ಕಲಿತ ಪಾಠಗಳು ಯಾವತ್ತೂ ವೇಸ್ಟ್‌ ಆಗೊಲ್ಲ!


Team Udayavani, Sep 5, 2017, 11:33 AM IST

05-JOSH-10.jpg

ಕಬಡ್ಡಿ ಆಟದಲ್ಲಿ ಗುರು ಶಿಷ್ಯ ಪರಂಪರೆಗೆ ಉನ್ನತ ಸ್ಥಾನವಿದೆ. ಮಿಕ್ಕ ಕ್ರೀಡೆಗಳಲ್ಲಿಲ್ಲ ಅಂತ ಹೇಳುತ್ತಿಲ್ಲ. ಆದರೆ ಗುರುವಿನ ಎದುರೇ ಎದುರಾಳಿಗಳೊಡನೆ ಕಾದಾಡುವ ಶಿಷ್ಯ, ಆತನ ತಪ್ಪುಗಳನ್ನು ಅಂಕಣದಲ್ಲೇ ತಿದ್ದಿ ಮುಂದಿನ ರೈಡ್‌ಗೆ ತಯಾರು ಮಾಡುವ ಗುರು…

ಇವೆಲ್ಲಾ ಕಬಡ್ಡಿಯ ರೋಚಕ ರಸನಿಮಿಷಗಳು. ಇಲ್ಲಿಯವರೆಗೆ ಹಲವಾರು ಆಟಗಾರರನ್ನು ತರಬೇತುಗೊಳಿಸಿದ್ದೇನೆ. ಶಿಷ್ಯ ತನ್ನನ್ನು ಮೀರಿಸುವಂತೆ ಬೆಳೆಯಬೇಕು ಎನ್ನುವ ಆಸೆ ಪ್ರತಿಯೊಬ್ಬ ಗುರುವಿನದ್ದು. ಹಾಗಾಗಿ ಶಿಷ್ಯಂದಿರಿಬ್ಬರು ಅಖಾಡದಲ್ಲಿ ಸಾಧನೆಗೈಯುತ್ತಿರುವುದನ್ನು ನೋಡಿದ್ದೇ ಗುರುವಾಗಿ ನಾನು ಅನುಭವಿಸಿದ ಸಾರ್ಥಕ ಕ್ಷಣಗಳು!

ಜೀವ ಕುಮಾರ್‌ ಮತ್ತು ರಾಜಗುರು, ಇವರೇ ಆ ಇಬ್ಬರು  ಆಟಗಾರರು. ರಾಜಗುರುವಿಗೆ ನನ್ನ ಟ್ರೇನಿಂಗ್‌ ಮೇಲೆ ಸ್ವಲ್ಪ ಅನುಮಾನವಿತ್ತು. ಹಳೇ ಕಾಲದವರು, ಈಗಿನ ಕಾಲಕ್ಕೆ ನಾನು ಕಲಿತ ತಂತ್ರ-ಪಟ್ಟುಗಳು ಹೊಂದುವುದಿಲ್ಲ ಅಂತ. ಕಡೆಗೊಂದು ದಿನ ಅವನು ಕಬಡ್ಡಿ ಮೇಲೆ ಆಸಕ್ತಿಯನ್ನೇ ಕಳೆದುಕೊಂಡು ತನ್ನೂರು ತಂಜಾವೂರಿಗೆ ಹೋಗಿಬಿಟ್ಟ. ನಾನು ಅವನನ್ನು ಓಲೈಸಿ ಮತ್ತೆ ಕರೆದುಕೊಂಡುಬಂದೆ. ಟ್ರೇನಿಂಗ್‌ ಮುಂದುವರಿಸಿದೆ. ಅವನು ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಷ್ಟೇ ಅಲ್ಲದೆ ಚಿನ್ನವನ್ನೂ ತಂದ! 

ನನ್ನ ಪ್ರಕಾರ ಯಾವುದೇ ಕ್ರೀಡೆಯಲ್ಲಿ ಆಧುನಿಕತೆ, ತಂತ್ರಜ್ಞಾನದ ಬಳಕೆ ಎಷ್ಟೇ ಸಹಕರಿಸಬಹುದು,  ಕೆಲಸ ಸುಲಭವಾಗಿಸಬಹುದು. ಆದರೆ ಆಟದ ಮೂಲ ಬೇರು  ಅಡಗಿರುವುದು ಸಾಂಪ್ರದಾಯಿಕತೆಯಲ್ಲಿಯೇ. ಹಳೆಯದರ ಜೊತೆ ಹೊಸತನ್ನೂ ಮೈಗೂಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜೀವ ಕುಮಾರ್‌ ಮುಂಚೆ ರೈಲ್ವೇಸ್‌ ತಂಡದಲ್ಲಿ ಆಡುತ್ತಿದ್ದ. ನಾನು ಅವನನ್ನು ನಮ್ಮ ಎಸ್‌ಬಿಎಂ ತಂಡಕ್ಕೆ ಕರೆದುಕೊಂಡು ಬಂದೆ. ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಪ್ರತಿದಿನ ಸಂಜೆ ಕೆಲಸ ಮುಗಿಸಿ ಅವರಿಗೆ ಅಲ್ಲಿ ತರಬೇತಿ ನೀಡುತ್ತಿದ್ದೆ. ಆಮೇಲೆ ಕಚೇರಿಯಲ್ಲಿ ಕೆಲ ಸಮಸ್ಯೆಗಳು ತಲೆದೋರಿ ಜೀವನಿಗೆ ಆಡಲು ಅವಕಾಶವೇ ಇಲ್ಲದಂತಾಗಿತ್ತು. ಅವನು ನನ್ನ ಮೇಲೆ ತುಂಬಾ ಬೇಜಾರು ಮಾಡ್ಕೊಂಡ. “ನಿಮ್ಮ ಮಾತು ಕೇಳಿ ಬಂದೆ. ಇಲ್ಲಿ ಗೇಮ್‌ ಆಡೋಕೆ ಅವಕಾಶ ಇಲೆ ಹೋಯ್ತು’ ಅಂತ. ನನಗೂ ಬೇಜಾರಾಯ್ತು. “ತರಬೇತಿ, ಕಲಿತ ಪಾಠಗಳು ಯಾವತ್ತೂ ವೇಸ್ಟ್‌ ಆಗೊಲ್ಲ. ಪ್ರಾಕ್ಟೀಸ್‌ ಮಾಡುತ್ತಿರು’ ಅಂತ ಸಮಾಧಾನಿಸಿದೆ. ಅದೇ ವರ್ಷ ಅವನು ಏಷ್ಯನ್‌ ಗೇಮ್ಸ್‌ ಆಡಿದ. ಭಾರತಕ್ಕೆ ಗೋಲ್ಡ್‌ ಮೆಡಲ್‌ ಅನ್ನೂ ತಂದ. ಅವನನ್ನು ರಿಸೀವ್‌ ಮಾಡೋಕೆ ನಾನು ಏರ್‌ ಪೋರ್ಟಿಗೇ ಹೋಗಿದ್ದೆ. ಕಂಡ ತಕ್ಷಣವೇ ಅವನನ್ನು ಹೆಮ್ಮೆಯಿಂದ ಆಲಂಗಿಸಿದೆ. ಇಬ್ಬರೂ, ವಿದೇಶಿ ಆಟಗಾರರ ಟ್ಯಾಕ್ಟಿಕ್ಸ್‌, ತಂತ್ರ- ಪ್ರತಿತಂತ್ರಗಳ ಕುರಿತು ತುಂಬಾ ಹೊತ್ತು ಮಾತಾಡಿದೆವು. ಸಾರ್ಥಕತೆ ಅಂದರೆ ಇದೇ ಅಲ್ಲವೇ?

ಬಿ.ಸಿ. ರಮೇಶ್‌ ಭಾರತ ಕಬಡ್ಡಿ ತಂಡದ ಮಾಜಿ ಕಪ್ತಾನ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.