ಖರೀದಿಯನ್ನು ಸ್ವಲ್ಪ ಮುಂದೂಡಿ


Team Udayavani, Sep 10, 2018, 9:37 PM IST

14.jpg

ಯಾವುದೇ ವಸ್ತುವನ್ನು ಖರೀದಿಸುವ ಮೊದಲು, ಅದು ನಮಗೆ ಅಗತ್ಯವಾ ಎಂದು ಎರಡೆರಡು ಬಾರಿ ಯೋಚಿಸಬೇಕು. ಖರೀದಿಯನ್ನು ಯಾವುದೋ ಕಾರಣದಿಂದ ಸ್ವಲ್ಪ ದಿನಗಳ ಕಾಲ ಮುಂದೂಡಿದರೂ ಆ ನೆಪದಲ್ಲಿ ಸ್ವಲ್ಪ ಹಣ ಉಳಿಯಿತೆಂದೇ ಲೆಕ್ಕ…

ನಾವು ಎಷ್ಟೋ ಕೆಲಸಗಳನ್ನು ಮುಂದೂಡುತ್ತಲೇ ಇರುತ್ತೇವೆ. ಈ ಕೆಲಸವನ್ನು ನಾಳೆ ಮಾಡಿದರಾಯಿತು. ಹೇಗಿದ್ದರೂ ನಾಳೆ ಬಿಡುವಿದೆ,  ಎನ್ನುವುದು ನಮ್ಮ ಮಾಮೂಲು  ಜಾಯಮಾನವೇ ಆಗಿರುತ್ತದೆ. ಆದರೆ, ತುರ್ತು ಕೆಲಸ ಇದ್ದಾಗ ನಾವು ಮುಂದೂಡುವುದಿಲ್ಲ. ಅಂದರೆ ಯಾವುದನ್ನು ಈಗಲೇ ಮಾಡಬೇಕು, ಇನ್ನು ಯಾವುದು ನಿಧಾನಕ್ಕೆ ಮಾಡಿದರೂ ಸಾಕು ಎಂದು ನಾವು ಅರಿತಿರಬೆಕು. ಕೆಲವೊಂದು ಕಾರ್ಯಗಳನ್ನು ತಕ್ಷಣ ಮಾಡಬೇಕು. ಇನ್ನು ಕೆಲವು  ಕೆಲಸಗಳಿಗೆ ನಿಧಾನವೇ ಪ್ರಧಾನ. ಏನಾದರೂ ಕಂಡ ತಕ್ಷಣ ಕೊಳ್ಳುವ ಮನೋಭಾವ ನಮಗಿದ್ದರೆ, ಅದರಿಂದ ಹೊರ ಬರುವುದು ನಮಗೇ ಕಷ್ಟ ಆಗುತ್ತಿದ್ದರೆ ಅದಕ್ಕಿರುವ ಸುಲಭ ಪರಿಹಾರ, ಅದನ್ನು ಮುಂದೂಡುವುದು.

ಈಗ ಹಬ್ಬಗಳ ಸಾಲು ಶುರು. ಎಲ್ಲಿ  ನೋಡಿದರೂ ಸೇಲ್‌ಗ‌ಳೇ ರಾರಾಜಿಸುತ್ತಿವೆ. ಭಾರೀ ರಿಯಾಯಿತಿ, ತೀರುವಳಿ ಮಾರಾಟ, ಬೈ ಒನ್‌ಗೆಟ್‌ ಒನ್‌ ಎಂಬ ಬೋರ್ಡ್‌ಗಳನ್ನು ನೋಡಿದ ಯಾರಿಗಾದರೂ ಕೊಳ್ಳುವುದಕ್ಕೆ ಮುಂದಾಗಬೇಕೆಂದು ಅನ್ನಿಸುವುದು ಸಹಜ. ಈ ಸಹಜ ಬಯಕೆಯನ್ನು ಮುಂದೂಡಬಹುದೆ? ಒಮ್ಮೆ ಹೀಗೆ ಮುಂದೂಡಿದರೆ ಖರೀದಿಸಬೇಕೆಂಬ ನಮ್ಮ ಬಯಕೆಯೂ ಕ್ಷೀಣಿಸುತ್ತದೆ. ಕೊಂಡರೂ ಸರಿ, ಕೊಳ್ಳದಿದ್ದರೂ ಸರಿ ಎನ್ನುತ್ತೇವೆ. ನಮಗೆ ಅಷ್ಟು ಅಗತ್ಯ ಇಲ್ಲ ಎಂದು ಗೊತ್ತಿರುವ ಎಷ್ಟೋ ಖರ್ಚುಗಳನ್ನು ಮುಂದೂಡುವುದಕ್ಕೆ ನಾವು ಕಲಿತರೆ ಮುಂದಿನದು ಉಳಿತಾಯವಲ್ಲದೇ ಬೇರೆ ಅಲ್ಲ. ಅಗತ್ಯವಾದ ಖರ್ಚುಗಳನ್ನು, ಮಾಡಲೇ ಬೇಕಾದ ಖರ್ಚುಗಳನ್ನು ಮುಂದೂಡಬಾರದು. ಆಸ್ಪತ್ರೆ, ಮಕ್ಕಳಿಗೆ ಓದು… ಇಂಥವುಗಳನ್ನು ಖರೀದಿಸಲು, ಇವುಗಳ ಮೇಲೆ ಹಣ ವ್ಯಯಿಸಲು ಹಿಂದೆ ಮುಂದೆ ನೋಡಬಾರದು. ಅದೇ ಬಟ್ಟೆ, ಮನೆಗೆ ಬೇಕಾದ ಎಷ್ಟೋ ಅಲಂಕಾರಿಕ ಸಾಮಾನುಗಳು ಇವೆಲ್ಲವೂ ಅಗತ್ಯವಾದ ಖರ್ಚುಗಳು ಅಲ್ಲದೇ ಇರಬಹುದು. 

ಏನೇ ಖರೀದಿ ಮಾಡುವಾಗಲೂ ಇದು ನಮಗೆ ಅಗತ್ಯವೋ, ಅನಿವಾರ್ಯವೋ ಎಂದು ಪರಿಶೀಲಿಸಲು ಸಮಯ ಸಿಗುವುದಕ್ಕಾದರೂ  ಖರೀದಿಯನ್ನು ಮುಂದೂಡಬೇಕು. ಈಗ ನಾವು ನೋಡುವ ಎಲ್ಲ ಅಂಗಡಿಗಳೂ ನಮಗೆ ಅನಿವಾರ್ಯ ಎನ್ನುವುದನ್ನು ಮಾರುತ್ತಿಲ್ಲ. ಮೊಬೈಲ್‌, ಬಟ್ಟೆ, ಉಪಕರಣಗಳು, ಮನೆ ಅಲಂಕಾರದ ವಸ್ತುಗಳು. ಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುವ ಜಾಹೀರಾತುಗಳು. ಇಂತಹ ಸಂದರ್ಭದಲ್ಲಿ ಖರೀದಿಯನ್ನು ಮುಂದೂಡಿದರೆ ಸಾಕು, ಉಳಿತಾಯ ತನ್ನಿಂದ ತಾನೇ ಆಗುತ್ತದೆ. ಒಮ್ಮೆ ಉಳಿತಾಯ ಮಾಡುವುದು ಅಭ್ಯಾಸ ಆದರೆ ಆಮೇಲೆ ಖರ್ಚು ಮಾಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ.  ಕೊಳ್ಳುವುದನ್ನು ಮುಂದೂಡಿದಾಗ ಅಗತ್ಯಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯುತ್ತೇವೆ. ಆಗ ನಮಗೆ ಇದು ಬೇಕೋ ಬೇಡವೋ ಎಂದು ನಾವೇ ಪರಿಶೀಲಿಸಿಕೊಳ್ಳುತ್ತೇವೆ. ಇಂತಹ ಪರಿಶೀಲನೆಯೇ ನಮ್ಮ ಆರ್ಥಿಕ ಶಿಸ್ತಿನ ಮೂಲವೂ ಆಗಿರುತ್ತದೆ.

ಸುಧಾಶರ್ಮ ಚವತಿ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.