆಲವು ಸಲ ಆ ನಗುವನ್ನು ಅರಿಯದೆ ಮೂಢನಾಗುವೆ. ಮನಸ್ಸನ್ನು ವಿನಾ ಕಾರಣ ಕಲ್ಲು ಮಾಡಿಕೊಳ್ಳುವೆ. ಇದಕ್ಕೆಲ್ಲ ಕಾರಣ, ನನ್ನ ಕೆಲಸದೊತ್ತಡ ಪುಟ್ಟಾ…
“ನಿಮ್ಮ ಟೆನ್ಶನ್ ಅನ್ನು ನನ್ನ ಮೇಲೆ ಹಾಕೆºàಡಿ’ ಎಂದು ಹೇಳಲಾರದ ಮುಗ್ಧ ಹೂವು ನೀನು ಎನ್ನುವುದನ್ನು ನಾನು ಚೆನ್ನಾಗಿ ಬಲ್ಲೆ. ನನ್ನದು ನೂರಾರು ಯೋಚನೆಗಳನ್ನು ತುಂಬಿಕೊಂಡ ತಲೆ. ವಯಸ್ಸಾದಂತೆ ತಾಳ್ಮೆ ಹೆಚ್ಚಾಗಬೇಕು, ಹೆಚ್ಚಾಗುತ್ತದೆ ಕೂಡ. ಆದರೆ, ಕೆಲವು ಸಲ ಏನಾಗುತ್ತದೋ ಗೊತ್ತಿಲ್ಲ… ನಿನಗೆ ಪೆಟ್ಟು ಕೊಡುತ್ತೇನೆ. ಆಗ ನೀನು ಅಳುತ್ತೀ. ಮುನಿಸಿಕೊಂಡು ಹೋಗಿ, ಮೂಲೆಯಲ್ಲಿ ಕೂರುತ್ತೀ.

ಪುಟ್ಟಾ, ಇದೆಲ್ಲ ಪ್ರಹಸನ ಮುಗಿದ ಮೇಲೆ ಮತ್ತೆ ನಾನು ಯೋಚಿಸುತ್ತೇನೆ ಕಣೋ… “ನಿನ್ನ ಹೊಡೆದಿದ್ದಕ್ಕೆ ಏನು ಕಾರಣ?’ ಎಂದು. ಅದು ಬಹುತೇಕ ಸಲ ಚಿಲ್ಲರೆ ವಿಷಯವೇ ಆಗಿರುತ್ತದೆ ಎನ್ನುವುದೂ ನನಗೂ ಅನ್ನಿಸಿದೆ. ಶಾಲೆಯ ಹೋಮ್‌ವರ್ಕ್‌ ಮಾಡದೇ ಇದ್ದಾಗ, ನೀನು ಹೆಚ್ಚು ಹೊತ್ತು ಆಟದ ಮೈದಾನದಲ್ಲಿಯೇ ಕಾಲ ಕಳೆದಾಗ, ನನ್ನ ಮಾತನ್ನು ಕೇಳದೇ ಇದ್ದಾಗ… ಇಂಥ ಸಣ್ಣಪುಟ್ಟ ಸಂಗತಿಗಳೂ ನನಗೆ ಆಗ ದೊಡ್ಡದಾಗಿ ಕಾಣಿಸುತ್ತವೆ.

ನಾನು ಪೆಟ್ಟು ಕೊಟ್ಟಾಗ, ನೀನು ಅತ್ತೂ ಅತ್ತೂ ನಿದ್ರೆಗೆ ಜಾರುತ್ತೀ. ಆದರೆ, ನನಗೆ ಅಂದು ನಿದ್ರೆ ಬರುವುದಿಲ್ಲ ಪುಟ್ಟಾ. ನಿನ್ನ ಮುದ್ದು ಮೋರೆಯ ಪಕ್ಕದಲ್ಲಿ ನನ್ನ ಮುಖವನ್ನು ತಂದು, ನಿನ್ನ ಕೂದಲನ್ನು ನೇವರಿಸುತ್ತೇನೆ. “ಸಾರಿ, ಕಣೋ… ಕ್ಷಮಿಸು ನನ್ನ’ ಎಂದು ನಿನ್ನ ಅಮ್ಮನಿಗೆ ಕೇಳಿಸದ ಹಾಗೆ, ಹೇಳುತ್ತೇನೆ. ಅದರಲ್ಲೂ ನನ್ನದೇನೋ ಒಂದು ಅಹಂಕಾರ. ನೀನು ಅತ್ತಿದ್ದಕ್ಕಿಂತ ಹೆಚ್ಚು, ನಾನು ಮನಸ್ಸಿನಲ್ಲಿ ಅತ್ತಿರುತ್ತೇನೆ ಪುಟ್ಟಾ…

ಮರುದಿನ ಬೆಳಗ್ಗೆ, ನಿನಗೊಂದು ಪಪ್ಪಿ ಕೊಟ್ಟೆ ನಾನು ಎಬ್ಬಿಸುತ್ತೇನೆ. ಆ ವೇಳೆ ನಿನಗೊಂದು ಪುಟ್ಟ ತರಗತಿ. ಅರ್ಧ ಗಂಟೆ ನೀತಿಪಾಠ ಹೇಳುತ್ತೇನೆ. ಆಗಲೂ ನಾನು “ನೀನು ಮಾಡಿದ್ದು, ಸಣ್ಣ ತಪ್ಪು. ಕ್ಷಮಿಸಿದ್ದೇನೆ ಕಣೋ’ ಎಂದು ತಪ್ಪೊಪ್ಪಿಕೊಳ್ಳುವುದಿಲ್ಲ. ಅಲ್ಲೂ ಅಹಂಕಾರ ತೋರಿ, “ಇನ್ನೊಮ್ಮೆ ಹಾಗೆ ಮಾಡಬೇಡ’ ಎಂದು ಮೆತ್ತನೆ, ನಿನ್ನ ಕಿವಿಯನ್ನು ಹಿಂಡುತ್ತೇನೆ. ನನ್ನ ಈ ಎಲ್ಲ ಅಪರಾಧಗಳನ್ನೂ ನೀನು ಮನ್ನಿಸುವಂತೆ, ತಲೆ ಅಲ್ಲಾಡಿಸಿ, ಒಂದು ನಗುತ್ತೀಯಲ್ಲಾ… ಆ ನಗುವೇ ನನ್ನನ್ನು ಪುನಃ ಮನುಷ್ಯನನ್ನಾಗಿಸುತ್ತೆ. ನಿನ್ನ ಪಿಳಿಪಿಳಿ ಕಣ್ಣಿನಲ್ಲಿ ಏನೋ ವಿಶೇಷ ಪ್ರೀತಿ ಕಾಣಿಸುತ್ತದೆ. 

ಮತ್ತೆ ನಾನು ಕೆಲಸಕ್ಕೆ ಹೊರಡುತ್ತೇನೆ. ಅಲ್ಲೂ ನಿನ್ನದೇ ನೆನಪು. ಅದ್ಹೇಗೋ, ಮತ್ತೆ ಕೆಲಸದೊತ್ತಡ ನನ್ನ ತಲೆಯೇರುತ್ತದೆ. ಮನೆಗೆ ಬಂದಾಗ ಅದೇ ಒತ್ತಡವೇ ನನ್ನನ್ನು ಪುನಃ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಸಾರಿ, ಮಗಳೇ… ಇನ್ನೆಂದೂ ಹೊಡೆಯುವುದಿಲ್ಲ.

ನಿನ್ನ ಪ್ರೀತಿಯ
ಪಪ್ಪಾ…

– ನಾಗರಾಜ್‌ ಮುಕಾರಿ, ಕೈಗಾ

ಟಾಪ್ ನ್ಯೂಸ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.