ಅಧ್ಯಕ್ಷ ಉಪಾಧ್ಯಕ್ಷರಿಲ್ಲದ ಉಡುಪಿ ನಗರಸಭೆ 


Team Udayavani, Oct 5, 2018, 6:00 AM IST

udupi-muncipality.jpg

ಉಡುಪಿ: ಉಡುಪಿ ನಗರ ಸಭೆಯ ಚುನಾವಣಾ ಫ‌ಲಿತಾಂಶ ಪ್ರಕಟವಾಗಿ ಒಂದು ತಿಂಗಳು ಸಂದಿದೆ. ಆದರೆ ಇನ್ನೂ ಕೂಡ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದೇ ಇರುವುದರಿಂದ ಆಡಳಿತ ಯಂತ್ರ ಚುರುಕಾಗಿಲ್ಲ. ನೂತನ ಸದಸ್ಯರು ಅಸಹಾಯಕರಾಗಿದ್ದಾರೆ. ನಗರದ ಜನತೆಯ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಸದಸ್ಯರಿಲ್ಲ. 

ಮೀಸಲಾತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ರಾಜ್ಯದ ಇತರ ಕೆಲವು ನಗರಾಡಳಿತ ಸಂಸ್ಥೆಗಳಂತೆ ಉಡುಪಿ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಕೂಡ ಬಾಕಿಯಾಗಿದೆ. ಸದ್ಯ ಜಿಲ್ಲಾಧಿಕಾರಿಯವರೇ ಆಡಳಿತಾಧಿ ಕಾರಿಯಾಗಿದ್ದಾರೆ. 

“ಕಾರ್ಯದೊತ್ತಡ, ಸ್ಥಳೀಯ ಜನ ಸಂಪರ್ಕದ ಕೊರತೆ ಮೊದಲಾದ ಕಾರಣ ಗಳಿಂದಾಗಿ ಜನತೆಯ ಹಲವಾರು ಸಮಸ್ಯೆ
ಗಳಿಗೆ ಸಮರ್ಪಕವಾಗಿ ಸ್ಪಂದಿಸುವುದು ಜಿಲ್ಲಾಧಿಕಾರಿಯವರಿಂದ ಅಸಾಧ್ಯ. ಅದಕ್ಕೆ ಜನಪ್ರತಿನಿಧಿಗಳ ಆಡಳಿತವೇ ಬೇಕು’ಎಂಬುದು ಅನೇಕ ಮಂದಿ ಮಾಜಿ, ಹಾಲಿ ಸದಸ್ಯರ ಮಾತು. 
 
ಉಡುಪಿ ನಗರದ ಬೀದಿದೀಪ ನಿರ್ವಹಣೆ, ರಸ್ತೆ ಗುಂಡಿ ಸಮಸ್ಯೆ ಬಗೆಹರಿದಿಲ್ಲ. ಕುಡಿಯುವ ನೀರು ಲಭ್ಯವಿದ್ದರೂ ಸಮರ್ಪಕವಾಗಿ ಪೂರೈಕೆ ಯಾಗು ತ್ತಿಲ್ಲ. ನಾವು ನಗರಸಭೆಯ ಅಧಿಕಾರಿಗಳ ಬಳಿ ಹೋಗುವುದು ಹೇಗೆ ಎಂಬುದು ತಿಳಿಯುತ್ತಿಲ್ಲ. ನಮ್ಮ ವಾರ್ಡ್‌ನ ಜನರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂಬ ಅಸಹಾಯಕತೆ ಹೆಚ್ಚಿನ ಸದಸ್ಯರದ್ದು. 

ಬಜೆಟ್‌ ಕಾಮಗಾರಿಗಳಿಗೆ ಹೊಡೆತ 
ಕಳೆದ ನಗರಸಭೆ ಬಜೆಟ್‌ನಲ್ಲಿ ಘೋಷಿಸಿರುವ ಕಾಮಗಾರಿಗಳ ಅನುಷ್ಠಾನ ಪ್ರಕ್ರಿಯೆ ಈ ತಿಂಗಳಲ್ಲಿ ಆರಂಭಗೊಳ್ಳ ಬೇಕಿತ್ತು. ಅದರಲ್ಲಿ ರಸ್ತೆ, ನೀರು, ಕಳೆಗಿಡಗಳ ಕಟ್ಟಿಂಗ್‌, ಸ್ವತ್ಛತೆ ಮೊದಲಾದವು ಸೇರಿವೆ. ಈ ಕೆಲಸ ಸಮರ್ಪಕವಾಗಿ ನಡೆಯ
ಬೇಕಾದರೆ ನಗರಸಭೆಗೆ ಜನಪ್ರತಿನಿಧಿಗಳ ಚುಕ್ಕಾಣಿ ಬೇಕು. ಡಾಮರು ರಸ್ತೆಗಳ ಕಾಮಗಾರಿ ಜನವರಿ ಒಳಗೆ ಮುಗಿಸಬೇಕು.

ಮಾರ್ಚ್‌- ಎಪ್ರಿಲ್‌ ಮಾಡಿದರೆ ಅದು ಮಳೆಗೆ ಪೂರ್ಣ ಹಾಳಾಗುತ್ತದೆ. ಡಾಮರು ರಸ್ತೆಗೆ ಕನಿಷ್ಠ 2-3 ತಿಂಗಳಾದರೂ ಬಿಸಿಲು ಬೇಕೇಬೇಕು ಎನ್ನುತ್ತಾರೆ ನಗರಸಭೆಯ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಅವರು. 

“ನಾನು ಪ್ರತಿದಿನ ನಗರಸಭೆ ಕಚೇರಿಗೆ ತೆರಳಿ ವಾರ್ಡ್‌ನ ಕೆಲಸ, ಸಮಸ್ಯೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಆದರೆ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ವಿದ್ದರೆ ಸಮಪರ್ಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಫ‌ಲಾನುಭವಿಗಳ ಆಯ್ಕೆಗೂ ತೊಡಕಾಗಿದೆ. ಜಿಲ್ಲಾಧಿಕಾರಿ ದೊಡ್ಡ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ಸಾಮಾನ್ಯ ಮತ್ತು ಜನರಿಗೆ ಅಗತ್ಯ ವಾದ ಕೆಲವು ಕೆಲಸಗಳ ಕಡೆ ಅವರು ಗಮನ ಹರಿಸುವುದು ಕಡಿಮೆ’ ಎಂಬುದು ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರ ಅಭಿಪ್ರಾಯ. 

ಲೋಕಸಭಾ ಚುನಾವಣೆ: ಯಾರಿಗೆ ಹೊಡೆತ?
ಉಡುಪಿ ನಗರಸಭೆಯಲ್ಲಿಯೂ ಜನತೆ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಷ್ಟರೊಳಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆಗಿರುತ್ತಿದ್ದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತಿತ್ತು. ಇದು ಮುಂದಿನ ಲೋಕಸಭಾ ಚುನಾವಣೆಗೂ ನೆರವಾಗುತ್ತಿತ್ತು. ಆದರೆ ಈಗ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯ ಅತಂತ್ರ ಆಡಳಿತ ಲೋಕಸಭೆ ಚುನಾವಣೆವರೆಗೂ ಮುಂದುವರಿಯ ಬಹುದೇ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎನ್ನುತ್ತಾರೆ ಬಿಜೆಪಿಯ ಕೆಲವು ಮಂದಿ ಸ್ಥಳೀಯ ಮುಖಂಡರು.

ಜಿಲ್ಲಾಧಿಕಾರಿ “ಪವರ್‌’
ಈಗಾಗಲೇ ನಗರದ ಪಾರ್ಕಿಂಗ್‌ ಸುವ್ಯವಸ್ಥೆ ದೃಷ್ಟಿಯಿಂದ ಪಾರ್ಕಿಂಗ್‌ಗಾಗಿ ಮೀಸಲಿಟ್ಟ ಕಟ್ಟಡಗಳಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಆದೇಶ ನೀಡುವ ಮೂಲಕ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿ ಕಾರಿಯವರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಚನೆ ರವಾನಿಸಿದ್ದಾರೆ. ಜಿಲ್ಲಾಧಿಕಾರಿ “ಪವರ್‌’ ನಗರದ ಕೆಲ ವೊಂದು ಮಹತ್ವದ ಸುಧಾರಣೆಗಳಿಗೂ ಕಾರಣವಾಗಬಹುದು ಎಂಬ ಆಶಾವಾದ ನಗರದ ಒಂದು ವರ್ಗದ ಜನತೆಯಲ್ಲಿದೆ.ಫ‌ುಲ್‌ ಸ್ವಿಂಗ್‌ನಲ್ಲಿ ಆಡಳಿತ ನಡೆಸಿ ಜನರ ಹೃದಯ ಗೆಲ್ಲಬೇಕೆಂಬ ಬಿಜೆಪಿ ಹುಮ್ಮಸ್ಸಿಗೆ ಆರಂಭದ ಹಿನ್ನಡೆಯಾಗಿದೆ. ತಮ್ಮ ಸಮಸ್ಯೆಯನ್ನು ಹೊಸ ಆಡಳಿತ, ಸದಸ್ಯರ ಮೂಲಕ ಬಗೆಹರಿಸಿ ಕೊಳ್ಳಬೇಕೆಂಬ ಜನತೆಯ ಆಶಯಕ್ಕೂ ತಣ್ಣೀರು ಬಿದ್ದಿದೆ.   

ಮಾಜಿ ಸದಸ್ಯರಿಗೇ ಪ್ರಶ್ನೆ
ಮೊದಲ ಸಭೆಯೂ ಆಗಿಲ್ಲ. ಆಯ್ಕೆಯಾದ ಸದಸ್ಯರಿಗೆ ಕೆಲಸವೇ ಇಲ್ಲ. ನಗರಾಡಳಿತದ ಅನುಭವವೇ ದೊರೆಯುತ್ತಿಲ್ಲ. ಅವರು ಜನರಿಗೆ ಸ್ಪಂದಿಸುವುದು ಕಷ್ಟವಾಗುತ್ತಿದೆ. ಜನತೆ ಮಾಜಿ ಸದಸ್ಯರ ಬಳಿ ಪ್ರಶ್ನಿಸುತ್ತಿದ್ದಾರೆ. ಬೀದಿ ದೀಪ ನಿರ್ವಹಣೆ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡುವ ಪ್ರಕ್ರಿಯೆಯೂ ನಿಂತಿದೆ. ಎಸ್‌ಟಿ/ ಎಸ್‌ಸಿ, ಹಿಂದುಳಿದ ವರ್ಗಗಳಿಗಾಗಿ ನಿಗದಿಯಾದ ಕೇಂದ್ರ, ರಾಜ್ಯದ ಅನುದಾನ ಬಳಕೆಯೂ ಸಾಧ್ಯವಾಗುತ್ತಿಲ್ಲ.
– ದಿನಕರ ಶೆಟ್ಟಿ ಹೆರ್ಗ,  ಮಾಜಿ ಅಧ್ಯಕ್ಷರು, ಉಡುಪಿ ನಗರಸಭೆ

 ಎಲ್ಲರ ಅಹವಾಲು ಆಲಿಸುವೆ 
ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಗರಸಭಾ ಸದಸ್ಯರು ಕೂಡ ಸಾರ್ವಜನಿಕರಂತೆಯೇ ಪೌರಾಯುಕ್ತರ ಮೂಲಕ ನನಗೆ ಅಹವಾಲು ಸಲ್ಲಿಸಬಹುದು. ಬೀದಿದೀಪ ನಿರ್ವಹಣೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಎಸ್‌ಟಿ/ಎಸ್‌ಸಿ, ಹಿಂದುಳಿದ ವರ್ಗದ ಫ‌ಲಾನುಭವಿಗಳ ಆಯ್ಕೆಯನ್ನು ನಾನು ಕೂಡ ಮಾಡಬಹುದು. ಆದರೆ ಅದು ಸ್ವಲ್ಪ ಸೂಕ್ಷ್ಮ ವಿಚಾರ. ಅದನ್ನು ಸದಸ್ಯರೇ ಮಾಡುವುದು ಉತ್ತಮ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನೋಟಿಫಿಕೇಶನ್‌ ಶೀಘ್ರ ಆದರೆ ಸದಸ್ಯರೇ ಫ‌ಲಾನುಭವಿಗಳ ಆಯ್ಕೆ ಮಾಡಬಹುದು ಎಂದು ನಾನು ಮಾಡಿಲ್ಲ.
– ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ 

 ಪೌರಾಯುಕ್ತರ ಭೇಟಿಗೆ ನಿರ್ಧಾರ 
ತೆರಿಗೆ ಕಟ್ಟುವುದು, ಪರಿಚಯದವರ ಲೈಸನ್ಸ್‌ ಮತ್ತಿತರ ಕೆಲಸಗಳನ್ನು ಮಾಡಿಸಿಕೊಡಲು ನಗರಸಭೆಗೆ ಹೋಗುತ್ತಿದ್ದೇನೆ. ಆದರೆ ಓರ್ವ ನಗರಸಭಾ ಸದಸ್ಯನಂತೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ದಾರಿದೀಪ, ನೀರು, ರಸ್ತೆ ಸಮಸ್ಯೆ ಹೆಚ್ಚಾಗಿದೆ. ಹಕ್ಕುಪತ್ರ ವಿತರಣೆಯೂ ಬಾಕಿ ಇದೆ. ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷರ ಜತೆಗೆ ತೆರಳಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಿದ್ದೇವೆ.
– ಮಂಜುನಾಥ ಶೆಟ್ಟಿಗಾರ್‌, ಈಶ್ವರನಗರ ವಾರ್ಡ್‌

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

24-wednesday

Daily Horoscope: ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ, ಆರೋಗ್ಯ ವೃದ್ಧಿ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್‌?

BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

Pangala ಶರತ್‌ ಶೆಟ್ಟಿ ಕೊಲೆ ಪ್ರಕರಣ: ಆರೋಪಿ ಯೋಗೀಶ್‌ ಪೊಲೀಸ್‌ ಕಸ್ಟಡಿಗೆ

Pangala ಶರತ್‌ ಶೆಟ್ಟಿ ಕೊಲೆ ಪ್ರಕರಣ: ಆರೋಪಿ ಯೋಗೀಶ್‌ ಪೊಲೀಸ್‌ ಕಸ್ಟಡಿಗೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

24-wednesday

Daily Horoscope: ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ, ಆರೋಗ್ಯ ವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.