ಅಕ್ಷರ ತಾಯಿ ಈ ಸಾವಿತ್ರಿ ಬಾಯಿ


Team Udayavani, Aug 12, 2018, 11:20 AM IST

savitri-bai-phule.jpg

ಕಾಡುವ ಮತ್ತು ನೋಡುವ ಸಿನಿಮಾ ಅಂದರೆ, ಬದುಕು ಕಟ್ಟಿಕೊಡುವಂತಿರಬೇಕು, ಅಸಹಾಯಕರ ಧ್ವನಿಯಾಗಿರಬೇಕು ಅಷ್ಟೇ ಅಲ್ಲ, ಅದೊಂದು ಚರಿತ್ರೆಯಾಗಿ, ದಾಖಲೆಯಾಗಿ ಉಳಿಯುವಂತಿರಬೇಕು. ಎಲ್ಲಾ ಸಿನಿಮಾಗಳಿಗೂ ಇಂತಹ ತಾಕತ್ತು ಇರಲ್ಲ. ಬೆರಳೆಣಿಕೆ ಚಿತ್ರಗಳಷ್ಟೇ ಅಂತಹ ತಾಕತ್ತಿಗೆ ಕಾರಣವಾಗುತ್ತವೆ. ಆ ಸಾಲಿಗೆ ಸೇರುವ ಚಿತ್ರ “ಸಾವಿತ್ರಿಬಾಯಿ ಫ‌ುಲೆ’. ಇದು ಡಾ.ಸರಜೂ ಕಾಟ್ಕರ್‌ ಅವರ ಕಾದಂಬರಿ ಆಧರಿಸಿದ ಚಿತ್ರ. ಆ ಕಾರಣಕ್ಕೆ ಇದು ಒಳ್ಳೆಯ ಚಿತ್ರವಂತಲ್ಲ.

ಇಲ್ಲಿ ಹದಿನೆಂಟನೇ ಶತಮಾನದ ದಶಕಗಳನ್ನ ಮತ್ತೆ ಮರುಕಳಿಸಿರುವ ಶ್ರಮವಿದೆ. ಮರು ಪೀಳಿಗೆಗೆ ದೊಡ್ಡ ದಾಖಲೆಯಾಗುವಂತಹ ಚಿತ್ರಣವಿದೆ. ಕೇವಲ ಕಾದಂಬರಿ ನಿಷ್ಠೆ ಅಲ್ಲ, ಇಲ್ಲಿ ಚಿಂತನೆ ಇದೆ. ಚಿಂತನೆ ಮೂಲಕ ಅಸಂಗತವನ್ನು ತೆರೆ ಮೇಲೆ ದಾಖಲಿಸಿ, ಮತ್ತೆ ಹಾಗಾಗದಿರಲಿ ಎಂಬ ಆಶಯ ಸದೃಢವಾಗಿದೆ. ಇವೆಲ್ಲಾ ಕಾರಣಕ್ಕೆ “ಸಾವಿತ್ರಿ ಬಾಯಿ ಫ‌ುಲೆ’ ಒಂದು ಮನತಟ್ಟುವ, ಮಿಡಿಯುವ ಚಿತ್ರವಾಗಿ ಕಾಣುತ್ತೆ. ಒಂದು ಚಿತ್ರ ಆಳವಾಗಿ ಬೇರೂರಬೇಕಾದರೆ, ಅದಕ್ಕೆ ಗಟ್ಟಿ ಕಥೆಯ ಅಡಿಪಾಯ ಮುಖ್ಯ.

ಕಥೆ ಬಗ್ಗೆ ಸೊಲ್ಲೆತ್ತುವಂತಿಲ್ಲ. ಹಾಗೇ, ನಿರ್ದೇಶಕರ ಚಿತ್ರಕಥೆ, ನಿರೂಪಣೆ ಶೈಲಿ ಬಗ್ಗೆಯೂ ಮಾತಾಡುವಂತಿಲ್ಲ. ಇಂತಹ ಚಿತ್ರಗಳಿಗೆ ಮುಖ್ಯವಾಗಿ ಬೇಕಿರುವುದು ಪರಿಸರ ಮತ್ತು ಪರಿಕರ. ಅವೆಲ್ಲವೂ ಹಿಂದಿನ ಶತಮಾನಕ್ಕೆ ದೂಡುವಂತಿವೆ. ಅದೇ ಚಿತ್ರದ ಶಕ್ತಿ. ಉಳಿದಂತೆ ಚಿತ್ರ ಮನಸ್ಸಿಗೆ ಹತ್ತಿರವಾಗಲು ಕಾರಣ, ಮೌಡ್ಯ, ಕಂದಾಚಾರ, ದಮನಿತರ ಮೇಲಿನ ಶೋಷಣೆ, ಉಳ್ಳವರ ಉತ್ಸಾಹ, ಮೇಲ್ಜಾತಿಯ ಡಾಂಭಿಕತನ, ಧರ್ಮ, ಶಾಸ್ತ್ರ, ವೇದ ಪುರಾಣಗಳ ವಿರುದ್ಧ ಧಿಕ್ಕಾರತನದ ವಿಷಯಗಳು,

ಧರ್ಮದ ಹೆಸರಿನ ಕುರುಡು ಆಚರಣೆಗಳೆಲ್ಲವನ್ನೂ ಬದಿಗೊತ್ತಿ ಹೋರಾಡುವ ದಿಟ್ಟ ಮಹಿಳೆಯ ನಿಲುವುಗಳು ಸಿನಿಮಾದ ಜೀವಾಳ. “ಸಾವಿತ್ರಿಬಾಯಿ ಫ‌ುಲೆ’ ಹೋರಾಟ ಬದುಕಿನ ಚಿತ್ರಣವಿದು. ಅವರು ಭಾರತದ ಮೊದಲ ಶಿಕ್ಷಕಿ. ದಮನಿತರ ಪರ ನಿಂತ ಮೊದಲ ಧ್ವನಿ. ಅವರನ್ನು ಈಗಿನವರ್ಯಾರೂ ಕಂಡಿಲ್ಲ. ಆದರೆ, ಅವರ ಸಮಾಜ ಸುಧಾರಣೆ ಕೆಲಸಗಳು ಕಣ್ಮುಂದೆ ಇವೆ. ಅಕ್ಷರ ಕ್ರಾಂತಿಗಿಳಿದ ಹೆಜ್ಜೆ ಗುರುತು ಕಾಣುತ್ತಿವೆ. ಶೂದ್ರರ ಪರ ನಿಂತು, ಅವರಿಗೆ ಅಕ್ಷರದ ಹಸಿವು ನೀಗಿಸಿದ ಸಾವಿತ್ರಿಬಾಯಿ ಫ‌ುಲೆ ಅವರ ಬದುಕು,

ಬವಣೆ, ಸಂಕಟ, ತಿರುಗಾಟ, ಹೋರಾಟ ಇವೆ‌ಲ್ಲವನ್ನು ಚೆಂದದ ಚೌಕಟ್ಟಿನಲ್ಲಿ ಕಟ್ಟಿ ಹರಿವು ಬಿಟ್ಟಿರುವ ನಿರ್ದೇಶಕರ ಶ್ರಮ ಸಾರ್ಥಕ. ಒಂದು ಚಿತ್ರದ ಮೂಲಕ ಶತಮಾನಗಳ ಹಿಂದಿನ ಕಾಲಕ್ಕೆ ಕರೆದೊಯ್ಯುವುದು ಸುಲಭದ ಮಾತಲ್ಲ. ಈಗಿನ ವರ್ಣರಂಜಿತ ಯುಗದಲ್ಲೂ ಆಗಿನ ಕಾಲಘಟ್ಟದ ಕಥೆಯನ್ನು ನಂಬಿಸಿ, ತಲೆದೂಗಿಸುವಂತೆ ಮಾಡುವುದರ ಹಿಂದೆ ನೂರಾರು ಮಂದಿಯ ಬೆವರಿದೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಇಲ್ಲಿ ಪ್ರತಿಯೊಂದು ದೃಶ್ಯದಲ್ಲೂ ಸೂಕ್ಷ್ಮತೆ ಇದೆ.

ಕಥೆಗೆ ಪೂರಕವಾದ ಪಾತ್ರಗಳು, ಅವುಗಳ ಮಾತು, ಶೈಲಿ, ತಾಣ, ಹಾಡು, ಹಿನ್ನೆಲೆ ಸಂಗೀತ ಮತ್ತು ಅದರೊಂದಿಗೇ ಸಾಗುವ ದೃಶ್ಯಗಳನ್ನು ಅಷ್ಟೇ ಜಾಣತನದಿಂದ ತೆರೆ ಮೇಲೆ ಅನಾವರಣಗೊಳಿಸುವ ಮೂಲಕ ಇಡೀ ಆಶಯದ ಹೂರಣ ಬಡಿಸಿರುವ ಪ್ರಯತ್ನ ಮೆಚ್ಚಲೇಬೇಕು. ಪತಿ ಸತ್ತರೆ, ಸತಿಯೂ ಚಿತೆಯೊಂದಿಗೆ ಭಸ್ಮವಾಗಬೇಕು ಎಂಬ ಅನಿಷ್ಟ ಪದ್ಧತಿ ವಿರುದ್ಧ “ಸಾವಿತ್ರಿಬಾಯಿ ಫ‌ುಲೆ’ ಚಿಕ್ಕಂದಿನಿಂದಲೇ ಹೋರಾಟಕ್ಕಿಳಿಯುತ್ತಾಳೆ. ಆ ಊರ ಮೇಲ್ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗುತ್ತಾಳೆ.

ಮದುವೆ ಬಳಿಕ ಪತಿ ಜ್ಯೋತಿಬಾ ಫ‌ುಲೆ ಹೇಳಿಕೊಡುವ ಅಕ್ಷರ ಕಲಿತು ದಮನಿತರ ಪರ ನಿಲ್ಲುತ್ತಾಳೆ. ಹೆಣ್ಮಕ್ಕಳು ಓದು ಕಲಿಯುವಂತಿಲ್ಲ ಎನ್ನುವ ಪುರೋಹಿತಶಾಹಿಗಳ ವಿರುದ್ಧ ತಿರುಗಿ ಬೀಳುತ್ತಾಳೆ. ಪತ್ನಿಯ ಹೋರಾಟಕ್ಕೆ ಪತಿ ಜ್ಯೋತಿಬಾ ಫ‌ುಲೆ ಸಾಥ್‌ ಕೊಡುತ್ತಾರೆ. ಅಲ್ಲಿಂದ ಬ್ರಾಹ್ಮಣರ ವಿರುದ್ಧ ಹೋರಾಟ ಶುರುಮಾಡುತ್ತಾರೆ. ಹೆಣ್ಮಕ್ಕಳಿಗೂ ಅಕ್ಷರ ಕಲಿಸೋ ಮಟ್ಟಕ್ಕೆ ನಿಲ್ಲುತ್ತಾರೆ. ಮೇಲ್ವರ್ಗ ಅವರನ್ನು ಬಹಿಷ್ಕರಿಸುತ್ತೆ, ಕೆಲವರು ಅವರ ಪರ ನಿಂತು, ಅವರ ಆಶಯಗಳಿಗೆ ಹೆಗಲು ಕೊಡುತ್ತಾರೆ.

ಇಡೀ ಊರೇ ಅವರ ಬೆನ್ನಿಗೆ ನಿಲ್ಲುತ್ತದೆ. ಆಚಾರ, ವಿಚಾರ ವಿರುದ್ಧ ಹೋರಾಡುವ ಸಾವಿತ್ರಿಬಾಯಿ ಫ‌ುಲೆ ಅವರ ಕ್ರಾಂತಿಕಾರಿ ಬದಲಾವಣೆಗಳಿಂದ ಏನೆಲ್ಲಾ ಸುಧಾರಣೆಯಾಗುತ್ತೆ ಎನ್ನುವುದೇ ಚಿತ್ರದ ಸಾರಾಂಶ. ತಾರಾ ಅವರು ಸಾವಿತ್ರಿಯಾಗಿ ಮರು ಜೀವಿಸಿದ್ದಾರೇನೋ ಅನ್ನುವಷ್ಟರ ಮಟ್ಟಿಗೆ ಪಾತ್ರ ಕಟ್ಟಿಕೊಟ್ಟಿದ್ದಾರೆ. ಅವರ ಮಾತು, ಭಾವನೆ, ಭಾವುಕತೆ ಎಲ್ಲವೂ ಪಾತ್ರದ ಚೌಕಟ್ಟಿಗೆ ಸ್ಪಂದಿಸಿವೆ. ಸುಚೇಂದ್ರ ಪ್ರಸಾದ್‌ ಅವರ ಅಭಿನಯ ಕೂಡ ನೆನಪಲ್ಲುಳಿಯುವಂತಿದೆ.

ಉಳಿದಂತೆ ಬರುವ ಪ್ರತಿ ಪಾತ್ರವೂ ಪೂರಕವಾಗಿವೆ. ಈ ಚಿತ್ರಕ್ಕೆ ಕೆಂಪರಾಜು ಅವರ ಸಂಕಲನ ಖುಷಿಕೊಡುತ್ತೆ. ಎಲ್ಲವನ್ನೂ ಸರಿಯಾಗಿ ಸಂಕಲಿಸಿ, ವ್ಯವಕರಿಸಿರುವುದು ಕಾಣುತ್ತದೆ. ಸಂಗೀತ ಕಟ್ಟಿ ಕುಲಕರ್ಣಿ ಸಂಗೀತ ಚಿತ್ರದ ಶೃಂಗಾರ. ಡಾ.ನಾಗರಾಜ್‌ ಕಲಾನಿರ್ದೇಶನ ಕೂಡ ಆಗಿನ ಶತಮಾನಕ್ಕೆ ದೂಡುವಂತಿದೆ. ಶಿರೀಷ ಜೋಶಿ ಸಂಭಾಷಣೆ ಚಿತ್ರಕ್ಕೆ ಇನ್ನೊಂದು ಶಕ್ತಿ. ಇಡೀ ಚಿತ್ರ ಆ ಕಾಲಕ್ಕೆ ಕರೆದುಕೊಂಡು ಹೋಗುವುದಕ್ಕೆ ಕಾರಣ ನಾಗರಾಜ್‌ ಆದವಾನಿ ಛಾಯಾಗ್ರಹಣ.

ಚಿತ್ರ: ಸಾವಿತ್ರಿಬಾಯಿ ಫ‌ುಲೆ
ನಿರ್ಮಾಣ: ಬಸವರಾಜ್‌ ವಿ. ಭೂತಾಳಿ 
ನಿರ್ದೇಶನ: ವಿಶಾಲ್‌ ರಾಜ್‌
ತಾರಾಗಣ: ತಾರಾ, ಸುಚೇಂದ್ರ ಪ್ರಸಾದ್‌, ಶ್ರೀಪತಿ ಮಂಜನಬೈಲು, ತನುಜ, ಮಹಾಂತೇಶ ಗಜೇಂದ್ರಗಢ, ಆದೇಶ ಏಣಗಿ, ಮೃತ್ಯುಂಜಯ ಹಿರೇಮಠ ಮುಂತಾದವರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.