ಮಾರಾಟಗಾರನೇ ಪಿಗ್ಗಿ ಬಿದ್ದದ್ದು ಹೇಗೆಂದರೆ…


Team Udayavani, Nov 27, 2017, 1:11 PM IST

27-33.jpg

ಈ ಡೀಲರ್‌ ಆ ಮಿಕ್ಸಿಯ ಲೋಪಗಳನ್ನು ಹೇಳುವುದು, ಆ ಮಿಕ್ಸಿಯ ಡೀಲರ್‌ ಇದರಲ್ಲಿ ಇಲ್ಲದ ನೈಪುಣ್ಯವನ್ನು ಅದರಲ್ಲಿ ತೋರಿಸಿ ಅದನ್ನು ಹೀಗಳೆದು ಮಾರಾಟ  ಮಾಡುತ್ತಿದ್ದರು. ಇದೊಂಥರಾ ಜಟಾಪಟಿ ಜಗಳವೇ ಅಂತ ಹೇಳಬೇಕು. ಇಂಥ ಜಗಳಗಳ ಕಾಲಮಾನದಲ್ಲಿ ನಾನೊಂದು ಇಂಥದ್ದೇ ಡೀಲರ್‌ ಬಳಿ ಕೆಲಸ ಮಾಡುತ್ತಿದ್ದೆ. 

ದಶಕಗಳ ಹಿಂದಿನ ಮಾತು. ಆಗೆಲ್ಲಾ ಸುಮೀತ್‌ ಮಹಾರಾಜ ಅನ್ನೋ ಎರಡೇ ಮಿಕ್ಸಿಗಳು ಇದ್ದದ್ದು. ಈ ಎರಡರ ನಡುವೆ ಮಾರಾಟದಲ್ಲಿ ಸ್ಪರ್ಧೆಯೋ ಸ್ಪರ್ಧೆ. ಈ ಎರಡೂ ಮಿಕ್ಸಿಗಳ ಡೀಲರ್‌ಗಳು ತಮ್ಮ ವ್ಯಾಪಾರಾಭಿವೃದ್ಧಿಗಾಗಿ ಎರಡೂ ಮಿಕ್ಸಿಗಳ ಗುಣಾವಗುಣಗಳನ್ನು ಹೊಗಳುವುದು, ತೆಗಳುವುದು ನಡೆದೇ ಇತ್ತು. 

ಈ ಡೀಲರ್‌ ಆ ಮಿಕ್ಸಿಯ ಲೋಪಗಳನ್ನು ಹೇಳುವುದು, ಆ ಮಿಕ್ಸಿಯ ಡೀಲರ್‌ ಇದರಲ್ಲಿ ಇಲ್ಲದ ನೈಪುಣ್ಯವನ್ನು ಅದರಲ್ಲಿ ತೋರಿಸಿ ಅದನ್ನು ಹೀಗಳೆದು ಮಾರಾಟ ಮಾಡುತ್ತಿದ್ದರು. ಇದೊಂಥರಾ ಜಟಾಪಟಿ ಜಗಳವೇ ಅಂತ ಹೇಳಬೇಕು. ಇಂಥ ಜಗಳಗಳ ಕಾಲಮಾನದಲ್ಲಿ ನಾನೊಂದು ಇಂಥದ್ದೇ ಡೀಲರ್‌ ಬಳಿ ಕೆಲಸ ಮಾಡುತ್ತಿದ್ದೆ. ಅಲ್ಲಿರುವ ಮಿಕ್ಸಿಯನ್ನು ಪ್ರಮೋಟ್‌ ಮಾಡುವುದು ನನಗೆ ಸೇರಿದ್ದ ಕೆಲಸವಾಗಿತ್ತು. ಒಮ್ಮೆ ಅಂಗಡಿಗೆ ಗ್ರಾಹಕರು ಮಿಕ್ಸಿ ಕೊಳ್ಳಲು ಬಂದರು. ಆ ದಿನ ಡೀಲರ್‌ ಅಂಗಡಿಯಲ್ಲೇ ಇದ್ದ ಕಾರಣ ಅವರೇ ಗ್ರಾಹಕರ ಮನವೊಲಿಸಲು ನಿಂತರು.

ಸರಿ ಮಿಕ್ಸಿಯ ವರ್ಣನೆ ಶುರುವಾಯ್ತು. “ನೋಡಿ ಸಾರ್‌ ಈ ಜಾರ್‌ ಕೆಳಗೆ ಬುಶ್‌ ಇದೆಯಲ್ಲ, ಇದು ಎಷ್ಟು ಗಟ್ಟಿ ಅಂದ್ರೆ ಮಿಕ್ಸಿ ಆನ್‌ ಮಾಡಿ ನಂತರ ಜಾರ್‌ ಕೂಡಿಸಿದರೂ ಆ ಬುಶ್‌ಗೆ ಏನೂ ಆಗಲ್ಲ. ಅಷ್ಟು ಗಟ್ಟಿಯಾದ ಫೈಬರ್‌ ಇದಕ್ಕೆ ಅಳವಡಿಸಿರುವುದು. ಅದೇ ಆ ಮಿಕ್ಸಿಯಲ್ಲಾದರೆ ಬುಶ್‌ ಪದೇ ಪದೇ ಒಡೆದುಹೋಗುತ್ತಾ ಇರುತ್ತೆ ಎಂದು ವಿವರಿಸುತ್ತಿದ್ದರು. ಹೀಗೆ ಹೇಳುತ್ತಲೇ ಮಿಕ್ಸಿ ಆನ್‌ ಮಾಡಿ, ಜಾರ್‌ ಅನ್ನು ಮಿಕ್ಸಿಯಲ್ಲಿ ಕೂಡಿಸಿದರು. ಡೀಲರ್‌ ಮಾತಿನ ಮೋಡಿಗೆ ಒಳಗಾಗಿದ್ದ ಗ್ರಾಹಕ ಮಹಾಶಯ ಕಣ್ಣುಬಾಯಿ ಬಿಟ್ಟು ಕೊಂಡು
ನೋಡುತ್ತಿದ್ದವರಿಗೆ, ಒಮ್ಮೆಲೆ ಫ‌ಟ್‌ ಎಂಬ ಸದ್ದು ಬಂತು. ಬೆಚ್ಚಿ ಬಿದ್ದರು. ಆ ದಿನ ಏನಾಗಿತ್ತೋ ಏನೋ, ಜಾರ್‌ ಅನ್ನು ರನ್ನಿಂಗ್‌ ಮಿಕ್ಸಿಯಲ್ಲಿಟ್ಟ ಮರುಕ್ಷಣವೇ ಆ ಬುಶ್‌ ಫ‌ಟ್‌ ಎಂದು ಒಡೆದುಹೋಯಿತು. 

ಗ್ರಾಹಕರು ಅವಕ್ಕಾಗಿ ಡೀಲರ್‌ ಮುಖವನ್ನು ನೋಡಿದರೆ ಡೀಲರ್‌ ಮುಖ ಇಂಗು ತಿಂದ ಮಂಗನಂತಾಗಿತ್ತು. ಇದನ್ನು ನೋಡುತ್ತಲೇ ಇದ್ದ ನಾನು ನಗಬೇಕೋ ಅಳಬೇಕೋ ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದೆ. ಎಲ್ಲೆಡೆ ಗ್ರಾಹಕ ಪಿಗ್ಗಿ ಬೀಳುವುದು ಸಾಮಾನ್ಯ. ಆದರೆ ಇಲ್ಲಿ ಮಾರಾಟಗಾರನೇ ಪಿಗ್ಗಿ ಬಿದ್ದಿದ್ದ. ಅದು ಗೊತ್ತಾಗಿದ್ದು ಗ್ರಾಹಕನ ಮುಂದೆ.

ಚಿಂತಾಮಣಿ

ಟಾಪ್ ನ್ಯೂಸ್

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.