ಮಂತ್ರದ ಉಂಗುರ ಗಾಳಿಯಲಿ ತೇಲಿತು!


Team Udayavani, Jan 25, 2018, 2:59 PM IST

1000.jpg

ಮೇಲಕ್ಕೆಸೆದ ಎಲ್ಲ ವಸ್ತುಗಳು ಕೆಳಕ್ಕೆ ಬೀಳಲು ಏನು ಕಾರಣ ಹೇಳಿ?…ಹಾಂ, ಭೂಮಿಯ ಗುರುತ್ವಾಕರ್ಷಣಾ ಶಕ್ತಿಯೇ ಅದಕ್ಕೆ ಕಾರಣ. ಆ ಶಕ್ತಿಗೇ ಚಾಲೆಂಜ್‌ ಹಾಕಿ, ವಸ್ತುವನ್ನು ಗಾಳಿಯಲ್ಲಿ ಚಲಿಸುವಂತೆ ಮಾಡೋ ಜಾದು ಗೊತ್ತಿದೆಯಾ ನಿಮಗೆ?

ಬೇಕಾಗುವ ವಸ್ತುಗಳು: ರಬ್ಬರ್‌ ಪೆನ್ಸಿಲ್‌, ಉಂಗುರ, ಪ್ಲಾಸ್ಟಿಕ್‌ ಗಮ್‌ ಟೇಪ್‌, ಕಪ್ಪು ನೂಲು

ಪ್ರದರ್ಶನ: ಜಾದೂಗಾರ ಕೈಯಲ್ಲಿ ಒಂದು ಪೆನ್ಸಿಲ್‌ ಹಿಡಿದಿರುತ್ತಾನೆ. ಅದರೊಳಗೆ ಉಂಗುರವಿರುತ್ತದೆ. ಯಾವುದೋ ಮಂತ್ರವನ್ನು ಜಪಿಸುತ್ತಾನೆ. ಆಗ ಪೆನ್ಸಿಲ್‌ನೊಳಗಿದ್ದ ಉಂಗುರ ಮೇಲಕ್ಕೆ ತೇಲುತ್ತದೆ. 

ತಯಾರಿ: ಈ ಮ್ಯಾಜಿಕ್‌ನ ರಹಸ್ಯ ಅಡಗಿರುವುದು ಕಪ್ಪು ನೂಲಿನಲ್ಲಿ. ಪ್ಲಾಸ್ಟಿಕ್‌ ಟೇಪ್‌ನ ಸಹಾಯದಿಂದ ಕಪ್ಪು ನೂಲಿನ ಒಂದು ತುದಿಯನ್ನು ಪೆನ್ಸಿಲ್‌ನ ರಬ್ಬರ್‌ ಇರುವ ಜಾಗದ ತುಸು ಕೆಳಗೆ ಅಂಟಿಸಿ. ಆ ನೂಲಿನ ಇನ್ನೊಂದು ತುದಿಯನ್ನು ಅಂಗಿಯ ಬಟನ್‌ ಅಥವಾ ಬೆಲ್ಟ್ನ ತೂತಿಗೆ ನಾಜೂಕಾಗಿ ಸಿಕ್ಕಿಸಿಕೊಳ್ಳಿ. ನೂಲು ತೀರಾ ಉದ್ದ ಇರುವುದು ಬೇಡ. ಪೆನ್ಸಿಲ್‌ಅನ್ನು ಚಿತ್ರದಲ್ಲಿ ತೋರಿಸಿದಂತೆ ಉದ್ದಕ್ಕೆ ಹಿಡಿದು, ಕೈಯನ್ನು ಮುಂಚಾಚಿದಾಗ ಸಿಗುವ ಅಂತರದಷ್ಟೆ ಉದ್ದವಿರಲಿ ನೂಲು. 

ಈಗ ಉಂಗುರವನ್ನು ಪೆನ್ಸಿಲ್‌ ಮತ್ತು ನೂಲಿನ ನಡುವಿಂದ ತೂರಿಸಿ. ಈಗ ಇನ್ನೊಂದು ಕೈಯಿಂದ ನೂಲನ್ನು ಕೆಳಗಿನಿಂದ ಎಳೆದರೆ, ನೂಲು ಬಿಗಿಯಾಗಿ ಉಂಗುರ ಮೇಲಕ್ಕೆ ಚಲಿಸುತ್ತಿದೆಯೆಂದು ಖಾತರಿಪಡಿಸಿಕೊಳ್ಳಿ. ಈಗ ಪ್ರದರ್ಶನ ನೀಡುವ ಸಮಯದಲ್ಲಿ ನೂಲಿನ ಕೆಳತುದಿಯನ್ನು ಬೆಲ್ಟ್ ಅಥವಾ ಅಂಗಿಯ ಗುಂಡಿಗೆ ಕಟ್ಟಿರುವುದರಿಂದ ಯಾವ ಕೈಯಲ್ಲಿ ಪೆನ್ಸಿಲ್‌ ಹಿಡಿದಿದ್ದೀರೋ, ಅದೇ ಕೈಯನ್ನು ಮುಂದಕ್ಕೆ ಚಾಚಿದಾಗ, ನೂಲು ಬಿಗಿಗೊಂಡು ಉಂಗುರ ಮೇಲಕ್ಕೆ ಏರುತ್ತೆ. ದೂರದಿಂದ ನೋಡಿದಾಗ ಉಂಗುರವು ಗಾಳಿಯಲ್ಲಿ ತೇಲಿದಂತೆ ಕಾಣಿಸುತ್ತದೆ.

ನೂಲು ಕಾಣಿಸದಿರಲೆಂದೇ ಕಪ್ಪು ನೂಲನ್ನು ಬಳಸಬೇಕು. ಗಾಢ ಬಣ್ಣದ ಬಟ್ಟೆ ಧರಿಸುವುದೂ ಮ್ಯಾಜಿಕ್‌ಗೆ ಸಹಾಯಕ. ಜೊತೆಗೆ ಪ್ರದರ್ಶನದ ವೇಳೆ ಬೆಳಕು ಆದಷ್ಟು ಮಂದವಿದ್ದರೆ ಒಳ್ಳೆಯದು. ಪ್ರದರ್ಶನಕ್ಕೂ ಮುನ್ನ ಈ ಜಾದೂವನ್ನು ಅಭ್ಯಾಸ ಮಾಡಿ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

15-rain

Rain: ಕಳಸ ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸಂಪರ್ಕ ಕಡಿತ

ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

Hubli; ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

14-panaji

Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.