ಯಾರಿಗೂ ಎಸ್‌ ಅಂದಿಲ್ಲ ನೋ ಅಂತಾನೂ ಹೇಳಿಲ್ಲ!


Team Udayavani, May 1, 2018, 7:50 PM IST

o.jpg

ಹುಡುಗ ಹೇಗಿಬೇಕು ಅಂದ್ರೆ, ತುಂಬಾ ಸುಂದರವಾಗಿರೋದೇನ್‌ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್‌ ಮಾಡ್ಸ್‌ಬೇಕಾಗುತ್ತೆ. ಕಲರ್‌ ಕಪ್ಪಿದ್ರೂ ಪರವಾಗಿಲ್ಲ (ಕಂಡಿಷನ್ಸ್ ಅಪ್ಲೈ) ಮನಸ್ಸು ಬೆಳ್ಳಗಿರಬೇಕು…

ರೀ ಇವ್ರೆ , ಕರೆಕ್ಟ್ ಆಗಿ ಕೇಳಿಸ್ಕೋಬಿಡಿ ಸಾರ್‌. ನನ್‌ ಹೆಸ್ರು ಚಂದ್ರಿಕಾ. ಏನ್‌ ಹೇಳಿ… ಚಂದ್ರಿ ಅಲ್ಲ, ಚಂದ್ರಶ್ರೀನೂ ಅಲ್ಲ, ಚಂದ್ರಮ್ಮ ಅಂತೇನಾದ್ರೂ ಕರೆದ್ರೋ- ನಿಮ್ಗೆ ಒದೆ ಗ್ಯಾರಂಟಿ. ಗೊತ್ತಾಯ್ತು ತಾನೆ? ನನ್‌ ಹೆಸರು ಚಂದ್ರಿಕಾ. ಈ ವಾರವಷ್ಟೇ 19ರಿಂದ 20ನೇ ವರ್ಷಕ್ಕೆ ಝಂಯ್ಕ ಅಂತ ಜಂಪ್‌ ಮಾಡ್ತಾ ಇದೀನಿ. ಅಂಗಡಿಗೆ ಹೋದಾಗ ಚಿಲ್ಲರೆ ಕೊಡುವ ನೆಪದಲ್ಲಿ ನನ್ನ ಕೈ ಮುಟ್ಟಲು ಅಲ್ಲಿರುವ ಪುಟ್ಟರಾಜು ಅಂಕಲ್, ಕಾಲ್ ಮಾಡಿದ ತಕ್ಷಣ ಆಟೋ ತಗೊಂಡು ಬಂದೇಬಿಡುವ ಸಯ್ಯದ್‌, ಪಾಠ ಹೇಳಿಕೊಡುವ ವೇಳೆಯಲ್ಲೇ ಅಕಸ್ಮಾತ್‌ ಅನ್ನುವಂತೆ ಕಣ್ಣು ಹೊಡೆಯುವ ವಿಜಿ ಮೇಷ್ಟ್ರು, ದಿನವೂ ಕಲರ್‌ ಕಲರ್‌ ಗುಲಾಬಿ ನಗುವ ವಿನ್ಸೆಂಟ್‌, ಈ ಹುಡುಗಿ ನನಗೇ ಅಂತ ಆಗಲೇ ಐದಾರು ಜನರಿಗೆ ಹೇಳಿರುವ ಅಮ್ಮನ ತಮ್ಮ ಹರೀಶ್‌ ಮಾಮ… ಹೀಗೆ ಸಾಕಷ್ಟು ಜನ ನನ್ನನ್ನು ಕಾಡಲು ಶುರು ಮಾಡಿದ್ರಲ್ಲ- ಅವತ್ತೇ, ನಾನು ಡ್ರೀಂ ಗರ್ಲ್, ನಾನು ಸುಂದರಿ ಅಂತ ಗ್ಯಾರಂಟಿ ಆಗೋಯ್ತು ನನಗೆ .

  ಇಷ್ಟು ಜನರ ಪ್ರೀತಿಯ(?)ಹೊಳೆಯಲ್ಲಿ ಮುಳುಗದೇ ಇವತ್ತು ಕಾಲೇಜಿನ ಮೆಟ್ಟಿಲ ಮೇಲೆ ಬಂದು ನಿಂತಿದ್ದೀನಿ, ನನ್ನನ್ನ ಅಷ್ಟೊಂದು ಪ್ರೀತಿಸುತ್ತಿದ್ದ ಹುಡುಗರಲ್ಲಿ ಯಾರೊಬ್ಬರಿಗಾದರೂ ಎಸ್‌ ಎಂದುಬಿಡಲೇ ಅಂತ ಸಾವಿರ ಸಲ ಯೋಚಿಸುತ್ತಿದ್ದೆ. ಆಗಲೇ ಆಸೆಬುರುಕ ಮನಸ್ಸು, ಏಯ್ ಸುಮ್ನಿರು, ಸ್ವಲ್ಪ ಕಾದರೆ ಚೆನ್ನಾಗಿರೋ ಹೊಸಾ ಮೊಬೈಲ್ ಸಿಗುತ್ತೆ ನೋಡು, ಅದೇ ಥರಾ, ಸ್ವಲ್ಪ ದಿನ ಕಾದರೆ ಇನ್ನೂ ಚಂದದ ಹುಡುಗ ಸಿಕ್ತಾನೆ ಅಂತ ಪಿಸುಗುಡುತ್ತಿತ್ತು! ಹಾಗಾಗಿ, ತಾಳಿದವಳು ಬಾಳಿಯಾಳು ಅಂದ್ಕೊಂಡು, ಎಲ್ರುನ್ನೂ ಆಟ ಆಡಿಸ್ಕೊಂಡು, ಯಾರಿಗೂ ಎಸ್‌ ಅನ್ನದೆ, ಯಾರಿಗೂ ನೋ ಅನ್ನದೆ ಸುಮ್ನೆ ಉಳಿದಿºಟ್ಟೆ.

ಈಗ, ನನ್‌ ಬಗ್ಗೆ ಎರಡೇ(?) ಸಾಲಲ್ಲಿ ಹೇಳಿºಡ್ತೀನಿ. ಯೆಸ್‌, ನಂಗೆ ಕೋಪ ಬೇಗ ಬರುತ್ತೆ. ಅಳು ಮಾತ್ರ ಶತಾಬ್ಧಿ ಎಕ್ಸ್‌ಪ್ರೆಸ್‌ಗಿಂತಲೂ ಸ್ಪೀಡು, ಅಮ್ಮ ಅಂದ್ರೆ ಇಷ್ಟ, ಅಪ್ಪ ಅಂದ್ರೆ ಪ್ರಾಣ. ಪಟಪಟಾಂತ ಮಾತಾಡ್ತೀನಿ. ಇನ್ನೂ ಹದಿನೈದ್‌ ವರ್ಷ ಬೆಂಗ್ಳೂರ್‌ ಬಿಟ್ಟು ಆಚೆ ಹೋಗಲ್ಲ. ರಸ್ತೆ ಬದಿಯ ಪಾನಿಪುರಿ ಜೊತೆಗೆ, ಮಲ್ಲೇಶ್ವರಂ ಜನತಾ ಹೋಟ್ಲಿನ ಮಸಾಲ ದೋಸೆ, ಸಿ.ಟಿ.ಆರ್‌ ಬೆಣ್ಣೆದೋಸೆ, ವೀಣಾ ಸ್ಟೋರ್ ಇಡ್ಲಿ-ವಡೆ, ಜಯನಗರದ ಕೂಲ್‌ ಜಾಯಿಂಟು, ಸಜ್ಜನ್‌ ರಾವ್‌ ಸರ್ಕಲ್ಲಿನ ವಿ.ಬಿ ಬೇಕರಿ, ಸುಪ್ರಭಾತ ಕಾಫಿ ಹೌಸಿನ ಅನ್ನ ಸಾಂಬಾರ್‌ ಇಲ್ಲಿಗೆಲ್ಲಾ ಹೋಗೋದು ಅಂದ್ರೆ  ಪಂಚಪ್ರಾಣ. ವಾರಕ್ಕೆರಡು ಸಲ ಕರ್ಕೊಂಡ್‌ ಹೋದ್ರು ಸಾಕು.

ಈಗ, ಮೇನ್‌ ಪಾಯಿಂಟ್‌ಗೆ ಬರ್ತೀನಿ. ಹುಡುಗ ಹೇಗಿಬೇìಕು ಅಂದ್ರೆ, ತುಂಬಾ ಸುಂದರವಾಗಿರೋದೇನ್‌ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್‌ ಮಾಡ್ಸ್‌ಬೇಕಾಗುತ್ತೆ. ಕಲರ್‌ ಕಪ್ಪಿದ್ರೂ ಪರವಾಗಿಲ್ಲ (ಕಂಡಿಷನ್ಸ್ ಅಪ್ಲೈ) ಮನಸ್ಸು ಬೆಳ್ಳಗಿರಬೇಕು…

ನನ್ನನ್ನ, ನನ್ನ ಮನೆಯವರನ್ನ, ಪ್ರೀತಿಸಿ ಗೌರವಿಸುವ ಹೃದಯವಿರಬೇಕು, ಪಾರ್ಕಲ್ಲಿ ಕೂತಿರೋವಾಗ ಒಂದು ಫೀಟ್‌ ದೂರ, ನನಗೆ ತುಂಬಾ ಬೇಜಾರಾದಾಗ ನಾನು ಕರೆದಷ್ಟು ಹತ್ತಿರ ಬಬೇìಕು. ಯಾವುದೇ ಕಾರಣಕ್ಕೂ ನನಗೆ ಬಯ್ಯೋ ಹಾಗಿಲ್ಲ. ಅಕಸ್ಮಾತ್‌ ಹೊಡೆಯೋದಾದ್ರೆ, ನನ್ನಿಂದಾನು ಹೊಡೆತ ತಿನ್ನೋಕೆ ರೆಡಿ ಇಬೇìಕು…

ಏನಪ್ಪ ಈ ಹುಡುಗಿ ಹೀಗೆಲ್ಲಾ ಮಾತಾಡ್ತಾಳೆ  ಅಂತ ಕೋಪ ಮಾಡ್ಕೊತೀರೇನೋ. ನಿಮ್ಮನ್ನ ಸುಮ್ನೆ ಗೋಳು ಹೊಯೊಬೇಕು ಅನ್ನಿಸ್ತು. ಅದ್ಕೆ ಹೀಗೆಲ್ಲ ಮಾತಾಡಿºಟ್ಟೆ. ಕೊನೆಯವರೆಗೂ ನಿನ್‌ ಜೊತೆ ಇರ್ತೀನಿ ಅನ್ನುವ ಸಣ್ಣ ಭರವಸೆಯನ್ನು ನನಗೆ, ಮತ್ತು ಪ್ರಾಮಾಣಿಕವಾಗಿ ಒಂದೊಳ್ಳೇ ಬದುಕನ್ನ ನಿಮ್ಮ ಮಗಳಿಗೆ ಕೊಡ್ತೀನಿ ಅನ್ನುವ ಧೈರ್ಯವನ್ನ ನನ್ನ ಅಪ್ಪ ಅಮ್ಮನಿಗೆ ಕೊಡುವ ಯಾರಾದರೂ ಹುಡುಗ ಇದ್ರೆ ಯಾವುದೇ ಶರತ್ತಿಲ್ಲದೆ ಅವನ ಪ್ರೀತಿಗೆ ಎಸ್‌ ಅನ್ನೋಕೆ ಈ ಚಂದ್ರಿಕಾ ಅನ್ನುವ ಚಾಂದಿನಿ ಕಾಯುತ್ತಿದ್ದಾಳೆ. ನೋಟ್‌ ಮಾಡ್ಕೊಳ್ಳಿ, ನೋಟ್‌ ಮಾಡ್ಕೊಳ್ಳಿ, ನೋಟ್‌ ಮಾಡ್ಕೊಳ್ಳಿ.

ಚಂದ್ರಿಕಾ

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.