ಶರಣರ ಕೃಷಿ ಕಾಯಕ ಸಂದೇಶ ಪ್ರಸ್ತುತ: ಪೂಜಾರಿ
Team Udayavani, Dec 19, 2017, 10:15 AM IST
ಆಳಂದ: ಬಸವಾದಿ ಶರಣರ ಸಮಕಾಲಿನ ಶರಣ ವಕ್ಕಲಿಗ ಮದ್ದಣ್ಣನವರು ನೀಡಿದ ವೈಜ್ಞಾನಿಕ ಕೃಷಿ ಕಾಯಕ ಸಂದೇಶ ಈಗ ಪ್ರಸ್ತುತವಾಗಿದೆ ಎಂದು ರಾಷ್ಟ್ರೀಯ ಬಸವದಳದ ಮುಖಂಡ ಶರಣ ಧರ್ಮಣ್ಣ ಪೂಜಾರಿ ಹೇಳಿದರು.
ತಾಲೂಕಿನ ವಿ.ಕೆ.ಸಲಗರ ಗ್ರಾಮದ ಮಲ್ಲಿಕಾರ್ಜುನ ಸರಡೆ ಅವರ ಹೊದಲ್ಲಿ ಎಳ್ಳ ಅಮಾವಾಸ್ಯೆ ಆಚರಣೆ ಹಾಗೂ ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಶರಣರು ವೈಜ್ಞಾನಿಕ ತತ್ವ ಮತ್ತು ಆಧ್ಯಾತ್ಮಿಕವಾಗಿ ಜನಸಾಮಾನ್ಯರಿಗೆ ವಚನಗಳ ಮೂಲಕ ನಡೆ, ನುಡಿ ಬೋ ಧಿಸಿದ್ದಾರೆ. ವಿಜ್ಞಾನ, ಕೃಷಿ, ಆರ್ಥಿಕ, ಸಾಮಾಜಿಕ ರಾಜಕೀಯ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾಜ ಮುನ್ನಡೆಸುವ ಬಗ್ಗೆ ವಚನಗಳ ಮೂಲಕ ಸಂವಿಧಾನ ನೀಡಿದ್ದಾರೆ.ಶರಣರ ಸಂವಿಧಾನದಂತೆ ಸಮಾಜ ಮುನ್ನಡೆದರೆ ಭಾರತ ವಿಶ್ವಶ್ರೇಷ್ಠ ರಾಷ್ಟ್ರವಾಗಲಿದೆ ಎಂದು ಹೇಳಿದರು.
ಅನ್ನ ದೇವರ ಮುಂದೆ, ಇನ್ನೂ ದೇವರು ಉಂಟೆ, ಅನ್ನವ ಇರುವತನಕ ಜಗದೊಳ ಪ್ರಾಣ. ಅನ್ನವೇ ದೇವರು ಎಂದ ಸರ್ವಜ್ಞ ಹೇಳಿದಂತೆ ಅನ್ನ ಬೆಳೆಯುವ ರೈತರಿಗೆ ಮುಂದಿನ ದಿನಗಳಲ್ಲಿ ಎಲ್ಲಿಲ್ಲದ ಬೇಡಿಕೆ ಬರಲಿದೆ. ಸರ್ಕಾರ ಅನ್ನ ಬೆಳೆಯುವ ರೈತನಿಗೆ ಎಲ್ಲ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು. ಶರಣ ಸಿದ್ಧರಾಮ ಯಳವಂತಗಿ ವಚನ ಪ್ರಾರ್ಥನೆ ನಡೆಸಿಕೊಟ್ಟರು.
ಶಿವರಾಜ ಕರಹರಿ, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಮೋಹನ ಕಟ್ಟಿಮನಿ, ಮುಖಂಡ ಶಿವುಪುತ್ರ ಮುಂಗಾಣೆ, ಶಿವಾನಂದ ದಂಡೆ, ಜಗದೇವಿ ಧುತ್ತರಗಾಂವ, ಬಸವಕಲ್ಯಾಣದ ಬಸವಲಿಂಗ ಸುಬೇದಾರ, ಶಿವುಕುಮಾರ ನಾಡಗೌಡ, ಸುತ್ತಮುತ್ತಲಿನ ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು. ಕಲ್ಯಾಣಿ ತುಕಾಣೆ ತಡಕಲ್ ಅವರು ಹಂತಿ ಪದ ಹಾಗೂ ಜಾನಪದ ಗೀತೆಗಳ ಮೂಲಕ ಎಳ್ಳ ಅಮಾವಾಸ್ಯೆ ಹಬ್ಬ ಹಾಗೂ ಶರಣ ವಕ್ಕಲಿಗ ಮುದ್ದಣ್ಣನವರು ಕೃಷಿಗೆ ನೀಡಿದ ಕೊಡುಗೆ ವಿವರಿಸಿದರು. ಶಿವಪುತ್ರ ಮಂಗಾಣೆ ಸ್ವಾಗತಿಸಿದರು. ಕ್ಷೇಮ ಲಿಂಗ ಬಿರಾದಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.