ಅವ ನಮಗೆ ಮೋಸದ ಪಟಾಕಿ ಹೊಡೆದು ಬಿಟ್ಟ….


Team Udayavani, Oct 23, 2017, 11:58 AM IST

23-37.jpg

ದೀಪಾವಳಿಗೆ ಪಟಾಕಿ ಹೊಡೆಯುವುದನ್ನು ಬಿಟ್ಟು ಎಷ್ಟೋ ವರ್ಷಗಳೇ ಆಗಿದ್ದವು. ಈ ವರ್ಷ ಹಬ್ಬಕ್ಕೆ ಊರಿಗೂ ಹೋಗಲು ಆಗಲಿಲ್ಲ. ಅಕ್ಕಪಕ್ಕದ ಮನೆಯವರೆಲ್ಲ ಆಗಲೇ ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಹಬ್ಬವನ್ನು ಸ್ವಾಗತಿಸಿದ್ದರು. ಹಾಗಾಗಿ ನಾನು ಮತ್ತು ನನ್ನ ಗೆಳತಿ ನಾವೂ ಪಟಾಕಿ ಹೊಡೆದು ಹಬ್ಬ ಆಚರಿಸೋಣ ಅಂದುಕೊಳ್ತಾ, ಮಲ್ಲೇಶ್ವರದ ಒಂದು ಪಟಾಕಿ ಅಂಗಡಿಗೆ ಹೋದೆವು.  ನಮಗೆ ಬೇಕಾಗಿದ್ದು ಒಂದೆರಡು ಪ್ಯಾಕ್‌ ನಕ್ಷತ್ರಕಡ್ಡಿ ಮತ್ತು ಚಿಕ್ಕ ಮಕ್ಕಳ ಪಿಸ್ತೂಲ್‌ ಮಾತ್ರ. ಮೊದಲು ನಕ್ಷತ್ರ ಕಡ್ಡಿ ಖರೀದಿಸಿದೆವು. ಆಮೇಲೆ ಅಲ್ಲಿದ್ದ ಬಣ್ಣಬಣ್ಣದ ಪಿಸ್ತೂಲುಗಳನ್ನು ಎತ್ತಿ ಹಿಡಿದು ನೋಡಿ, ಅಭಿನವ್‌ ಬಿಂದ್ರಾ ರೇಂಜ್‌ಗೆ ಗುರಿ ಇಟ್ಟು, ಸ್ವಲ್ಪ ರಿಯಲ್‌ ರಿವಾಲ್ವರ್‌ ಥರ ಕಾಣಿಸಲಿ ಅಂತ ಕಪ್ಪು ಕಲರ್‌ನ ಎರಡು ಪಿಸ್ತೂಲು ಆರಿಸಿಕೊಳ್ಳೋಕೆ ಇಪ್ಪತ್ತು ನಿಮಿಷ ಬೇಕಾಯ್ತು. ಆದರೆ ಅಂಗಡಿಯವನು ಒಂದು ಪಿಸ್ತೂಲ್‌ಗೆ ನಲವತ್ತು ರೂಪಾಯಿ ಹೇಳಿದ.

ನಾವು “ನಲವತ್ತಾದ್ರೆ ಬೇಡ್ವೇ ಬೇಡ. ಮೂವತ್ತಕ್ಕೆ ಕೊಡಿ, ಎರಡು ಪಿಸ್ತೂಲ್‌ ತಗೋತೀವಿ’ ಅಂದು ಸುಮಾರು ಹೊತ್ತು ಚೌಕಾಸಿ ಮಾಡಿದ್ದಾಯಿತು.  “ಅಯ್ಯೋ ಇಪ್ಪತ್ತು ರೂಪಾಯಿ ಕೊಡೋಕೆ ಎಷ್ಟು ಜಿಪುಣತನ ಇವಕ್ಕೆ’ ಅಂತ ಮನಸ್ಸಲ್ಲೇ ಬೈದುಕೊಂಡ ಆತ.  ಕೊನೆಗೂ ಅರವತ್ತಕ್ಕೆ ಎರಡು ಪಿಸ್ತೂಲ್‌ ಕೊಟ್ಟ. ಈ ಚೌಕಾಸಿ ಮಾಡೋದರಲ್ಲಿ ಒಂಥರ ಖುಷಿ. ಬೆಲೆಯನ್ನು ಎಳೆದಾಡಿ ಕೊಂಡಾಗ ನಾವೇ ಗೆದ್ದೆವು ಅನ್ನೋ ಭಾವ ಆತ್ಮವಿಶ್ವಾಸ ಹೆಚ್ಚು ಮಾಡುತ್ತದೆ. ಕೆಲಸ ಇದು ಅಹಂ ಕೂಡ ಆಗಬಹುದು. ಆವತ್ತು ನಮಗೆ ಶೂಟಿಂಗ್‌ನಲ್ಲಿ ಮೆಡಲ್‌ ಗೆದ್ದಷ್ಟೇ ಖುಷಿಯಾಗಿತ್ತು. ಹಾಗೇ ರೂಮಿಗೆ ತಂದು, ಒಳಗೊಳಗೆ ಖುಷಿ ಪಟ್ಟು ತಂದ ಪಿಸ್ತೂಲ್‌ ಒಳಗೆ ಪಟಾಕಿ ತುಂಬಿಸೋಕೆ ನೋಡಿದ್ರೆ ಆಗಲೇ ಇಲ್ಲ. ಆಮೇಲೆ ಅದನ್ನು ಬಿಚ್ಚಿ ನೋಡೋವ ಅಂತ ತೆಗೆದರೆ, ಆ ತೆಗೆಯುವ ಭರದಲ್ಲಿ ಒಳಗಿದ್ದ ಸ್ಪ್ರಿಂಗ್‌ನಂಥದ್ದೇನೋ ಕಿತ್ತು ಕೈಗೆ ಬಂದು ಬಿಡೋದಾ. ಇನ್ನೊಂದು ಪಿಸ್ತೂಲ್‌ನ ಹಿಡಿಕೆಯೇ ಮುರಿದುಹೋಯ್ತು. ಕೊಟ್ಟಿದ್ದು ಅರವತ್ತೇ ರೂಪಾಯಿ ಆದ್ರೂ, ಪಿಸ್ತೂಲ್‌ನಲ್ಲಿ ಪಟಾಕಿ ಹೊಡೆಯೋ ಆಸೆ ಟುಸ್‌ ಆಗಿದ್ದಕ್ಕೆ ಭಾರೀ ಬೇಜಾರಾಯ್ತು. ಆಗಲೇ ಗೊತ್ತಾಗಿದ್ದು ಗೆದ್ದಿದ್ದು ಅಂಗಡಿಯವನು ಅಂತ. ಇಷ್ಟಾದರೂ ಮನಸ್ಸು ಕೇಳಬೇಕಲ್ಲ. “ಚೌಕಾಸಿ ಮಾಡಿದ್ದ$Rಕೆ ಬೇಕಂತಾನೇ ಮುರಿದಿದ್ದನ್ನು ಕೊಟ್ಟಿದ್ದಾನೆ’ ಅಂತ ಅಂಗಡಿಯವನನ್ನು ಬೈದು ಸಮಾಧಾನ ಮಾಡಿಕೊಂಡು ಸುಮ್ಮನಾದೆವು. 

ಚೈತ್ರಾ, ಬೆಂಗಳೂರು

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.