ವಜ್ರದ ಕಲ್ಲುಗಳು!


Team Udayavani, Jan 25, 2018, 3:24 PM IST

9999.jpg

ಒಂದು ಊರಿನಲ್ಲಿ ಗುಂಡ ಎಂಬ ಹುಡುಗನಿದ್ದ. ಆತನಿಗೆ ತಂದೆ ತಾಯಿ ಯಾರು ಇರಲಿಲ್ಲ. ಆತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಅವನು ಬಡವನಾಗಿದ್ದ ನಿಜ. ಆದರೆ ಅವನಲ್ಲಿ ಮಹತ್ವಾಕಾಂಕ್ಷೆ ತುಂಬಾ ಇತ್ತು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಅರ್ಥಪೂರ್ಣವಾಗಿ ಬದುಕಬೇಕು, ಎಂಬೆಲ್ಲಾ ಕನಸುಗಳು ಆತನಿಗಿದ್ದವು. ಅದಕ್ಕೆ ಹಣದ ಅವಶ್ಯಕತೆ ಇದೆ ಎಂಬ ಸತ್ಯ ಅವನಿಗೆ ತಿಳಿದಿತ್ತು. ಹೀಗಾಗಿಯೇ ತನ್ನೆಲ್ಲಾ ಆಸೆ, ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ತನ್ನ ಹಣೆಯಲ್ಲಿ ಭಗವಂತ ಏನು ಬರೆದಿದ್ದಾನೋ ಹಾಗೇ ಆಗಲಿ ಎಂದು ಅವನ ಮೇಲೆ ಭಾರ ಹಾಕಿ ಬದುಕುತ್ತಿದ್ದ. 

ಒಂದು ದಿನ ಗುಂಡ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ನದಿ ದಂಡೆಯಲ್ಲಿ ಹೊಳೆಯುತ್ತಿದ್ದ ಐದಾರು ಕಲ್ಲುಗಳು ಸಿಕ್ಕವು. ನೀರಿನ ಹರಿವಿಗೆ ಸಿಕ್ಕು ಅದೆಲ್ಲಿಂದಲೋ ಬಂದು ಅಲ್ಲಿ ಸೇರಿದ್ದವು. ಅವುಗಳು ಸಾಮಾನ್ಯ ಕಲ್ಲಾಗಿರಲು ಸಾಧ್ಯವೇ ಇಲ್ಲ ಎನ್ನುವುದು ಅವನಿಗೆ ಗೊತ್ತಾಗಿಹೋಯಿತು. ಇಂಥ ಕಲ್ಲುಗಳಿಗೇ, ಹೊಳಪು ಕೊಟ್ಟು ವಜ್ರಗಳನ್ನು ತಯಾರಿಸುತ್ತಾರೆ ಎನ್ನುವುದು ಅವನಿಗೆ ತಿಳಿದಿತ್ತು. ತನ್ನೆಲ್ಲಾ ಕನಸುಗಳನ್ನು ಪೂರೈಸಿಕೋ ಎಂದೇ ದೇವರು ಈ ಕಲ್ಲುಗಳನ್ನು ತನಗೆ ನೀಡಿದ್ದಾನೆ ಎಂದು ಗುಂಡ ತಿಳಿದ. ಅವನು ಭಗವಂತನನ್ನು ಕೃತಜ್ಞತೆಯಿಂದ ಸ್ಮರಿಸಿದ. 

ಆ ಕಲ್ಲುಗಳನ್ನು ಜೇಬಿನಲ್ಲಿಟ್ಟುಕೊಂಡು ಸಂತಸದಿಂದ ಭವಿಷ್ಯದ ಕುರಿತು ಯೋಚಿಸುತ್ತಾ ನಡೆದು ಹೋಗುತ್ತಿದ್ದ. ದಾರಿಯಲ್ಲಿ ಆರ್ತನಾದವೊಂದು ಕೇಳಿಸಿತು. ಜಿಂಕೆಯೊಂದು ಬೇಡನ ಬಳಿ ಸಿಕ್ಕಿಬಿದ್ದಿತ್ತು. ತನ್ನ ಸಾವು ಖಚಿತವೆಂದು ತಿಳಿದ ಜಿಂಕೆ ಸಹಾಯಕ್ಕಾಗಿ ಕೂಗಿಕೊಳ್ಳತೊಡಗಿತ್ತು. ಗುಂಡ, ಕೂಗು ಕೇಳಿಬಂದ ಸ್ಥಳವನ್ನು ತಲುಪಿದ. ಗುಂಡನನ್ನು ಕಂಡ ಜಿಂಕೆ ಅವನ ಕಣ್ಣಲ್ಲಿ ಅನುಕಂಪವನ್ನು ಗ್ರಹಿಸಿತು. ಅದಕ್ಕೇ ಅದು ಗುಂಡನಲ್ಲಿ ತನ್ನನ್ನು ಬಿಡಿಸುವಂತೆ ಕೇಳಿಕೊಂಡಿತು. 

ಜಿಂಕೆಯ ನೋವು ಕಂಡು ಮರುಗಿದ ಗುಂಡ ಅದನ್ನು ಬಿಟ್ಟುಬಿಡುವಂತೆ ಬೇಡನನ್ನು ವಿನಂತಿಸಿಕೊಂಡ. ಆದರೆ ಬೇಡ ಅದಕ್ಕೊಪ್ಪಲಿಲ್ಲ. ಜಿಂಕೆಯನ್ನು ಸಂತೆಯಲ್ಲಿ ಮಾರಾಟ ಮಾಡುವುದಾಗಿ ಹೇಳಿದ. ಜಿಂಕೆಗೆ ಸಹಾಯ ಮಾಡಲೇಬೇಕೆಂದಿದ್ದರೆ ಸಾವಿರ ವರಹವನ್ನು ಕೊಟ್ಟು ಬಿಡಿಸಿಕೋ ಎನ್ನುತ್ತಾನೆ. “ನನ್ನ ಬಳಿ ಅಷ್ಟೊಂದು ದೊಡ್ಡ ಮೊತ್ತವಿಲ್ಲ’ ಎಂದಾಗ ಬೇಡ ಅಲ್ಲಿ ನಿಲ್ಲದೆ ಹೊರಟುಬಿಡುತ್ತಾನೆ. ಆಗ ಗುಂಡನಿಗೆ ತನ್ನ ಬಳಿ ಅಮೂಲ್ಯವಾದ ಕಲ್ಲುಗಳು ಇರುವುದು ನೆನಪಾಗುತ್ತದೆ. 

ಹಿಂದೆಮುಂದೆ ಯೋಚಿಸದೆ ಅವುಗಳನ್ನೇ ಬೇಡನಿಗೆ ನೀಡಿ ಜಿಂಕೆಯನ್ನು ಬಿಡಿಸಿಕೊಳ್ಳುತ್ತಾನೆ. ತನ್ನ ಕನಸು, ಭವಿಷ್ಯವನ್ನು ಒತ್ತೆಯಿಟ್ಟು ತನ್ನನ್ನು ಪಾರು ಮಾಡಿದ ಗುಂಡನನ್ನು ಜಿಂಕೆ ಮನಸಾರೆ ಕೃತಜ್ಞತೆ ಸಲ್ಲಿಸುತ್ತದೆ. ಗುಂಡ ತನ್ನ ಬದುಕನ್ನು ರೂಪಿಸಿಕೊಳ್ಳುವ ಏಕೈಕ ಅವಕಾಶವನ್ನು ಕೈಚೆಲ್ಲಿಕೊಂಡದ್ದಕ್ಕಿಂತ ಹೆಚ್ಚಾಗಿ, ತನ್ನಿಂದ ಒಂದು ಜೀವ ಉಳಿಯಿತಲ್ಲಾ ಎಂದು ಸಂತಸಪಡುತ್ತಾನೆ. 

ಜಿಂಕೆ ತನ್ನ ಜೀವವನ್ನು ಕಾಪಾಡಿದ್ದಕ್ಕೆ ಕೃತಜ್ಞತೆಯ ರೂಪದಲ್ಲಿ ತನ್ನ ಗೂಡಿನಲ್ಲಿದ್ದ ಒಂದು ಥೈಲಿಯನ್ನು ನೀಡಿತು. ಆ ಥೈಲಿಯಲ್ಲಿ ನದಿದಂಡೆಯಲ್ಲಿ ಸಿಕ್ಕಂಥದ್ದೇ ಹದಿನೈದಿಪ್ಪತ್ತು ಕಲ್ಲುಗಳಿದ್ದವು! ಗುಂಡ ಅದನ್ನು ತನ್ನ ಜತೆಯಲ್ಲಿ ತೆಗೆದುಕೊಂಡು ಹೋಗಿ, ಮುಂದಿನ ದಿನವನ್ನು ಸುಖವಾಗಿ ಆನಂದದಿಂದ ಕಳೆಯುತ್ತಾನೆ.

– ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ

Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್‌, ಸಾವಿನ ಸಂಖ್ಯೆ 90ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.