ಅರ್ಧ ಗಂಟೇಲಿ ಹಲ್ವಾ ರೆಡಿ!


Team Udayavani, Sep 20, 2017, 2:36 PM IST

20-Z-5.jpg

ಸ್ಪಂಜಿನಷ್ಟು ಮೆತ್ತಗಿರುವ, ಕಣಕಣದಲ್ಲೂ ಸಿಹಿಯನ್ನೇ ತುಂಬಿಕೊಂಡಿರುವ ತಿನಿಸು ಹಲ್ವಾ. ಎಲ್ಲರಿಗೂ ಹೆಚ್ಚಾಗಿ ಗೊತ್ತಿರುವುದು ಕ್ಯಾರೆಟ್‌ ಹಲ್ವಾದ ರುಚಿಯಷ್ಟೇ. ಸೇಬು, ಬಾದಾಮಿ, ಬಾಳೆ ಹಣ್ಣಿನ ಹಲ್ವಾಗಳನ್ನೂ ಮಾಡಬಹುದು. ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ತಯಾರಾಗುವ ಸ್ವಾದಿಷ್ಟ ತಿನಿಸು ಎಂಬುದು ಹಲ್ವಾಕ್ಕೆ ಇರುವ ಪ್ಲಸ್‌ ಪಾಯಿಂಟ್‌. ಇನ್ನು ತಡವೇಕೆ? ಹಲ್ವಾ ಮಾಡುವುದು ಹೇಗೆ ಎಂಬುದನ್ನು ಕಲಿ(ತಿಳಿ)ಯೋಣ ಬನ್ನಿ

1. ಕ್ಯಾರೆಟ್‌ ಹಲ್ವಾ:
ಬೇಕಾಗುವ ಪದಾರ್ಥಗಳು: ಕ್ಯಾರೆಟ್‌- 1/2 ಕೆ.ಜಿ., ತುಪ್ಪ- 3 ಕಪ್‌, ಮಿಲ್ಕ್ಮೇಡ್‌- 2 ಕಪ್‌, ಸಕ್ಕರೆ- 1 ಕಪ್‌, ಏಲಕ್ಕಿ ಪುಡಿ- 1 ಚಮಚ, ದ್ರಾಕ್ಷಿ ಗೋಡಂಬಿ- 3 ಚಮಚ.

ಮಾಡುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ 2 ಚಮಚ ತುಪ್ಪ ಹಾಕಿ, ಕ್ಯಾರೆಟ್‌ ತುರಿ ಹಾಕಿ ಹುರಿಯಿರಿ. ಸ್ವಲ್ಪ ನೀರು ಹಾಕಿ ಹದವಾಗಿ ಬೇಯಿಸಿ. ಇದಕ್ಕೆ ಮಿಕ್ಕ ತುಪ್ಪ, ಮಿಲ್ಕ್ಮೇಡ್‌ ಹಾಕಿ ಕೂಡಿಸಿ. ನಂತರ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ ಹಾಕಿ ಕೂಡಿಸಿ ಸಕ್ಕರೆಯ ಅಗತ್ಯ ಇದ್ದಲ್ಲಿ ಸೇರಿಸಿ ಕೂಡಿಸುತ್ತಿರಿ. ಮಿಶ್ರಣವು ತಳ ಬಿಡುತ್ತಾ ಬಂದಾಗ ಕೆಳಗಿಳಿಸಿ.

2. ಸೇಬಿನ ಹಲ್ವಾ
ಬೇಕಾಗುವ ಪದಾರ್ಥಗಳು: ಸೇಬು- 6, ತುಪ್ಪ- 1 ಕಪ್‌, ವೆನಿಲ್ಲಾ ಎಸೆನ್ಸ್‌- 1 ಚಮಚ, ಸಕ್ಕರೆ- 1 ಕಪ್‌, ಬಾದಾಮಿ- ಗೋಡಂಬಿ- ಪಿಸ್ತಾ ಚೂರುಗಳು- ತಲಾ ಅರ್ಧ ಚಮಚ.

ಮಾಡುವ ವಿಧಾನ: ಮೊದಲು  ಸೇಬಿನ ಸಿಪ್ಪೆ, ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ, ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ. ತುಪ್ಪ ಕರಗಿದ ನಂತರ ಸೇಬಿನ ಚೂರುಗಳನ್ನು ಹಾಕಿ ಮೆದುವಾಗುವವರೆಗೂ ಫ್ರೆ„ ಮಾಡಿ. ಇದಕ್ಕೆ ಒಂದು ಕಪ್‌ ನೀರು ಹಾಕಿ ಬೇಯಲು ಬಿಡಿ. ಬೆಂದ ನಂತರ ಸಕ್ಕರೆ ಹಾಕಿ ಕೂಡಿಸಿ. ಮಿಶ್ರಣ ಹೊಂದಿಕೊಂಡು ಗಟ್ಟಿಯಾದಾಗ ವೆನಿಲ್ಲಾ ಎಸೆನ್ಸ್‌ ಹಾಕಿ ಕೂಡಿಸಿ. ಮಿಶ್ರಣವು ತಳಬಿಡುತ್ತಾ ಬಂದಾಗ ಡ್ರೆ„ಫ‌ೂ›ಟ್ಸ್‌ ಚೂರುಗಳನ್ನು ಹಾಕಿ ಕೂಡಿಸಿ, ಈಗ ಪೌಷ್ಟಿಕವಾದ ಆ್ಯಪಲ್‌ ಹಲ್ವಾ ತಯಾರು.  

3. ಬಾದಾಮ್‌ ಹಲ್ವಾ

ಬೇಕಾಗುವ ಪದಾರ್ಥಗಳು: ಬಾದಾಮಿ- 100 ಗ್ರಾಂ, ತುಪ್ಪ- 2 ಕಪ್‌, ಸಕ್ಕರೆ- 2 ಕಪ್‌, ಏಲಕ್ಕಿ ಪುಡಿ- 1 ಚಮಚ.

ಮಾಡುವ ವಿಧಾನ: ಬಾದಾಮಿಯನ್ನು ಬಿಸಿನೀರಲ್ಲಿ ನೆನೆಸಿ ಅರ್ಧ ಗಂಟೆ ನೆನೆಸಿ, ನಂತರ ಅದರ ಸಿಪ್ಪೆ ತೆಗೆದು, ಬಾದಾಮಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ, ರುಬ್ಬಿದ ಬಾದಾಮಿ ಪೇಸ್ಟ್‌ ಹಾಕಿ ಕೂಡಿಸಿ. ಇದಕ್ಕೆ ಸಕ್ಕರೆ ಹಾಕಿ, ಬಾದಾಮಿ ಪೇಸ್ಟ್‌ನೊಂದಿಗೆ ಬೆರೆಯುವವರೆಗೆ ಕೂಡಿಸಿ. ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಉಳಿದ ತುಪ್ಪವನ್ನು ಸೇರಿಸಿ, ಕಲಸುತ್ತಿರಿ. ನಂತರ ಮಿಶ್ರಣ ತಳಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಸೇರಿಸಿ ಕೆಳಗಿಳಿಸಿ. ರುಚಿಕರವಾದ ಬಾದಾಮ್‌ ಹಲ್ವಾ ರೆಡಿ.

4. ಬಾಳೆಹಣ್ಣಿನ ಹಲ್ವಾ

ಬೇಕಾಗುವ ಪದಾರ್ಥಗಳು: ಚಿರೋಟಿ ರವೆ- 1 ಕಪ್‌, ಬಾಳೆಹಣ್ಣು- 3, ತುಪ್ಪ- 1 ಕಪ್‌, ಸಕ್ಕರೆ-1 ಕಪ್‌, ಏಲಕ್ಕಿ ಪುಡಿ- ಸ್ವಲ್ಪ, ದ್ರಾಕ್ಷಿ$ ಗೋಡಂಬಿ- 2 ಚಮಚ.
ಮಾಡುವ ವಿಧಾನ: ರವೆಯನ್ನು ಘಮ್ಮೆನ್ನುವ ವಾಸನೆ ಬರುವವರೆಗೆ ಹುರಿದುಕೊಳ್ಳಿ. ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಹುರಿದಿಟ್ಟುಕೊಂಡ ರವೆ ಹಾಕಿ ಮತ್ತೆ ಸ್ವಲ್ಪ ಹುರಿಯಿರಿ. ಇದಕ್ಕೆ ಹೆಚ್ಚಿದ ಬಾಳೆಹಣ್ಣನ್ನು ಹಾಕಿ ಕೂಡಿಸಿ. ನಂತರ ಇದಕ್ಕೆ ಒಂದು ಕಪ್‌ ಬಿಸಿಹಾಲು ಹಾಕಿ. ದ್ರಾಕ್ಷಿ- ಗೋಡಂಬಿ ಹಾಕಿ ಸಕ್ಕರೆ ಸೇರಿಸಿ ಚೆನ್ನಾಗಿ ಕೂಡಿಸಿ. ಸಕ್ಕರೆ ಕರಗಿ ರವೆ, ಬಾಳೆಹಣ್ಣಿನ ಮಿಶ್ರಣಕ್ಕೆ ಹೊಂದಿಕೊಂಡಾಗ ಏಲಕ್ಕಿ ಪುಡಿ ಸೇರಿಸಿ, ಕೆಳಗಿಳಿಸಿ. 

ಶ್ರುತಿ ಕೆ. ಎಸ್‌., ತುರುವೇಕೆರೆ

ಟಾಪ್ ನ್ಯೂಸ್

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.