ಶುಚಿ ರುಚಿಗೆ ಕೆ.ಆರ್‌. ನಗರದ ಶ್ರೀ ಟಿಫಾನೀಸ್‌


Team Udayavani, Apr 30, 2018, 6:15 AM IST

shree-tifanies1.jpg

ಯಾವುದೇ ಪ್ರವಾಸಿ ಸ್ಥಳಕ್ಕೆ ಹೋದಾಗ ಸರ್ವೆ ಸಾಮಾನ್ಯವಾಗಿ ನಾವು ಇಲ್ಲಿ ಒಳ್ಳೆಯ ಊಟ, ತಿಂಡಿ ಎಲ್ಲಿ, ಯಾವ ಹೋಟೆಲಲ್ಲಿ ಸಿಗುತ್ತೆ ಎಂಥಾ ಕೇಳೆ¤àವೆ. ಅಲ್ಲದೆ, ಇಲ್ಲಿನ ವಿಶೇಷವಾದ ತಿಂಡಿ ಏನು ಅಂತಾನೂ ವಿಚಾರಿಸುತ್ತೇವೆ. ನಂತರ ತಿಂಡಿ ತಿಂದು ಚೆನ್ನಾಗಿತ್ತು ಅಂದ್ರೆ ಮತ್ತೆ ಆ ಕಡೆ ಹೋದಾಗ ಅದೇ ಹೋಟೆಲ್‌ ಹುಡುಕಿಕೊಂಡು ಹೋಗುತ್ತೇವೆ. ಅಂತಹ ಹೋಟೆಲ್‌ ಒಂದು ಮೈಸೂರು ಜಿಲ್ಲೆಯ ಕೆ.ಆರ್‌.ನಗರದಲ್ಲಿದೆ. ಅದೇ ಶುಚಿ ರುಚಿಗೆ ಹೆಸರಾಗಿರುವ ಹೋಟೆಲ್‌ “ಶ್ರೀ ಟಿಫಾನೀಸ್‌’. ಬೆಣ್ಣೆ ದೋಸೆ ಇಲ್ಲಿನ ವಿಶೇಷವಾದ ಉಪಾಹಾರ. 

60 ವರ್ಷಗಳಿಂದ ನಗರದಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿರುವ ಕೆ.ಸತ್ಯನಾರಾಯಣ ಸೋಮಯಾಜಿಯವರು ಶ್ರೀ ಟಿಫಾನೀಸ್‌ನ ಮಾಲಿಕರು. 1960ರ ದಶಕದಲ್ಲೇ ಅವರು ಅಣ್ಣ ರಾಮಕೃಷ್ಣ ಸೋಮಯಾಜಿ ಜೊತೆ ಪುಟ್ಟ ಹೋಟೆಲ್‌ ಪ್ರಾರಂಭಿಸಿದ್ದರು. ಈ ಸೋಮಯಾಜಿಯವರ ಮಗ ಹೃಷಿಕೇಶ್‌, ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. ಈಗಲೂ ಅವರು ಕಡಿಮೆ ದರದಲ್ಲಿ ಜನರಿಗೆ ಶುಚಿ ಹಾಗೂ ರುಚಿಯಾದ ತಿಂಡಿಯನ್ನು ಕೊಡಬೇಕೆಂಬ ಹಂಬಲವನ್ನೇ ಹೊಂದಿದ್ದಾರೆ. ಹೀಗಾಗಿ ಶ್ರೀ ಟಿಫಾನೀಸ್‌ ಈಗಲೂ ಕೆ.ಆರ್‌.ನಗರದಲ್ಲಿ ಫೇಮಸ್‌. ಈ ಊರಿಗೆ ಬಂದು, ಒಳ್ಳೆ ತಿಂಡಿ ಎಲ್ಲಿ ಸಿಗುತ್ತೆ ಅಂಥಾ ಕೇಳಿದ್ರೆ ಮೊದಲ ಕೇಳಿಬರುವ ಹೆಸರು ಶ್ರೀ ಟಿಫಾನೀಸ್‌ನದ್ದೇ. ಇಲ್ಲಿನ ಚುಂಚನಕಟ್ಟಿ ಫಾಲ್ಸ್‌ ವೀಕ್ಷಣೆಗೆ, ಅರಕೇಶ್ವರ ದೇಗುಲ, ಜಾತ್ರೆಗೆಂದು ಬರುವವರು ಶ್ರೀ ಟಿಫಾನೀಸ್‌ನಲ್ಲಿ ತಿಂಡಿ ತಿನ್ನುತ್ತಾರೆ.

ಇಲ್ಲಿನ ಪ್ರಮುಖ ತಿಂಡಿ:
ಬೆಳಗ್ಗೆ 7.30 ರಿಂದ 11.30, ಸಂಜೆ 4ರಿಂದ 7.30 ವರೆಗೆ ತೆರೆದಿರುವ ಈ ಶ್ರೀ ಟಿಫಾನೀಸ್‌ನಲ್ಲಿ ವಿಶೇಷ ತಿಂಡಿಯಾದ ಬೆಣ್ಣೆದೋಸೆ 2ಕ್ಕೆ 28 ರೂ., ಮಸಾಲೆ ದೋಸೆ 37 ರೂ., ಒಂದು ಪ್ಲೇಟ್‌ ಬೋಂಡಾ 18 ರೂ., ಗೋಲಿ ಬಂಜೆ 12 ರೂ. ಸಿಗುತ್ತದೆ. ಇನ್ನು ಬಿಸಿಬೆಳೆ ಬಾತ್‌ ಮುಂತಾದ ರೈಸ್‌ ಪದಾರ್ಥಗಳು ಗ್ರಾಹಕರ ಕೈಗೆಟಕುವ ದರದಲ್ಲಿ ಸಿಗುತ್ತದೆ.

ರಾಜಕಾರಣಿಗಳ ಪ್ರಮುಖ ಉಪಾಹಾರ ಸ್ಥಳ:
ಮೈಸೂರು ಜಿಲ್ಲೆಯ ಪ್ರಮುಖ ರಾಜಕಾರಣಿಗಳಿಗೆ ಈಗಲೂ ಶ್ರೀ ಟಿಫಾನೀಸ್‌ ಇಷ್ಟವಾಗುವ ಹೋಟೆಲ್‌. ಸಂಸದ ಪ್ರತಾಪ್‌ಸಿಂಹ, ಮಾಜಿ ಸಂಸದ ಎಚ್‌.ವಿಶ್ವನಾಥ್‌, ಶಾಸಕ ವಾಸು, ಮಾಜಿ ಸಚಿವ ನಂಜಪ್ಪ ಸೇರಿದಂತೆ ಪ್ರಮುಖ ರಾಜಕಾರಣಿಗಳು ಇಲ್ಲಿ ಉಪಾಹಾರ ಸೇವಿಸಿದ್ದಾರೆ. ಎಚ್‌.ವಿಶ್ವನಾಥ್‌ ಈಗಲೂ ಶ್ರೀಟಿಫಾನೀಸ್‌ನಲ್ಲೇ ಉಪಾಹಾರ ಸೇವಿಸುತ್ತಾರೆ.

ಡಾ.ರಾಜ್‌ಗೆ ಇಲ್ಲಿನ ಬೆಣ್ಣೆ ದೋಸೆ ತುಂಬಾ ಇಷ್ಟ:
ಮೈಸೂರು, ಕೆ.ಆರ್‌.ನಗರದ ಸುತ್ತಮುತ್ತ ಶೂಟಿಂಗ್‌ಗೆ ಅಂತ ಬಂದ್ರೆ ವರನಟ ಡಾ.ರಾಜ್‌ಕುಮಾರ್‌ ಶ್ರೀ ಟಿಫಾನೀಸ್‌ನಲ್ಲಿ ಬೆಣ್ಣೆದೋಸೆ ತಿನ್ನದೇ ಹೋಗುತ್ತಿರಲಿಲ್ಲವಂತೆ. ಇಲ್ಲಿನ ಸ್ವತ್ಛತೆ, ರುಚಿಗೆ ಮನಸೋತಿದ್ದ ರಾಜ್‌ಕುಮಾರ್‌, ಶೂಟಿಂಗ್‌ ಸ್ಥಳಕ್ಕೂ ಇಲ್ಲಿನ ದೋಸೆ ಕಟ್ಟಿಸಿಕೊಂಡು ಹೋಗುತ್ತಿದ್ದರಂತೆ. ಅಷ್ಟೇ ಅಲ್ಲ, ಹಿರಿಯ ನಟ ಮೈಸೂರಿನ ಅಶ್ವತ್ಥ್ ಅವರಿಗೆ ಶ್ರೀ ಟಿಫಾನೀಸ್‌ ಪ್ರಮುಖ ಉಪಾಹಾರ ಸ್ಥಳ. ಕೆ.ಆರ್‌.ನಗರದಲ್ಲಿನ ತಮ್ಮ ಸಂಬಂಧಿಕರ ಮನೆಗೆ ಬಂದ್ರೆ ಅಶ್ವತ್ಥ್ ಮರೆಯದೇ ಇಲ್ಲಿ ತಿಂಡಿ ತಿನ್ನುತ್ತಿದ್ದರಂತೆ. ಸಂಗೀತ ನಿರ್ದೇಶಕ ಹಂಸಲೇಖ, ಮೈಸೂರು ಲೋಕೇಶ್‌ ಮುಂತಾದ ಸೆಲೆಬ್ರಿಟಿಗಳು ಇಲ್ಲಿ ಉಪಾಹಾರ ಸೇವಿಸಿದ್ದಾರೆ.

ಎಲ್ಲಕ್ಕೂ ಬಿಸಿನೀರು ಬಳಕೆ:
ಗ್ರಾಹಕರು ತಿಂದ ತಟ್ಟೆ, ಲೋಟ, ಬಳಸಿದ ಪಾತ್ರೆಗಳನ್ನು ಬಿಸಿ ನೀರಿನಲ್ಲೇ ತೊಳೆಯಲಾಗುತ್ತದೆ. ಗ್ರಾಹಕರಿಗೂ ಬಿಸಿನೀರನ್ನೇ ಕುಡಿಯಲು ಕೊಡುತ್ತಾರೆ.  ಅಲ್ಲದೆ, ಸೋಲಾರ್‌ ವ್ಯವಸ್ಥೆ ಅಳವಡಿಸಿಕೊಂಡು ಸದಾ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ.  

– ಎ.ಚೈತನ್ಯ, ಭೋಗೇಶ ಎಂ.ಆರ್‌. 

ಟಾಪ್ ನ್ಯೂಸ್

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.