“ಅಂಧ’ ಚೆಂದದ ಹಾಡು


Team Udayavani, Mar 8, 2018, 4:20 PM IST

hadu.jpg

ಅಲ್ಲಿ ಯಾರಿಗೂ ಕಣ್ಣಿಲ್ಲ. ಸ್ವರಸಾಗರದಲ್ಲಿ ಮಿಂದೇಳಲು ಕಣ್ಣು ಬೇಕಂತಲೂ ಇಲ್ಲ. ರಾಗಗಳಲ್ಲಿಯೇ ಜಗವ ತೋರಿಸುವ ಜಾದೂ ಕಲೆ ಅದು ಎನ್ನುವುದನ್ನು ಬಲ್ಲವರು ರಾಧಿಕಾ ಆರ್‌.ಕಾಂತನವರ್‌. ರಾಯಚೂರಿನ ಮಾಣಿಕ್‌ ಪ್ರಭು ಅಂಧಮಕ್ಕಳ ಶಾಲೆಗೆ ಹೋದರೆ ಅಲ್ಲಿವರು, ಲೋಕ ನೋಡದ ಜೀವಗಳೆದುರು ರಾಗಾಲಾಪದಲ್ಲಿ ತಲ್ಲೀನರು.

ಸತತ 17 ವರ್ಷಗಳಿಂದ ಅಂಧ ಮಕ್ಕಳಿಗೆ ಉಚಿತ ಸಂಗೀತ ಕಲಿಸುತ್ತಿದ್ದಾರೆ, ರಾಧಿಕಾ. ಕೀಲುನೋವಿನಿಂದ ಹಾಸಿಗೆ ಹಿಡಿದು, ಖನ್ನತೆಗೆ ಜಾರಿದ್ದ ಇವರನ್ನು ಮತ್ತೆ ಚೈತನ್ಯಶೀಲರನ್ನಾಗಿಸಿದ್ದು ಕೂಡ ಇದೇ ಸಂಗೀತವೇ. ತಮ್ಮಿಂದ ಏನೂ ಸಾಧಿಸಲಾಗದು ಎಂದು ಕೈಕಟ್ಟಿ ಕುಳಿತಾಗ, ಪತಿ ರಾಘವೇಂದ್ರ ವಿ. ಕಾಂತನವರ್‌, “ಅಸಹಾಯಕ ಸ್ಥಿತಿಯಲ್ಲೂ ನೀನು ಸಾಧಿಸಬಲ್ಲೆ’ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದೇ, ಇವರ ಬದುಕಿನ ಟರ್ನಿಂಗ್‌ ಪಾಯಿಂಟ್‌. ಮನೆಯಲ್ಲಿನ ಸಂಗೀತದ ವಾತಾವರಣ ಅವರ ಕೈಹಿಡಿಯಿತು. ಮೂಲತಃ ಹುಬ್ಬಳ್ಳಿಯ ರಾಧಿಕಾ, ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್‌ ಸಾಧಿಸಿದಾಕೆ. ಅಂಧ ಮಕ್ಕಳಿಗೆ ನಯಾಪೈಸೆ ಗುರುದಕ್ಷಿಣೆ ಪಡೆಯದೇ, ಸಂಗೀತ ಹೇಳಲು ನಿರ್ಧರಿಸಿಬಿಟ್ಟರು.

ಅಂದಹಾಗೆ, ರಾಧಿಕಾ ದಂಪತಿ ತಮಗೆ ಮಕ್ಕಳೇ ಬೇಡವೆಂದು, ಈ ಅಂಧಮಕ್ಕಳನ್ನೇ ಸ್ವಂತ ಮಕ್ಕಳಂತೆ ಕಾಣುತ್ತಿದ್ದಾರೆ. ಸಂಗೀತದಲ್ಲಿ ವಿದ್ವತ್‌ ಪಡೆದ ರಾಧಿ ಕಾ ಅವರು ದೊಡ್ಡ ಸಂಗೀತ ಸಾಧಕಿಯಾಗುವ ಕನಸು ಹೊತ್ತಿದ್ದರು. ಅವರ ಕನಸನ್ನು ಅವರ ಶಿಷ್ಯರು ಈಡೇರಿಸುವ ಹಾದಿಯಲ್ಲಿದ್ದಾರೆ. 22 ಅಂಧ ಮಕ್ಕಳು ಜ್ಯೂನಿಯರ್‌ ಪರೀಕ್ಷೆ ಪಾಸಾದರೆ, ಒಬ್ಬ ವಿದ್ಯಾರ್ಥಿ ಸೀನಿಯರ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಾನೆ.

– ಸಿದ್ಧಯ್ಯಸ್ವಾಮಿ ಕುಕನೂರು, ರಾಯಚೂರು

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.