ತೆನಾಲಿರಾಮನ ಪತ್ತೇದಾರಿಕೆ!


Team Udayavani, Aug 17, 2017, 6:20 AM IST

tenali.jpg

ಶ್ರೀಕೃಷ್ಣದೇವರಾಯ ಅಮೂಲ್ಯ ರತ್ನಗಳಿಂದ ತಯಾರಿಸಿದ ಉಂಗುರವನ್ನು ಧರಿಸುತ್ತಿದ್ದ. ಒಂದು ದಿನ ಅದು ಕಳೆದು ಹೋಯಿತು. ಅವನ ಅಂಗರಕ್ಷಕರಲ್ಲಿ ಒಬ್ಬರು ಕಳ್ಳತನ ಮಾಡಿರಬಹುದು ಎಂಬ ಅನುಮಾನದಿಂದ ತನ್ನ ಮಂತ್ರಿಯಾದ ತೆನಾಲಿರಾಮನನ್ನು ಕರೆಸಿದ. ಉಂಗುರವನ್ನು ಹುಡುಕಿಕೊಟ್ಟರೆ ಬಹುಮಾನ ಕೊಡುವೆನೆಂದೂ ಆಶ್ವಾಸನೆಯಿತ್ತ. ತೆನಾಲಿರಾಮ ಒಂದು ಉಪಾಯ ಹೂಡಿದ. ಅದರಂತೆ ತೆನಾಲಿರಾಮ ಹನ್ನೆರಡು ಅಂಗರಕ್ಷಕರನ್ನು ಒಂದು ಕತ್ತಲೆ ಕೋಣೆಗೆ ಕರೆದುಕೊಂಡು ಹೋಗಿ “ನೀವೆಲ್ಲರೂ ಒಬ್ಬೊಬ್ಬರಾಗಿ ಕಾಳಿಕಾ ದೇವಿಯ ಪಾದವನ್ನು ಮುಟ್ಟಿ ಬರಬೇಕು’ ಎಂದನು. ಅಂಗರಕ್ಷಕರೆಲ್ಲರೂ ಪ್ರಶ್ನಾರ್ಥಕವಾಗಿ ರಾಮನನ್ನು ನೋಡುತ್ತಿರಲು ಆತ ಹೇಳಿದ “ದೊರೆಗಳ ಉಂಗುರ ಕಳವಾಗಿದೆ. ಆ ಕಳ್ಳ ಕಾಳಿಕಾ ದೇವಿಯ ಪಾದಕ್ಕೆ ಮುಟ್ಟಿ ಬಂದರೆ ದೇವಿ ನನ‌ಗೆ ಕನಸಿನಲ್ಲಿ ಕಳ್ಳ ಯಾರು ಎಂದು ಹೇಳುತ್ತಾಳೆ’.

ಅಂಗರಕ್ಷಕರು ಒಬ್ಬೊಬ್ಬರಾಗಿ ದೇವಿಯ ಪಾದವನ್ನು ಮುಟ್ಟಿ ಬಂದರು. ಅವರೆಲ್ಲರನ್ನೂ ಸಾಲಾಗಿ ನಿಲ್ಲಿಸಿ ಕೈಗಳನ್ನು ಮುಂದಕ್ಕೆ ಚಾಚಲು ಹೇಳಿದ. ಹಾಗೆ ಹೇಳಿ ತಾನು ಅವರೆಲ್ಲರ ಕೈಗಳನ್ನು ಮೂಸಿ ನೋಡಿದ. ಎಲ್ಲರೂ ನಗುವುದೊಂದು ಬಾಕಿ, ಈ ತೆನಾಲಿ ರಾಮನಿಗೆ ಏನಾಗಿದೆ ಎಂದು. ರಾಮ ಪ್ರಭುಗಳ ಹತ್ತಿರ ಬಂದು “ಏಳನೆಯವನೇ ಕಳ್ಳ’ ಎಂದನು. ರಾಜ “ಅದು ಹೇಗೆ ಹೇಳುತ್ತೀ’ ಎಂದು ಪ್ರಶ್ನಿಸಿದಾಗ, ರಾಮ “ಪ್ರಭುಗಳೇ ನಾನು ದೇವಿಯ ಪಾದಗಳಿಗೆ ಸುಗಂಧ ದ್ರವ್ಯವನ್ನು ಹಚ್ಚಿದ್ದೆ. ಅದನ್ನು ಮುಟ್ಟಿದವರ ಕೈಗಳಿಗೆ ಆ ಸುಗಂಧ ಅಂಟಿಕೊಂಡಿತ್ತು. ಏಳನೆಯವನ ಕೈಗಳಿಗೆ ಮಾತ್ರ ಸುಗಂಧ ಅಂಟಿರಲಿಲ್ಲ. ಏಕೆಂದರೆ ದೇವಿ ಎಲ್ಲಿ ತನ್ನನ್ನು ಹಿಡಿದು ಕೊಡುವಳ್ಳೋ ಎಂಬ ಭಯದಿಂದ ಆತ ಮುಟ್ಟಿಯೇ ಇರಲಿಲ್ಲ’. ರಾಜ ರಾಮನ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಷ್ಟೇ ಅಲ್ಲದೆ ತಾನು ನುಡಿದಂತೆಯೇ ಬಂಗಾರದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟನು.

– ಆರೀಫ್ ವಾಲೀಕಾರ್‌, ವಿಜಯಪುರ

ಟಾಪ್ ನ್ಯೂಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.