ಮಾರಿ ಈಸ್‌ ಗೋಲ್ಡ್‌


Team Udayavani, Oct 16, 2017, 11:03 AM IST

sevanti.jpg

ಕೃಷಿ ಭಾಗ್ಯ ಯೋಜನೆಯ ಲಾಭ ಪಡೆದು ಯಶಸ್ವೀ ಕೃಷಿಕ ಅನ್ನಿಸಿಕೊಂಡವರು ತೇರದಾಳದ ರೈತ ಧರೆಪ್ಪ ಕಿತ್ತೂರ. ಅವರೀಗ 20ಗುಂಟೆ ಭೂಮಿಯಲ್ಲಿ ಸೇವಂತಿಗೆ ಬೆಳೆದು 2 ಲಕ್ಷ ರೂ. ಸಂಪಾದಿಸಿದ್ದಾರೆ. 

ಜಮಖಂಡಿ ತಾಲೂಕಿನ ತೇರದಾಳದ ಸಾವಯವ ಕೃಷಿಕ ಧರೆಪ್ಪ ಕಿತ್ತೂರ ತಮ್ಮ 20 ಗುಂಟೆ ಭೂಮಿಯಲ್ಲಿ ಸೇವಂತಿಗೆ ತಳಿ “ಮಾರಿಗೋಲ್ಡ್‌’ ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಾಡಿರುವ ಯಶಸ್ವೀ ಪ್ರಯೋಗಗಳಿಗಾಗಿ ಕಿತ್ತೂರ ಅವರಿಗೆ ಈವರೆಗೆ  ಹಲವಾರು  ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿವೆ.

ಅವರು  24 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಿ ಬಾಳೆ, ಕಬ್ಬು, ಅರಿಶಿಣ, ಕಲ್ಲಂಗಡಿ, ಸೇವಂತಿಗೆ, ಔಷಧಿ ಸಸ್ಯಗಳು, ತರಕಾರಿ ಸೇರಿದಂತೆ ಹತ್ತಾರು ಬೆಳೆ ಬೆಳೆಯುತ್ತಿದ್ದಾರೆ.”ಕೃಷಿ ಭಾಗ್ಯ’ ಯೋಜನೆಯ ಲಾಭ ಪಡೆದುಕೊಂಡು, 20 ಗುಂಟೆ ಜಾಗದಲ್ಲಿ ನೆರಳಿನ ಮನೆ ನಿರ್ಮಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಬೆಳೆಗೆ ಇರುವ ಡಿಮ್ಯಾಂಡ್‌ ಬಗ್ಗೆ ಮುಂಚಿತ ವಾಗಿಯೇ ತಿಳಿದುಕೊಂಡು ಅದರ ಬೇಡಿಕೆಗೆ ಅನುಗುಣವಾಗಿ ಸೇವಂತಿಗೆ ಬೆಳೆದು ಯಶಸ್ವಿಯಾಗಿದ್ದಾರೆ. 

ಯಶಸ್ಸಿನ ಹಾದಿ ಹೀಗಿತ್ತು
ಮೊದಲು ನೆಲ ಉಳುಮೆ ಮಾಡುವ ಮೂಲಕ ಅದನ್ನು ಹದಗೊಳಿಸಿದರು. ತಿಪ್ಪೆ ಗೊಬ್ಬರ, ಕುರಿ ಗೊಬ್ಬರ ಮತ್ತು ಬೇವಿನ ಹಿಂಡಿ ಮಣ್ಣಿಗೆ ಸೇರಿಸಿ 3 ಅಡಿ ಅಗಲ, 1 ಅಡಿ ಎತ್ತರದ ಅಳತೆಯ ಮಡಿ ತಯಾರಿಸಿಕೊಂಡರು. ರೂ. 1.5/ಸಸಿ ದರದಲ್ಲಿ ತಮಿಳುನಾಡಿನ ನರ್ಸರಿಯಿಂದ ಸಸಿಗಳನ್ನು ತರಿಸಿಕೊಂಡು, 20 ಗುಂಟೆ ಜಮೀನಿನಲ್ಲಿ ನೆರಳು ಪರದೆ ಮಾದರಿಯಲ್ಲಿ 10,000 ಸಸಿಗಳನ್ನು ನಾಟಿಮಾಡಿದರು. 

ತಮ್ಮ ಪ್ರಯೋಗದ ಎಲ್ಲಾ ಬೆಳೆಗೂ  ಹನಿ ನೀರಾವರಿ ಮೂಲಕ ನೀರು ಪೂರೈಸುವ ಕಿತ್ತೂರ ಗೊಬ್ಬರಗಳನ್ನು ಹನಿ ನೀರಾವರಿಯಲ್ಲಿ ಕೊಡುವುದಕ್ಕೆ ರಸಾವರಿ ಪದ್ಧತಿ ಅಳವಡಿಸಿದ್ದಾರೆ. ಇದರ ಜೊತೆಗೆ ಸಾವಯವ ಗೊಬ್ಬರಗಳಾದ ವ್ಯಾಮ್‌, ಟ್ರೆ„ಕೋ ಡರಮ, ಅಜಿಟೋಬ್ಯಾಕ್ಟರ್‌, ಅಜೋಶಪೋರಿಲಂ, ಸೊಡೋ ಮೊನಾಸ್‌ನ್ನು 2 ಕಿ.ಗ್ರಾಂನ್ನು ಪ್ರತಿ 15 ದಿನಕ್ಕೆ ಒಮ್ಮೆ ಹಾಗೂ ಜೀವಾಮೃತ, ಅಮೃತಪಾಣಿ ಹಾಗೂ ಬಯೋಡೈಜೆಸ್ಟರ್‌ ದ್ರವಗಳನ್ನು ಪ್ರತಿ ವಾರಕ್ಕೆ ಒಮ್ಮೆ ರಸಾವರಿ ಪದ್ಧತಿಯಲ್ಲಿ ನೀಡಿದ್ದಾರೆ.

ನಾಟಿ ಮಾಡಿದ ಮೇಲೆ ಕಳೆ ನಿರ್ವಹಣೆ ಮಾಡಿ, 30 ದಿನಗಳ ನಂತರ ತುದಿ ಚಿವುಟಿರುವುದರಿಂದ, ಸಸಿಗಳು ಕವಲೊಡೆದು, ಮೊಗ್ಗುಗಳ ಸಂಖ್ಯೆ ಕಣ್ಣು ಕುಕ್ಕುವಂತಿದೆ. ಹೂವಿನ ಭಾರ ತಡೆಯಲು ಗಿಡದ ಆಸರೆಗಾಗಿ ಕೋಲು ಮತ್ತು ತಂತಿಯಿಂದ ಕಟ್ಟಿದ್ದಾರೆ. ರೋಗಪೀಡಿತ, ಮಣ್ಣಿಗೆ ಸಮೀಪದ ಗಿಡದ ಎಲೆಗಳನ್ನು ಆಗಾಗ ಕಿತ್ತು ಹಾಕಿದ್ದರಿಂದ ರೋಗ ರಹಿತ ಬೆಳೆ ಪಡೆದಿದ್ದಾರೆ.

ರಸ ಹೀರುವ ಕೀಟಗಳ ನಿರ್ವಹಣೆಗೆ ಹಳದಿ ಮತ್ತು ನೀಲಿ ಅಂಟಿನ ಬಲೆಗಳನ್ನು ಬಳಸಿದ್ದಾರೆ. ಜಿಗಿ ಹುಳುವಿನ ಬಾಧೆ ಕಂಡುಬಂದಿದ್ದು, ಆಗ ಹವಾಮಾನಕ್ಕೆ ತಕ್ಕಂತೆ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಕೀಟನಾಶಕವನ್ನು ಸಿಂಪರಣೆ ಮಾಡಿ ಹತೋಟಿಗೆ ತಂದಿದ್ದಾರೆ. ನೆಟ್‌ ಹೌಸ್‌ ಮೂಲಕ ಬೆಳೆಯುವುದರಿಂದ ರೋಗಗಳ ಬಾಧೆಯೂ ಕಡಿಮೆಯಾಗಿದೆ.

ಈಗಾಗಲೇ ಹೂವಿನ ಮಾರಾಟ ಶುರುವಾಗಿದ್ದು, ಪ್ರತಿ ಗಿಡಕ್ಕೆ 0.75 ಕಿ.ಗ್ರಾಂ ನಂತೆ ಇಳುವರಿ ಸಿಗುತ್ತಿದೆ. ಸ್ಥಳೀಯ ಹಾಗೂ ಮುಂಬೈ ಮಾರುಕಟ್ಟೆಗೆ ಹೂ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆ ದರ ಕಿ.ಗ್ರಾಂಗೆ 100 ರಿಂದ 120 ರೂ.ನಂತೆ ಎರಡುಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಕೇವಲ 20 ಗುಂಟೆಯಲ್ಲಿ ಎರಡು ಲಕ್ಷ ಲಾಭ ಎಂದರೆ  ಹುಡುಗಾಟವೇ?

* ಕಿರಣ ಶ್ರೀಶೈಲ ಆಳಗಿ, ಬನಹಟ್ಟಿ
ಮಾಹಿತಿಗೆ: 9916238273

ಟಾಪ್ ನ್ಯೂಸ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.