ಹಗಲು ಬೋಧಕಿ, ರಾತ್ರಿ ಅರ್ಜುನ!


Team Udayavani, May 2, 2018, 12:36 PM IST

hagalu.jpg

ಇವರು ಕ್ಲಾಸಿನಲ್ಲಿ ಮೆಲುದನಿಯ ಉಪನ್ಯಾಸಕಿ, ಪಿಎಚ್‌ಡಿ ವಿದ್ಯಾರ್ಥಿನಿ, ಮಹಿಳಾ ಯಕ್ಷಗಾನ ತಂಡದ ಸ್ಥಾಪಕಿ. ಅಷ್ಟೇ ಅಲ್ಲ ರಂಗದ ಮೇಲೆ ಭೀಷ್ಮ, ಸುಧನ್ವ, ಅರ್ಜುನ, ಕೃಷ್ಣ… ಹೀಗೆ ಬಹುಮುಖ ಪಾತ್ರ ನಿರ್ವಹಿಸುತ್ತಿರುವವರು ಉಷಾ ನಾಯಕ್‌…

ರಾತ್ರಿಯಿಡೀ ರಂಗದ ಮೇಲೆ ಆರ್ಭಟಿಸುತ್ತಾ, ಚಂಡೆ ಮದ್ದಳೆಯನ್ನು ಮೀರಿದ ದನಿಯಲ್ಲಿ ಭಾಗವತಿಕೆ ಹಾಡುತ್ತಾ ವಿಶಿಷ್ಟ ಲೋಕವನ್ನು ಸೃಷ್ಟಿಸುವ ಯಕ್ಷಗಾನದಲ್ಲಿ ಪುರುಷರಿಗೇ ಆದ್ಯತೆ ಹೆಚ್ಚು. ಆದರೆ, ಈ “ಗಂಡುಕಲೆ’ಯನ್ನು ಸಲೀಸಾಗಿ ನಿರ್ವಹಿಸುವ ಕಲಾವಿದೆ ಉಷಾ ನಾಯಕ್‌. ಕೇವಲ ಕಲಾವಿದೆಯಾಗಷ್ಟೇ ಅಲ್ಲ, ಮಹಿಳಾ ಯಕ್ಷತಂಡದ ಸ್ಥಾಪಕಿಯಾಗಿ ಇವರ ಕಲಾಸೇವೆ ಅನನ್ಯ.

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ  ಉಪನ್ಯಾಸಕಿಯಾಗಿರುವ ಉಷಾನಾಯಕ್‌ಗೆ ಯಕ್ಷಗಾನದ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿನಲ್ಲಿದ್ದಾಗ ಮೊದಲ ಬಾರಿಗೆ ಬಣ್ಣ ಹಚ್ಚಿದ ಇವರು ಮುಂದೆ ಗುಳ್ಮೆ ನಾರಾಯಣ ಪ್ರಭು, ಚೇರ್ಕಾಡಿ ಮಂಜುನಾಥ ಪ್ರಭು, ಕೆ.ಜೆ. ಗಣೇಶ್‌ ಅವರಿಂದ ಯಕ್ಷ ತರಬೇತಿ ಪಡೆದರು.

ಬಡಗುತಿಟ್ಟಿನಲ್ಲಿ ಉಷಾ ನಿರ್ವಹಿಸುವುದು ಪುರುಷ ಪಾತ್ರಗಳನ್ನೇ. ಭೀಷ್ಮ, ಸುಧನ್ವ, ಅರ್ಜುನ, ಕೃಷ್ಣ, ಚಿತ್ರ ಸೇನಾ, ವಿಷ್ಣು, ರುಕ್ಮ ಪಾತ್ರ ದಲ್ಲಿ ಬಳಿರೇ ಎನ್ನುವಂತೆ ಅಭಿನಯಿಸಿ ಪ್ರೇಕ್ಷ ಕರ ಮನಸ್ಸನ್ನು ಗೆದಿದ್ದಾರೆ. 2009ರಲ್ಲಿ 10 ಮಹಿಳೆಯರನ್ನು ಸೇರಿಸಿ ಬಡಗುತಿಟ್ಟಿನ “ಮಹಾಲಕ್ಷಿ ಮಹಿಳಾ ಯಕ್ಷ ಕಲಾ ಮಂಡಳಿ’ಯನ್ನು ಸ್ಥಾಪಿಸಿದರು.

ಈ ತಂಡ ಈಗಾಗಲೇ 9 ಪ್ರಸಂಗಗಳನ್ನು ಕಟ್ಟಿಕೊಡುತ್ತಿದೆ. ಪತಿ ಸುರೇಶ್‌ ನಾಯಕ್‌ ಹಾಗೂ ಮಕ್ಕಳಾದ ಗುರುಪ್ರಸಾದ್‌ ಮತ್ತು ರಕ್ಷಿತ್‌ರ ಬೆಂಬಲದಿಂದಾಗಿ ಇಷ್ಟನ್ನೆಲ್ಲ ಸಾಧಿಸಿದೆ ಎನ್ನುವ ಉಷಾ, ಪ್ರಸ್ತುತ ಪಿಎಚ್‌.ಡಿ ಅಧ್ಯಯನ ನಡೆಸುತ್ತಿದ್ದಾರೆ. 

ಯಕ್ಷಗಾನವು ನನ್ನ ಮನಸ್ಸಿಗೆ ಖುಷಿ ಕೊಡುವ ಕಲೆ. ಈ ಗಂಡು ಕಲೆ ಯಾವತ್ತೂ ನನಗೆ ಕಷ್ಟವಾಗಿದ್ದೇ ಇಲ್ಲ. ಪುರುಷರ ಯಕ್ಷಗಾನದಂತೆ ಮಹಿಳಾ ಯಕ್ಷಕಲೆಯೂ ಅಪಾರ ಜನಪ್ರಿಯತೆ ಪಡೆಯುತ್ತಿದೆ. ಇನ್ನಷ್ಟು ಹೆಣ್ಮಕ್ಕಳು ಬಣ್ಣ ಹಚ್ಚಿ, ರಂಗಸ್ಥಳವನ್ನು ಏರಲಿ ಎನ್ನುವುದೇ ನನ್ನ ಆಸೆ.
-ಉಷಾ ನಾಯಕ್‌ 

* ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.