ರೋಗಪೀಡಿತ ಹುಳಿಮಾವು, ಹಿಮ್ಮವು, ಬೊಕ್ಕಹಳ್ಳಿ


Team Udayavani, Aug 8, 2017, 12:23 PM IST

mys6.jpg

ನಂಜನಗೂಡು: ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹುಳಿಮಾವು, ಹಿಮ್ಮವು ಹಾಗೂ ಬೊಕ್ಕಹಳ್ಳಿಯಲ್ಲಿ ಜನತೆ ರೋಗಪೀಡಿತರಾಗಿದ್ದಾರೆ. ವಿವಿಧ ರೀತಿಯ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ.

ಸುಮಾರ 15 ದಿನಗಳ ಹಿಂದೆ ಈ ಹಳ್ಳಿಗಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ದಿನೇ ದೀನೆ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾಂಕ್ರಾಮಿಕವಾಗಿ ಜನತೆಯನ್ನು ಆವರಿಸುವ ಆತಂಕ ಎದುರಾಗಿದೆ. ಹಿಂದುಳಿದ ವರ್ಗದವರ ಕಾಲೋನಿಯಲ್ಲಿ ಈ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಜ್ವರ ಪೀಡಿತರಾಗಿದ್ದಾರೆ. ಕಾಯಿಲೆ ಯಾವುದೆಂಬುದು ಇದುವರೆಗೂ ತಿಳಿದು ಬಂದಿಲ್ಲ.

ಮಂಡಿ ನೋವು, ಕಾಲು ನೋವಿನೊಂದಿಗೆ ಪ್ರಾರಂಭವಾಗುವ ಈ ಜ್ವರವು ಬಳಿಕ ಕಾಲಿನ ಊತ ಕಾಣಿಸಿಕೊಳ್ಳಲಾರಂಭಿಸುತ್ತದೆ . ಜ್ವರ ಪೀಡಿತರು ಆಹಾರ ಸೇವಿಸಲಾಗದೇ ದಿನೇ ದಿನೆ ನಿತ್ರಾಣರಾಗುತ್ತಿದ್ದಾರೆ.  ಕೂಲಿ ಮಾಡಿ ಜೀವನ ಸಾಗಿಸುವ ಈ ಮಂದಿ ಜ್ವರಕ್ಕೆ ತುತ್ತಾಗಿರುವುದರಿಂದ ಚಿಕಿತ್ಸೆಗೂ ಪರದಾಡುವಂತಾಗಿದೆ.

ರೋಗಪೀಡಿತರು: ಹುಳಿಮಾವು ಗ್ರಾಮದ ಪಾಪಣ್ಣ, ಸಿದ್ದಯ್ಯ, ತಾಯಮ್ಮ, ಜವರಯ್ಯ, ನಿಂಗಯ್ಯ, ಸ್ವಾಮಿ, ನಿಂಗರಾಜು ರಂಗಸ್ವಾಮಿ, ತಾಯಮ್ಮ, ವಿಜಯ, ಪುಟ್ಟಮ್ಮ, ಮಂಗಳಮ್ಮ, ಸಾಕಮ್ಮ ಹಾಗೂ ಬೊಕ್ಕಹಳ್ಳಿ ಗ್ರಾಮದ ನಂಜಮ್ಮ, ರಾಚಯ್ಯ, ಉಷಾ, ನರೇಂದ್ರ, ಕೀರ್ತಿ, ಚಿಕ್ಕಮ್ಮ, ಚಂದ್ರು, ಸೇರಿದಂತೆ  60ಕ್ಕೂ ಹೆಚ್ಚು ಜನತೆ ಈ ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ.

ಈ ಮಧ್ಯೆ ಪಾಪಣ್ಣ ಕಳೆದ 8 ದಿನಗಳಿಂದ ತೀವ್ರವಾಗಿ ಜ್ವರ ಬಾಧಿಸುತ್ತಿದ್ದು, ಆಹಾರವನ್ನು ಸೇವಿಸದೇ ನಿತ್ರಾಣವಾಗಿ ಗಂಭೀರ ಸ್ಥಿತಿ ತಲುಪಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆಗೆ ದೂರು ನೀಡಿದ್ದರೂ ಇದುವರೆಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಬೊಕ್ಕಹಳ್ಳಿ ಲಿಂಗಯ್ಯ ದೂರಿದ್ದಾರೆ.

ಇಲ್ಲಿ ಆಸ್ಪತ್ರೆ ಇದೆಯಾದರೂ ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ. ಬಡವರಿಗೆ ಆರೋಗ್ಯ ಸೇವೆ ಒದಗಿಸುವ ಘೋಷಣೆಯೊಂದಿಗೆ ವರ್ಷದ ಹಿಂದೆ ತೆರೆಯಲಾದ ಹೆಲ್ಪೇಜ್‌ ಇಂಡಿಯಾ(ಸಂಚಾರಿ ಆರೋಗ್ಯ ಸೇವೆ) ನೆಪ ಮಾತ್ರಕ್ಕಾಗಿದ್ದು, ಮೊಬೈಲ್‌ ಚಿಕಿತ್ಸಾ ವಾಹನ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಲಿಂಗಯ್ಯ ದೂರಿದ್ದಾರೆ.

ಜೊತೆಗೆ ಈ ಭಾಗದಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ಆಸ್ಪತ್ರೆಗೆ ಬೋರ್ಡ್‌ ಹಾಕಿ ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಆರು ವರ್ಷ ಕಳೆದರೂ ಈ ಕಟ್ಟಡದ ಬಾಗಿಲು ತೆರೆಯುವ ಸೌಜನ್ಯ ತೋರಿಲ್ಲ. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಗ್ರಾಮದಲ್ಲಿ ಹಲವಾರು ಮಂದಿ ಹಲವು ರೀತಿಯ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದು, ಇಲ್ಲಿ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ರಾತ್ರಿಯ ವೇಳೆಯಲ್ಲಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಮೈಸೂರಿಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ.

ಈ ಬಗ್ಗೆ ಹಲವು ಬಾರಿ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದರೂ  ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಭರವಸೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಆಸ್ಪತ್ರೆಗೆ ಸಿಬ್ಬಂದಿ ನಿಯೋಜಿಸಿ ಚಿಕಿತ್ಸೆ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಳಿಮಾವು ಗ್ರಾಮದ 17 ಜನರಲ್ಲಿ ತೀವ್ರ ಜ್ವರ ಇರುವುದು ನಿಜ. ಅವರೆಲ್ಲರ ರಕ್ತ  ಸಂಗ್ರಹಿಸಲಾಗಿದೆ. ಅದನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳಿಸಿ ವರದಿ ಬಂದ ನಂತರವೇ ಈ ಜ್ವರದ ಮೂಲ ತಿಳಿಯಲಿದೆ. ತಾಲೂಕು ವೈದ್ಯಾಧಿಕಾರಿ ಕಲಾವತಿ ನಿರ್ದೇಶನದ ಮೇರೆಗೆ ತಾವು ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮದ ಬಹುತೇಕ ನೀರಿನ ತೊಟ್ಟಿಗಳಲ್ಲಿ ಲಾವಾ ಕಾಣಿಸಿಕೊಂಡಿದು, ನೈರ್ಮಲ್ಯ ಕೊರತೆಯಿಂದ ರೋಗ ಹರಡಿರುವ ಸಾಧ್ಯತೆ ಇದೆ.
-ಬಹುದುಲ್ಲಾ ಖಾನ್‌, ಹೊಸಕೋಟೆ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ

ಟಾಪ್ ನ್ಯೂಸ್

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

Devaraje Gowda ನ್ಯಾಯಾಂಗ ಬಂಧನ ಜೂ.7ರವರೆಗೆ ವಿಸ್ತರಣೆ

Devaraje Gowda ನ್ಯಾಯಾಂಗ ಬಂಧನ ಜೂ.7ರವರೆಗೆ ವಿಸ್ತರಣೆ

Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್‌ ಖರ್ಗೆ

Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್‌ ಖರ್ಗೆ

PSI Exam ರಾಜ್ಯದ 402 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ: ಸೆಪ್ಟಂಬರ್‌ನಲ್ಲಿ ಪರೀಕ್ಷೆ

PSI Exam ರಾಜ್ಯದ 402 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ: ಸೆಪ್ಟಂಬರ್‌ನಲ್ಲಿ ಪರೀಕ್ಷೆ

Prajwal Revanna Case ವೀಡಿಯೋ ಹಂಚಿದವರು ಜಾಮೀನಿಗಾಗಿ ಹೈಕೋರ್ಟ್‌ಗೆ

Prajwal Revanna Case ವೀಡಿಯೋ ಹಂಚಿದವರು ಜಾಮೀನಿಗಾಗಿ ಹೈಕೋರ್ಟ್‌ಗೆ

Prajwal Revanna Case ಅಶ್ಲೀಲ ವಿಡಿಯೋ: ಸಹಾಯವಾಣಿಗೆ ಕರೆ ಬಂದರೂ ದೂರು ನೀಡದ ಸ್ತ್ರೀಯರು

Prajwal Revanna Case ಅಶ್ಲೀಲ ವಿಡಿಯೋ: ಸಹಾಯವಾಣಿಗೆ ಕರೆ ಬಂದರೂ ದೂರು ನೀಡದ ಸ್ತ್ರೀಯರು

Prajwal ಪ್ರಚಾರಕ್ಕೆ ಹೋದಾಗ ಬಂಧಿಸದೇ ಕತ್ತೆ ಕಾಯುತ್ತಿದ್ದರಾ?: ಆರ್‌.ಅಶೋಕ್‌

Prajwal ಪ್ರಚಾರಕ್ಕೆ ಹೋದಾಗ ಬಂಧಿಸದೇ ಕತ್ತೆ ಕಾಯುತ್ತಿದ್ದರಾ?: ಆರ್‌.ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ

Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ

ಸಿದ್ದರಾಮಯ್ಯ

Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

Elephant Census: ನಾಗರಹೊಳೆಯಲ್ಲಿ ಗಜ ಗಣತಿಗೆ ಚಾಲನೆ, 300 ಸಿಬ್ಬಂದಿಗಳು ಭಾಗಿ

Elephant Census: ನಾಗರಹೊಳೆಯಲ್ಲಿ ಗಜ ಗಣತಿಗೆ ಚಾಲನೆ, 300 ಸಿಬ್ಬಂದಿಗಳು ಭಾಗಿ

Cm Siddaramaiah: ಸಿಎಂ ಮೈಸೂರು ಭೇಟಿ ಹಿನ್ನೆಲೆ; ದೇವೇಗೌಡರ ಕಟೌಟ್‌ ತೆರವು

Cm Siddaramaiah: ಸಿಎಂ ಮೈಸೂರು ಭೇಟಿ ಹಿನ್ನೆಲೆ; ದೇವೇಗೌಡರ ಕಟೌಟ್‌ ತೆರವು

H. D. Kumaraswamy ಆ ಮಹಾನುಭಾವರು 1980ರಲ್ಲೇ ಸಿ.ಡಿ. ಫ್ಯಾಕ್ಟರಿ ಓಪನ್‌ ಮಾಡಿದ್ದಾರೆ

H. D. Kumaraswamy ಆ ಮಹಾನುಭಾವರು 1980ರಲ್ಲೇ ಸಿ.ಡಿ. ಫ್ಯಾಕ್ಟರಿ ಓಪನ್‌ ಮಾಡಿದ್ದಾರೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

Sringeri: ವರ್ಷದ ಮೊದಲ ಮಹಾಭಿಷೇಕ

Sringeri: ವರ್ಷದ ಮೊದಲ ಮಹಾಭಿಷೇಕ

Devaraje Gowda ನ್ಯಾಯಾಂಗ ಬಂಧನ ಜೂ.7ರವರೆಗೆ ವಿಸ್ತರಣೆ

Devaraje Gowda ನ್ಯಾಯಾಂಗ ಬಂಧನ ಜೂ.7ರವರೆಗೆ ವಿಸ್ತರಣೆ

Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್‌ ಖರ್ಗೆ

Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್‌ ಖರ್ಗೆ

PSI Exam ರಾಜ್ಯದ 402 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ: ಸೆಪ್ಟಂಬರ್‌ನಲ್ಲಿ ಪರೀಕ್ಷೆ

PSI Exam ರಾಜ್ಯದ 402 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ: ಸೆಪ್ಟಂಬರ್‌ನಲ್ಲಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.