ವೆಜ್ಜೀ ಅನುಷ್ಕಾಳ ಡಯೆಟ್‌ ಡೈರಿ: ದೇವಸೇನಾ ಏಕೆ ದಂತದ ಗೊಂಬೆ?


Team Udayavani, Aug 2, 2017, 9:27 AM IST

02-VALU-1.jpg

ಕನ್ನಡತಿ, ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ, ಕ್ಲಾಸಿಕ್‌ ಗೊಂಬೆಯಂತೆ ಕಚಗುಳಿ ಇಡುವ ತಾರೆ. ಅವರ ನಗುವಿನಿಂದ ಹಿಡಿದು, ಮುಖಸಿರಿ, ಕೇಶ ಸೌಂದರ್ಯ, ಫಿಟ್ನೆಸ್‌… ಅನ್ನು ಹೊಂದುವುದು ಅನೇಕ ಹುಡುಗಿಯರ ಕನಸೂ ಹೌದು. ಅಷ್ಟಕ್ಕೂ, ಅನುಷ್ಕಾ ಶೆಟ್ಟಿಯವರ ಅಪ್ಸರೆಸಿರಿಯ ಹಿಂದಿನ ಗುಟ್ಟೇನು?

1. ಮಂಗ್ಳೂರು ಹುಡುಗಿ ಅಂತ ಈ ನಟಿಯೆದುರು, ಫಿಶ್‌ ಫ್ರೈ ಇಟ್ಟರೆ, ಅನುಷ್ಕಾ ಶೆಟ್ಟಿ ಅದನ್ನು ಬೆರಳಲ್ಲೂ ಮುಟ್ಟೋದಿಲ್ಲ. ಏಕೆಂದರೆ, ಅನುಷ್ಕಾ ಸಂಪೂರ್ಣ ಸಸ್ಯಾಹಾರಿ. ಹಸಿರು ತರಕಾರಿ, ಧಾನ್ಯಗಳೇ ಅವರ ಡಯೆಟ್‌ನ ಗುಟ್ಟು.

2. ದಿನಾ ರಾತ್ರಿ 8 ಗಂಟೆಯೊಳಗೆ ಅನುಷ್ಕಾ ಊಟ ಮುಗಿಸುತ್ತಾರೆ. ಮಲಗುವುದಕ್ಕೂ 2-3 ಗಂಟೆ ಮುಂಚೆ ಏನೂ ತಿನ್ನಬಾರದು ಎನ್ನುವುದು ಈ ಚೆಂದುಳ್ಳಿ ಚೆಲುವೆಯ ಪಾಲಿಸಿ.

3. ಅನುಷ್ಕಾ ಚರ್ಮ ಏಕೆ ಅಷ್ಟೊಂದು ಫ‌ಳಫ‌ಳ ಅಂತಿರುತ್ತೆ ಅಂದ್ರೆ, ಅದಕ್ಕೆ ಅವರು ಕೊಡುವ ಉತ್ತರ “ಯೋಗ’. ದಿನಾ ಬೆಳಗ್ಗೆ ಅವರು ಯೋಗಾಸನ ಮಾಡ್ತಾರೆ. ಅಲ್ಲದೆ, 30 ನಿಮಿಷ ಜಿಮ್‌ನಲ್ಲೂ ಅವರು ಅಭ್ಯಾಸ ನಡೆಸುತ್ತಾರೆ.

4. ಅನುಷ್ಕಾ ಅವರ ತಲೆಕೂದಲು ಬಹಳ ಕಪ್ಪು. ಈ ಕೇಶ ಸೌಂದರ್ಯದ ಹಿಂದೆ ಸಾಕಷ್ಟು ತೈಲಗಳ ಕೃಪೆಯೂ ಇದೆ. ಆಲೀವ್‌, ಹರಳೆಣ್ಣೆ, ಸಾಸಿವೆ ಎಣ್ಣೆ, ತೆಂಗಿನ ಎಣ್ಣೆ… ಹೀಗೆ ದಿನಕ್ಕೊಂದು ತೈಲದಿಂದ ಹೇರ್‌ ಮಸಾಜ್‌ ಮಾಡಿಕೊಳ್ಳುತ್ತಾರೆ. ಕೂದಲ ಬುಡ ಗಟ್ಟಿಯಾಗಲು, ಕೂದಲು ದಟ್ಟ, ಕಪ್ಪು ಕಾಂತಿಯನ್ನು ಹೊಂದಲು ಈ ತೈಲಗಳು ನೆರವಾಗುತ್ತವೆ.

5. ನೀರು, ನೀರು, ನೀರು! ಇದು ಅನುಷ್ಕಾ ಅವರ ಫಿಟ್ನೆಸ್‌ನ ಇನ್ನೊಂದು ಗುಟ್ಟು. ನಿತ್ಯ ಅವರು 6 ಲೀಟರ್‌ ನೀರು ಕುಡಿಯುತ್ತಾರೆ.

6. ನಿತ್ಯ ಬೆಳಗ್ಗೆ ಬ್ರೆಡ್‌ ಜತೆ ಜೇನು ತುಪ್ಪ ಸೇರಿಸಿಕೊಂಡು ತಿನ್ನುವುದು ಇವರಿಗೆ ಬಹಳ ಇಷ್ಟ. ಯಾವುದೇ ಕಾಸ್ಮೆಟಿಕ್‌ ಸರ್ಜರಿಯಿಲ್ಲದೆ ಚರ್ಮ ಕಾಂತಿಯುಕ್ತವಾಗಿ ಕಾಣಬೇಕಾದರೆ, ಜೇನುತುಪ್ಪಕ್ಕಿಂತ ಒಳ್ಳೆಯ ಆಹಾರ ಮತ್ತೂಂದಿಲ್ಲ ಎಂದು ಅವರೇ ಹೇಳುತ್ತಾರೆ.

7. ಹಿಮ್ಮಡಿ ಮೇಲೆ ಎಲ್ಲಾದರೂ ಕಪ್ಪು ಕಲೆಗಳಾದರೆ, ಅನುಷ್ಕಾ ಅವರು ಕ್ರೀಮ್‌ಗಳ ಮೊರೆ ಹೋಗುವುದಿಲ್ಲ. ಬದಲಾಗಿ, ಕಡಲೆಹಿಟ್ಟಿಗೆ ತುಸು ಲಿಂಬೆರಸ ಬೆರೆಸಿ, ಅದರ ಪೇಸ್ಟ್‌ ಅನ್ನು ಕಪ್ಪು ಕಲೆಗಳ ಮೇಲೆ ಲೇಪಿಸಿಕೊಳ್ಳುತ್ತಾರೆ. ಮೂರೇ ದಿನದಲ್ಲಿ ಆ ಕಲೆಗಳು ಮಾಯವಾಗಿ, ಒಳ್ಳೆಯ ರಿಸಲ್ಟ್ ಸಿಗುತ್ತೆ. 

ಟಾಪ್ ನ್ಯೂಸ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.