ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಮೇಷ್ಟ್ರು ಬಂದೂಕು ಹಿಡಿದರು!’


Team Udayavani, Mar 6, 2018, 11:16 AM IST

2802IRL(2).jpg

ಈಶ್ವರಮಂಗಲ : ಬಾಲ್ಯದಲ್ಲಿ ಸಿಕ್ಕ ಉತ್ತಮ ಮಾರ್ಗದರ್ಶನ, ಆರೆಸ್ಸೆಸ್‌ನ ಶಿಸ್ತಿನ ಪಾಠದಿಂದ ಪ್ರೇರಣೆಗೊಂಡು ಸೇನೆಗೆ ಸೇರಿ ದೇಶಸೇವೆಗೆ ಸಮರ್ಪಿಸಿಕೊಂಡವರು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ವಳಂಕ ನಿವಾಸಿ ಹರಿಕೃಷ್ಣ. 
ಕೆ.ವಿ.ದಾಮೋದರ ರಾವ್‌ ಮತ್ತು ಶಶಿಕಲಾ ದಂಪತಿಯ ಪುತ್ರ  ಹರಿಕೃಷ್ಣ, ಬರೆಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಜಿರೆ ಎಸ್‌ಡಿಎಂಸಿ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಿಂದ ಸಂಸ್ಕೃತ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಳ್ತಂಗಡಿ ಸರಕಾರಿ ಕಾಲೇಜು, ಬಂಟ್ವಾಳ ಎಸ್‌ವಿಎಸ್‌, ಬಸ್ರೂರು ಶ್ರಿ ಶಾರದಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ ದೇಶಸೇವೆಯ ತುಡಿತ ಆರೆಸ್ಸೆಸ್‌ ಶಾಖೆಗೆ ಹೋಗುತ್ತಿದ್ದ ಹರಿಕೃಷ್ಣ ಅವರು, ಕಾರ್ಯಕರ್ತ ರಾಗಿಯೂ ಕೆಲಸ ಮಾಡಿದ್ದರು. ಆದ್ದರಿಂದ ಸೇನೆಗೆ ಸೇರುವ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. ಉಪನ್ಯಾಸಕರಾಗಿದ್ದವರು ಸೇನೆಗೆ ಸೇರಲು ಬಯಸಿ ಮಂಗಳೂರಿನ ಕೂಳೂರಿನಲ್ಲಿ ನಡೆದ ಪರೀಕ್ಷೆಗಳನ್ನು ಎದುರಿಸಿ, ಪ್ರಥಮ ಪ್ರಯತ್ನದಲ್ಲೇ ಸೇನೆಗೆ ಸೇರ್ಪಡೆಯಾದರು. ತರಬೇತಿ ಸಂದರ್ಭದಲ್ಲೇ ಹರಿಕೃಷ್ಣ ಅವರ ಸಾಮರ್ಥ್ಯ ನೋಡಿದ ಮೇಲಧಿಕಾರಿಗಳು ಅವರನ್ನು ಜಮ್ಮು-ಕಾಶ್ಮೀರದ ಪಠಾಫಿಣ್‌ದಲ್ಲಿ ಆರನೇ ಎಂಜಿನಿಯರ್‌ ರೆಜಿಮೆಂಟ್‌ನಲ್ಲಿ ನಿಯೋಜಿಸಿದರು. ನೇರವಾಗಿ ಜೂನಿಯರ್‌ ಕಮಿಷನ್‌x ಆಫೀಸರ್‌ ಸ್ಥಾನಕ್ಕೆ ಆಯ್ಕೆಯಾದ ಅಗ್ಗಳಿಕೆ ಇವರದ್ದು. 2006ರಿಂದ ಕಾಶ್ಮೀರ, ಕೋಲ್ಕತಾ, ಪಂಜಾಬ್‌ಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಅಸ್ಸಾಂನ ಹಾಥೀಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಅವಿಭಕ್ತ ಕುಟುಂಬ 
ದಾಮೋದರ್‌ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಹರಿಕೃಷ್ಣ. ಅವರ ಪತ್ನಿ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ
ಯಾಗಿದ್ದಾರೆ. ಪುತ್ರಿಯರಾದ ಹರ್ಷಿತಾ, ಮನ್ವಿತಾ ಎಸ್‌ಡಿಎಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡನೇ ಪುತ್ರ ಗುರುಪ್ರಸಾದ ಕೆ.ವಿ. ಪುರೋಹಿತರಾಗಿದ್ದು, ಇವರು ಪತ್ನಿ ಪಲ್ಲವಿ, ಪುತ್ರ ಅಪ್ರಮೇಯ ರೊಂದಿಗಿದ್ದಾರೆ. ಮೂರನೆಯವರಾದ ಪುತ್ರಿ ಪವಿತ್ರಾರವರು ಸುಳ್ಯದ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅಳಿಯ ನವೀನ್‌ ಪೌರೋಹಿತ್ಯ ನಡೆಸುತ್ತಿದ್ದಾರೆ. ಇವರಿಗೂ ಇಬ್ಬರು ಮಕ್ಕಳಿದ್ದಾರೆ.

ಮರೆಯದ  ನೆನಪುಗಳು
2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದಾಗ, ನಮ್ಮ ತಂಡ ಅನತಿ ದೂರದಲ್ಲಿತ್ತು. ಈ ವೇಳೆ ಆತಂಕವಾಗಿದ್ದರೂ, ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದೆವು. 

ಕಾರ್ಯನಿಮಿತ್ತ ಚೀನದ ಗಡಿಪ್ರದೇಶಗಳಾದ ತವಾಂಗ್‌ಗೆ ಭೇಟಿ ನೀಡಿದ್ದೆ. ಇಲ್ಲಿನ ಜದ್ವಂತ್‌ ಘರ್‌ ಯುದ್ಧ ಸ್ಮಾರಕ, ಶೀಲಾಟಾಪ್‌ ನೌರಾಟಾಪ್‌ ರೋಮಾಂಚಕಾರಿ ಹಾಗೂ ಅವಿಸ್ಮರಣೀಯ ಸ್ಥಳಗಳು ಎನ್ನುತ್ತಾರೆ ಹರಿಕೃಷ್ಣ.

ದೇಶಸೇವೆ ಯಿಂದ ಧನ್ಯ
ರಾಷ್ಟ್ರ ರಕ್ಷಣೆ ಕಾಯಕದಲ್ಲಿ ಸಿಗುವ ಧನ್ಯತೆಯ ಭಾವ ಬೇರೆ ಯಾವ ಉದ್ಯೋಗ ದಲ್ಲೂ ಸಿಗಲು ಸಾಧ್ಯವಿಲ್ಲ. ಸೈನಿಕನಾಗಿ ಸೇವೆ ಸಲ್ಲಿಸಲು ಎಲ್ಲ ಗುರು-ಹಿರಿಯರ ಆಶೀರ್ವಾದ ಹಾರೈಕೆಯೇ ಕಾರಣ. ಪತ್ನಿಯ ಪ್ರೋತ್ಸಾಹದ ಮಾತುಗಳು ನನ್ನ ಮನೋಬಲ ಹೆಚ್ಚಿಸಿತ್ತು. 
 ಹರಿಕೃಷ್ಣ

ದೇಶಸೇವೆಗಿಂತ ಮಿಗಿಲಾದ ಸೇವೆ ಬೇರೊಂದಿಲ್ಲ. ಮಗನ ಸೇವೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಮಗನ ಶ್ರೇಯಸ್ಸನ್ನೇ ಬಯಸುತ್ತೇವೆ. ಆತನ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ.
 ಶಶಿಕಲಾ-ದಾಮೋದರ ರಾವ್‌ ಕೆ.ವಿ, ಹೆತ್ತವರು

ದೇಶ ಕಾಯುವ ಸೈನಿಕನ ಪತ್ನಿ ಎಂಬುದಕ್ಕೆ ನನಗೆ ಅತೀವ ಹೆಮ್ಮೆಯಿದೆ. ಶಿಕ್ಷಕಿಯಾಗಿ ನಾನು ಬೋಧನೆ ಮಾಡುವ ವೇಳೆ ವಿದ್ಯಾರ್ಥಿಳಲ್ಲೂ ದೇಶಪ್ರೇಮ ಮೈಗೂಡಿಸಿಕೊಳ್ಳಲು ಹೇಳುತ್ತೇನೆ.  
 ಕವಿತಾ ಹರಿಕೃಷ್ಣ, ಪತ್ನಿ

ಮಾಧವ ನಾಯಕ್‌. ಕೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.