ಪಾಣೆಮಂಗಳೂರು ನೂತನ ಸೇತುವೆ ಕಾಮಗಾರಿಯಿಂದ ನದಿಗೆ ಮಣ್ಣು


Team Udayavani, Apr 24, 2018, 10:47 AM IST

24-April-4.jpg

ಬಂಟ್ವಾಳ: ರಾಷ್ಟ್ರಿಯ ಹೆದ್ದಾರಿ ಗುಂಡ್ಯ- ಬಿ.ಸಿ. ರೋಡ್‌ ಚತುಷ್ಪಥ ಕಾಮಗಾರಿ ನೂತನ ಸೇತುವೆ ಕಾಮಗಾರಿಗಾಗಿ ಪಾಣೆಮಂಗಳೂರು ಕಾಂಕ್ರೀಟ್‌ ಸೇತುವೆ ತಳದಲ್ಲಿ ನೇತ್ರಾವತಿ ನದಿಗೆ 300ಕ್ಕೂ ಅಧಿಕ ಲೋಡು ಮಣ್ಣು ಸುರಿದು ಕಚ್ಚಾ ರಸ್ತೆ ನಿರ್ಮಾಣ ಆಗುತ್ತಿದೆ.

ಸೇತುವೆಗಾಗಿ ಕಾಂಕ್ರೀಟ್‌ ಪಿಲ್ಲರ್‌ ಗಳನ್ನು ಅಳವಡಿಸುವ ಉದ್ದೇಶಕ್ಕೆ ಡ್ರೆಜ್ಜಿಂಗ್‌ ಯಂತ್ರಗಳನ್ನು ನದಿಯ ನಡುವಿಗೆ ಸಾಗಿಸಲು ಈ ಮಣ್ಣಿನ ರಸ್ತೆ ನಿರ್ಮಾಣ ಆಗುತ್ತಿದೆ. ಈಗಾಗಲೇ ಸುಮಾರು ಮುನ್ನೂರಕ್ಕೂ ಅಧಿಕ ಲೋಡ್‌ ಮಣ್ಣನ್ನು ನದಿಗೆ ಸುರಿಯಲಾಗಿದೆ. ನದಿಯಲ್ಲಿ 200 ಮೀಟರ್‌ ಉದ್ದಕ್ಕೆ, 15 ಅಡಿ ಅಗಲಕ್ಕೆ ಮಣ್ಣು ಸುರಿಯುತ್ತ, ಈಗ ನದಿ ಅರ್ಧಕ್ಕೆ ರಸ್ತೆ ನಿರ್ಮಾಣ ಆಗಿದೆ.

ಪಿಲ್ಲರ್‌ ಎಬ್ಬಿಸುವ ಯೋಜನೆ
ಮಳೆಗಾಲ ಮೊದಲು ಡ್ರೆಜ್ಜಿಂಗ್‌ ಯಂತ್ರದಲ್ಲಿ 25ರಿಂದ 30 ಮೀಟರ್‌ ಆಳಕ್ಕೆ ಕೊರೆದು ಗಟ್ಟಿ ಶಿಲಾ ಪದರ ಸಿಕ್ಕುವಲ್ಲಿಂದ ಪಿಲ್ಲರ್‌ ಎಬ್ಬಿಸುವ ಯೋಜನೆ ರೂಪಿಸಲಾಗಿದೆ. ಮಳೆಗಾಲಕ್ಕೆ ಮೊದಲು ಐದು ಪಿಲ್ಲರ್‌ ನಿರ್ಮಿಸುವ ಯೋಜನೆಯಲ್ಲಿ ಕಾಮಗಾರಿ ತ್ವರಿತ ನಡೆಯುತ್ತಿದೆ. ಸ್ಥಳದಲ್ಲಿಯೇ ಸ್ಟೀಲ್‌ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದು ರಾತ್ರಿ ಹಗಲು ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದೆ. ಡ್ರೆಜ್ಜಿಂಗ್‌ ಮುಗಿಯುವ ಮೊದಲೇ ಮಳೆ ಬಂದು ನೀರು ಬರುವುದನ್ನು ಯೋಜಿಸಿ ಕಾಮಗಾರಿ ತ್ವರಿತವಾಗಿ ಮುಗಿಸುವ ಉದ್ದೇಶ ಹೊಂದಿದೆ.

400 ಮೀ. ಉದ್ದ
ನೂತನ ಸೇತುವೆ 400 ಮೀ. ಉದ್ದ, 12.5 ಮೀ. ಅಗಲ ಇರುವುದು. ಪ್ರಸ್ತುತ ಹತ್ತು ಪಿಲ್ಲರ್‌ ಯೋಜನೆ ಇದೆ. ನೀರಿನ ಅಡಿಯಲ್ಲಿ ಸಮರ್ಪಕ ಶಿಲೆ ಸಿಗದಿದ್ದಲ್ಲಿ ಪ್ಲ್ರಾನ್‌ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ನದಿಯಲ್ಲಿ ಪ್ರಸ್ತುತ 6 ಮೀ. ನೀರು ಇದ್ದು ಮಣ್ಣಿನ ರಸ್ತೆಯನ್ನು 7 ಮೀ. ಎತ್ತರಕ್ಕೆ ನಿರ್ಮಿಸಿದೆ. ನೀರಿನ ಮಟ್ಟದಿಂದ ಮೂರು ಅಡಿಗಳಷ್ಟು ಎತ್ತರಕ್ಕೆ ರಸ್ತೆಯ ಮಟ್ಟ ಇರುವುದು

ಹೂಳು ತೆಗೆಯಲು ಸಾಧ್ಯವಿಲ್ಲ
ಆಧುನಿಕ ತಂತ್ರಜ್ಞಾನ ಬಂದಿದ್ದರೂ ಹಳೆಯ ಕ್ರಮದಲ್ಲಿ ನದಿಗೆ ಮಣ್ಣು ತುಂಬಿಸಿ ಪ್ರಕೃತಿಯನ್ನು ನಾಶ ಮಾಡುವ ಕಾಮಗಾರಿಯನ್ನು ಸಂಬಂಧಪಟ್ಟ ಕಂಪೆನಿ ಮತ್ತು ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯ ಪುನರ್‌ ಪರಿಶೀಲಿಸಬೇಕು. ನದಿಗೆ ಒಮ್ಮೆ ಮಣ್ಣು ತುಂಬಿಸಿದರೆ ಅದನ್ನು ಪುನಃ ತೆಗೆಯಲು ಸಾಧ್ಯವಿಲ್ಲ. ಇದರಿಂದ ನದಿಯಲ್ಲಿ ಹೂಳು ತುಂಬಿಕೊಂಡು ಜಲಚರಗಳ ಸಂತಾನ ನಾಶ, ನದಿ ಪಾತಳಿ ಮೇಲ್‌ಸ್ತರಕ್ಕೆ ಬರುವ ಸಾಧ್ಯತೆಗಳು ಇದೆ.
– ಬಿ.ಎಂ. ಪ್ರಭಾಕರ
ಸಾಮಾಜಿಕ ಕಾರ್ಯಕರ್ತರು

ರಾಜಾ ಬಂಟ್ವಾಳ

ಟಾಪ್ ನ್ಯೂಸ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

11-gadaga

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.