ಹತ್ತಿ, ತೊಗರಿ ಲಾಭ ತೆಗಿರೀ..


Team Udayavani, Feb 19, 2018, 8:15 AM IST

b-1.jpg

ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಉಬ್ಬನಹಳ್ಳಿಯ ಕುಮಾರ್‌ ಅಡಿಕೆ ಸಸಿಗಳ ನಡುವೆ ಹತ್ತಿ ಮತ್ತು ತೊಗರಿ ಕೃಷಿ ಮಾಡುತ್ತಿದ್ದಾರೆ. ಇದೇನು ವಿಚಿತ್ರ ಅನ್ನಬೇಡಿ. ಈ ಪ್ರಯೋಗವನ್ನು ಯಾರು ಬೇಕಾದರೂ ಮಾಡಿ ನೋಡಬಹುದು ಅನ್ನುತ್ತಾರೆ ಕುಮಾರ್‌. 

ಆಯನೂರಿನಿಂದ ಹಾರ್ನಹಳ್ಳಿ ಮೂಲಕ ಸವಳಂಗ ರಸ್ತೆಯಲ್ಲಿ ಸಾಗುವಾಗ ಹೆದ್ದಾರಿ ಪಕ್ಕದಲ್ಲಿಯೇ 1 ಎಕರೆ ಸ್ತೀರ್ಣದ ಇವರ ಹೊಲವಿದೆ. ಅಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ ಕುಮಾರ್‌. ಕಳೆದ ವರ್ಷ ಏಪ್ರಿಲ್‌ ತಿಂಗಳ ಆರಂಭದಲ್ಲಿ ಅಡಿಕೆ ಸಸಿ ನೆಟ್ಟರು.  ನಡು ನಡುವೆ  ಬಾಳೆ,ಹತ್ತಿ ಮತ್ತು ತೊಗರಿ ಕೃಷಿ ಕೈಗೊಂಡರು.

ಅಡಿಕೆ ಸಸಿಗಳಿಂದ ಅರ್ಧ ಅಡಿ ಅಂತರ ಬಿಟ್ಟು ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 2 ಅಡಿ ಅಂತರ ಇರುವಂತೆ ಬಾಳೆ ಗಿಡ ಮತ್ತು ಹತ್ತಿ ಗಿಡ ಬೆಳೆಸಿದ್ದಾರೆ.  ಹೊಲದ ಗಡಿಯ ಸುತ್ತ ತೊಗರಿ ಸಸಿ ಬೆಳೆಸಿದ್ದಾರೆ.   550 ಅಡಿಕೆ ಸಸಿ, 300 ಬಾಳೆ ಗಿಡ ಮತ್ತು 350 ಹತ್ತಿ ಗಿಡ ಮತ್ತು 500 ತೊಗರಿ ಗಿಡದ ಕೃಷಿ ನಡೆಸಿದ್ದಾರೆ.  ಹತ್ತಿ ಗಿಡದ ಬಿತ್ತನೆ ಮಾಡಿ ಒಂದು ವಾರದಲ್ಲಿಯೇ ಮೊಳಕೆಯೊಡೆದು ಎರಡು ಎಲೆಗಳು ಕಾಣಿಸಿಕೊಂಡಿದ್ದವು. ಈ ಹಂತದಲ್ಲಿ 19:19 ಗೊಬ್ಬರ ಹಾಕಿ ಮಣ್ಣು ಏರಿಸಿ ಕೃಷಿ ನಡೆಸಿದರು. ನಂತರ ಪ್ರತಿ 25 ದಿನಕ್ಕೆ ಒಮ್ಮೆಯಂತೆ ಒಟ್ಟು 4 ಸಲ 20:20 ಕಾಂಪ್ಲೆಕ್ಸ್‌ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ಅಲ್ಲದೆ ಪ್ರತಿ 20 ದಿನಕ್ಕೆ ಒಮ್ಮೆಯಂತೆ 3 ಸಲ ಎಲೆ ಮತ್ತು ಕಾಂಡ ಕೊರಕ ನಿಯಂತ್ರಣ ಔಷಧ ಮತ್ತು ಹೂ ಮೊಗ್ಗು ಬಿಟ್ಟ ಸಮಯದಲ್ಲಿ ಪ್ರತಿ 10 ದಿನಕ್ಕೆ ಒಮ್ಮೆಯಂತೆ 2 ಸಲ ಕೀಟ ನಾಶಕ ಸಿಂಪಡಿಸಿದ್ದಾರೆ. 

ತೊಗರಿ ಬೀಜ ಬಿತ್ತನೆ ಮಾಡಿ ಸಸಿಯಾಗುತ್ತಿದ್ದಂತೆ ಕಾಂಪ್ಲೆಕ್ಸ್‌ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ತೊಗರಿ ಗಿಡಕ್ಕೆ ಪ್ರತಿ 3 ದಿನಕ್ಕೆ ಒಮ್ಮೆಯಂತೆ 3 ಸಲ ಗೊಬ್ಬರ ನೀಡಿದ್ದಾರೆ. ಈ ಪ್ರದೇಶದಲ್ಲಿ ಮಳೆ ಪ್ರಮಾಣ ಕಮ್ಮಿ. ಹೀಗಾಗಿ ಕೊಳವೆ ಬಾವಿ ನೆರವಾಗಿದೆ. 

ಲಾಭ ಹೇಗೆ ?
ಅಡಿಕೆ ಮತ್ತು ಬಾಳೆ ಸಸಿಗಳ ನಡುವೆ ಬೆಳೆದ ಹತ್ತಿ ಫ‌ಸಲು ಉತ್ತಮ ಆದಾಯ ನೀಡಿದೆ. ನವೆಂಬರ್‌ ಮೂರನೇ ವಾರದಿಂದ ಡಿಸೆಂಬರ್‌ 2 ನೇ ವಾರದ ವರೆಗೆ ಮೂರು ಹಂತದಲ್ಲಿ ಹತ್ತಿಯ ಫ‌ಸಲು ಕಿತ್ತಿದ್ದಾರೆ. 350 ಹತ್ತಿ ಗಿಡಗಳಿಂದ ಒಟ್ಟು  5 ಕ್ವಿಂಟಾಲ್‌ ಹತ್ತಿ  ದೊರೆತಿದೆ. ಕ್ವಿಂಟಾಲ್‌ ಒಂದಕ್ಕೆ ರೂ.7,500 ರೂ. ನಂತೆ ಮಾರಾಟವಾಗಿದೆ.  ಇದರಿಂದ ಇವರಿಗೆ ರೂ.37000ಅದಾಯ ದೊರೆತಿದೆ. ಬೀಜ ಖರೀದಿ, ಗೊಬ್ಬರ, ಕೂಲಿ ನಿರ್ವಹಣೆ, ಔಷಧ ಸಿಂಪಡಣೆ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.8 ಸಾವಿರ ಖರ್ಚಾಗಿದೆ. ರೂ.29 ಸಾವಿರ ನಿವ್ವಳ ಲಾಭ. ಇದರಂತೆ ಫೆಬ್ರವರಿ ಮೊದಲ ವಾರ ತೊಗರಿ ಫ‌ಸಲು ಕಟಾವು ಮಾಡಿ ಮಾರಾಟ ಮಾಡಿದ್ದಾರೆ. 400 ತೊಗರಿ ಗಿಡದಿಂದ ಗಿಡವೊಂದಕ್ಕೆ ಸರಾಸರಿ 1.5 ಕಿ.ಗ್ರಾಂ. ನಂತೆ 6 ಕ್ವಿಂಟಾಲ್‌ ತೊಗರಿ ಫ‌ಸಲು ದೊರೆತಿದೆ. ಕ್ವಿಂಟಾಲ್‌ ಒಂದಕ್ಕೆ ರೂ.6,000ನಂತೆ ಮಾರಾಟವಾಗಿದೆ. ಇದರಿಂದ ಇವರಿಗೆ ರೂ.36 ಸಾವಿರ ಆದಾಯ ದೊರೆತಿದೆ. ಖರ್ಚು ರೂ.8 ಸಾವಿರ ಬಂದಿದ್ದು ನಿವಳ ರೂ.28 ಸಾವಿರ ಲಾಭ. ಹೀಗೆ ಬಹುವಾರ್ಷಿಕ ಬೆಳೆಯ ಅಡಿಕೆ ಸಸಿಗಳ ನಡುವೆ ಅಂತರ್‌ ಬೆಳೆಯಾಗಿ ಇವರು ಹತ್ತಿ ಮತ್ತು ತೊಗರಿ ಕೃಷಿ ಮಾಡಿ  ಸುತ್ತಮುತ್ತಲ ರೈತರ ಗಮನ ಸೆಳೆದಿದ್ದಾರೆ.

ಮಾಹಿತಿಗೆ- 9945665928 

ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.