ಜ್ವಾಲಾಮುಖೀ ಸಂಪರ್ಕಿಸುವೆ!
Team Udayavani, Aug 10, 2018, 11:40 AM IST
ಹೊಸದಿಲ್ಲಿ: ಟ್ವಿಟರ್ನಲ್ಲಿ ಸಕ್ರಿಯರಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರತಿಕ್ರಿಯಿಸುವ ಭರದಲ್ಲಿ ನೀಡಿದ ಹೇಳಿಕೆ ಅಪಹಾಸ್ಯಕ್ಕೆ ಗುರಿಯಾಗಿದೆ. ಇಂಡೋನೇಷ್ಯಾದಲ್ಲಿ ಭೂಕಂಪ ಹಾಗೂ ಜ್ವಾಲಾಮುಖೀ ಸಂಭವಿಸಿದ್ದು, ಅನೇಕ ಭಾರತೀಯರು ಸ್ವದೇಶಕ್ಕೆ ಹಿಂದಿರುಗುತ್ತಿದ್ದಾರೆ. ಈ ವಿಚಾರದಲ್ಲಿ ಬಾಲಿ ಪ್ರವಾಸಕ್ಕೆ ಸುರಕ್ಷಿತವೇ ಎಂದು ಕೇಳಿದ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸುಷ್ಮಾ, “ಜ್ವಾಲಾಮುಖೀ ಯನ್ನು ಸಂಪರ್ಕಿಸುತ್ತೇನೆ’ ಎಂದು ಹೇಳಿದ್ದು ಹಾಸ್ಯಕ್ಕೀಡಾಗಿದೆ.