ಕೊಟ್ಟೆ ಕಡುಬಿಗೆ ಮೀನಾಕ್ಷಿ ಭವನಕ್ಕೆ ಬನ್ನಿ


Team Udayavani, Jun 11, 2018, 11:52 AM IST

meenakshi.jpg

ವಿಶೇಷ ತಿಂಡಿ ಎಂದರೆ ಕೊಟ್ಟೆ ಕಡುಬು, ಬೆಣ್ಣೆ ದೋಸೆ. ಇದರ ಜೊತೆಗೆ ತಟ್ಟೆ ಇಡ್ಲಿ, ವಿವಿಧ ಬಗೆಯ ದೋಸೆ, ರೈಸ್‌ಬಾತ್‌, ಕರಾವಳಿ ಭಾಗದ ತಿಂಡಿ ಜೊತೆಗೆ ದಕ್ಷಿಣ ಭಾರತ ಶೈಲಿಯ ಊಟವೂ ಇಲ್ಲಿ ಸಿಗುತ್ತದೆ. ಇನ್ನು ಇಡ್ಲಿ, ದೋಸೆ ಜೊತೆಗೆ ಕೊಡುವ ತೆಂಗಿನಕಾಯಿ ಚಟ್ನಿ, ತರಕಾರಿ ಪಲ್ಯ ರುಚಿಯಾಗಿರುತ್ತದೆ.

ಮಲೆನಾಡು ಪ್ರಾಕೃತಿಕ ಸೌಂದರ್ಯದಷ್ಟೇ ಅಡುಗೆಗೂ ಹೆಸರುವಾಸಿ. ಮಲೆನಾಡಿನ ಜನರು ಬಗೆ ಬಗೆಯ ಸೊಪ್ಪು, ತರಕಾರಿಯಿಂದ ರುಚಿಕರ ಖಾದ್ಯಗಳನ್ನು ತಯಾರಿಸುತ್ತಾರೆ. ಅದು ಆರೋಗ್ಯ ರಕ್ಷಣೆಯ ಜೊತೆಗೆ ಬಾಯಿಗೂ ರುಚಿ ನೀಡುತ್ತದೆ. ಮಲೆನಾಡಿಗರ ತಿನಿಸುಗಳಿಂದಲೇ ಹೆಸರು ಮಾಡಿರುವ ಹೋಟೆಲೆಂದು ಶಿರಸಿಯಲ್ಲಿದೆ.

ಶಿರಸಿಯ ಬಸ್ತಿಗಲ್ಲಿಯಲ್ಲಿ, ಸುಮಾರು 60 ವರ್ಷಗಳ ಹಿನ್ನೆಲೆ ಹೊಂದಿರುವ ಮೀನಾಕ್ಷಿ ಭವನ ಹೋಟೆಲ್‌ ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುತ್ತಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಶಿರಸಿ ನಗರದಲ್ಲಿ ಅಂತಹ ದೊಡ್ಡ ಹೋಟೆಲ್‌ಗ‌ಳು ಇಲ್ಲದಂತಹ ಸಮಯದಲ್ಲಿ ಕುಟುಂಬ ಸಮೇತವಾಗಿ ಶಿರಸಿಗೆ ಬಂದ ಉಡುಪಿ ಮೂಲದ ರಾಮಕೃಷ್ಣ ತಂತ್ರಿ ಅವರು 1962ರಲ್ಲೇ ತಮ್ಮ ಮನೆಯಲ್ಲೇ ಪುಟ್ಟದಾದ ಹೋಟೆಲ್‌ ಅನ್ನು ಪ್ರಾರಂಭಿಸಿದ್ದರು.

ಮಲೆನಾಡಿನ ಹಳ್ಳಿಯ ಜನರು ನಿರ್ಮಿಸುವಂತೆ ಕಟ್ಟಿಗೆಯಲ್ಲಿ ಕೊಠಡಿಯೊಂದನ್ನು ಕಟ್ಟಿಕೊಂಡು ಸುಮಾರು 50 ವರ್ಷ ಅಲ್ಲಿಯೇ ಹೋಟೆಲ್‌ ನಡೆಸುತ್ತಿದ್ದ ತಂತ್ರಿ ನಿಧನದ ನಂತರ ಅವರ ಮಕ್ಕಳಾದ ವಿಶ್ವನಾಥ್‌ ಹಾಗೂ ಸತೀಶ್‌ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದೀಗ ಹೊಸ ಹೋಟೆಲ್‌ ಅನ್ನು ಬಸ್ತಿಗಲ್ಲಿಯಲ್ಲೇ ನಿರ್ಮಿಸಲಾಗುತ್ತಿದ್ದು, ಇದೀಗ ಬಾಡಿಗೆ ಕಟ್ಟಡದಲ್ಲಿ ಹೋಟೆಲ್‌ ನಡೆಸಿಕೊಂಡು ಬರಲಾಗುತ್ತಿದೆ.

ವಿಶೇಷ ತಿಂಡಿ:
ಮೀನಾಕ್ಷಿ ಭವನದ ವಿಶೇಷ ತಿಂಡಿ ಎಂದರೆ ಕೊಟ್ಟೆ ಕಡುಬು, ಬೆಣ್ಣೆ ದೋಸೆ. ಇದರ ಜೊತೆಗೆ ತಟ್ಟೆ ಇಡ್ಲಿ, ವಿವಿಧ ಬಗೆಯ ದೋಸೆ, ರೈಸ್‌ಬಾತ್‌, ಕರಾವಳಿ ಭಾಗದ ತಿಂಡಿ ಜೊತೆಗೆ ದಕ್ಷಿಣ ಭಾರತ ಶೈಲಿಯ ಊಟವೂ ಇಲ್ಲಿ ಸಿಗುತ್ತದೆ. ಇನ್ನು ಇಡ್ಲಿ, ದೋಸೆ ಜೊತೆಗೆ ಕೊಡುವ ತೆಂಗಿನಕಾಯಿ ಚಟ್ನಿ, ತರಕಾರಿ ಪಲ್ಯ ರುಚಿಯಾಗಿರುತ್ತದೆ. ಹೊಸ ಕಟ್ಟಡ ನಿರ್ಮಾಣದ ನಂತರ ಹಿಂದಿನ ತಿಂಡಿಗಳ ಜೊತೆಗೆ ಚಾಟ್ಸ್‌ ಮುಂತಾದ ಬಗೆಯ ತಿಂಡಿಗಳನ್ನೂ ಉಣಬಡಿಸುತ್ತೇವೆ ಎನ್ನುತ್ತಾರೆ ಹೋಟೆಲ್‌ ಮಾಲಿಕರಲ್ಲಿ ಒಬ್ಬರಾದ ವಿಶ್ವನಾಥ್‌.
ಮೀನಾಕ್ಷಿ ಭವನ ವಾರದ 7 ದಿನವೂ ತೆರೆದಿರುತ್ತದೆ. ಭಾನುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರವರೆಗೆ ಹಾಗೂ ಉಳಿದ ದಿನಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 9.30 ಗಂಟೆಯವರೆಗೂ ಸೇವೆಯನ್ನು ಒದಗಿಸುತ್ತದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ವೇಳೆ ಜೋಳದ ರೊಟ್ಟಿ, ಚಪಾತಿ ಊಟದ ವ್ಯವಸ್ಥೆ ಇರುತ್ತದೆ.

– ಭೋಗೇಶ ಎಂ.ಆರ್‌.

ಟಾಪ್ ನ್ಯೂಸ್

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.