ಜನಾಶೀರ್ವಾದ ಯಾತ್ರೆ ಮೂಲಕ ಜನರಿಗೆ ಕಿರಿಕಿರಿ : ಬಿಜೆಪಿ ಆರೋಪ
Team Udayavani, Mar 23, 2018, 7:50 AM IST
ಕಾಪು: ಜನಾಶೀರ್ವಾದ ಯಾತ್ರೆಯ ಹೆಸರಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಕರಾವಳಿಯಾದ್ಯಂತ ನಡೆಸುತ್ತಿರುವ ರ್ಯಾಲಿಯಿಂದಾಗಿ ಜನಸಾಮಾನ್ಯರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಕಾಪು ಕ್ಷೇತ್ರ ಬಿಜೆಪಿ ಆರೋಪಿಸಿದೆ.
ರಾಹುಲ್ ಗಾಂಧಿ ಪ್ರವಾಸದ ಹಿನ್ನೆಲೆಯಲ್ಲಿ ಪೊಲೀಸರು ಹೆದ್ದಾರಿಯುದ್ದಕ್ಕೂ ವಾಹನಗಳನ್ನು ತಡೆ ಹಿಡಿದಿದ್ದು ಇದರಿಂದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ. ಅಂಬ್ಯುಲೆನ್ಸ್, ಶಾಲಾ ವಾಹನಗಳನ್ನು ಕೂಡಾ ತಡೆ ಹಿಡಿದಿದ್ದರಿಂದಾಗಿ ಅವರು ಪೇಚಾಟ ಅನುಭವಿಸಬೇಕಾಯಿತು. ದೂರದ ಊರಿನಿಂದ ಬರುವ ಸರಕು ವಾಹನಗಳನ್ನು ಗಂಟೆಗಟ್ಟಲೆ ತಡೆ ಹಿಡಿದಿದ್ದರಿಂದ ಅವರ ಸಮಯ ವ್ಯರ್ಥವಾಗುವಂತಾಗಿದೆ ಎಂದು ಬಿಜೆಪಿ ಹೇಳಿದೆ. ಇನ್ನು ಮುಂದಿನ ದಿನಗಳಲ್ಲಿ ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರ ಭೇಟಿ ಕಾರ್ಯಕ್ರಮ ನಡೆಯುವಾಗ ಪೊಲೀಸರು ಮೊದಲೇ ಸುಗಮ ಸಂಚಾರ ವ್ಯವಸ್ಥೆಗೊಳಿಸಲು ಪ್ರಯತ್ನಿಸುವಂತೆ ಕಾಪು ಕ್ಷೇತ್ರ ಬಿಜೆಪಿ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು
Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು
Udupi ಟೆಸ್ಟ್ ಡ್ರೈವ್ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ
Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ
ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ