ಸೇಲ್‌ಗ‌ಳ ಸಡಗರವಲ್ಲ ದೀಪಾವಳಿ: ಮನೆ-ಮನ ಬೆಳಗಲಿ


Team Udayavani, Nov 6, 2018, 6:00 AM IST

3.jpg

ಪಟಾಕಿಯ ಸಿಡಿಮದ್ದು ಯಾರ ಕಣ್ಣಿಗೂ, ಬಾಳಿಗೂ ಕಿಡಿಯಾಗಿ ಬೀಳದಿರಲಿ. ಎಲ್ಲರೂ ಜೊತೆಯಾಗಿ ನಡೆಯಲು, ನಲಿಯಲು ದೀಪಾವಳಿ ನೆಪವಾಗಲಿ. ಹಣತೆಯ ಬೆಳಕು ಮನೆ-ಮನಗಳಲ್ಲೂ ಬೆಳಗಲಿ. 

ಇಂದು ದೀಪಾವಳಿ. ಇದು ಬೆಳಕಿನ ಹಬ್ಬ. ಬೆರಗಿನ ಹಬ್ಬ. ಬೆಳಕು ಬೆಳದಿಂಗಳಾಗಿ ಕಾಣುವಂಥ ಬೆಡಗಿನ ಹಬ್ಬ. ಭಾರತೀಯರ ಪಾಲಿಗೆ, ಹಬ್ಬಗಳೆಂದರೆ ಕುಟುಂಬದವರೆಲ್ಲ ಒಂದೆಡೆ ಸೇರಿ, ಹೊಸಬಟ್ಟೆ ಧರಿಸಿ, ಹಬ್ಬದೂಟ ಉಂಡು, ಹಿರಿಯರನ್ನು ಸ್ಮರಿಸಿ ಸಂಭ್ರಮಿಸಲು ಸಿಗುವ ಒಂದು ಅಪರೂಪದ ಘಳಿಗೆ. 

ದೀಪಾವಳಿಯೂ ಅಂಥದೇ ಮಧುರ ಕ್ಷಣಗಳ ಸಂಕಲನ. ಒಂದು ವಿಶೇಷವೆಂದರೆ ಈ ಹಬ್ಬದಲ್ಲಿ ಮನೆಯೊಳಗೆ ಮಾತ್ರವಲ್ಲ, ಹೊರಗೂ ದೀಪಗಳಿರುತ್ತವೆ. ಒಂದು ಹಣತೆಯಿಂದ ಮತ್ತೂಂದು, ಒಂದು ಸುರಸುರ ಬತ್ತಿಯಿಂದ ಹನ್ನೊಂದು ದೀಪಗಳು ಝಗ್ಗನೆ ಹೊತ್ತಿಕೊಂಡು ಕೆಲವೇ ಕ್ಷಣಗಳ ಮಟ್ಟಿಗೆ ಬೆಳದಿಂಗಳಿಗೂ ಸಡ್ಡು ಹೊಡೆದು ಗೆದ್ದಂತೆ ಬೀಗುತ್ತವಲ್ಲ- ಆ ವರ್ಣ ವೈಭವದ ಹೆಸರು ದೀಪಾವಳಿ. 

ಹಿಂದೂ ಸಂಸ್ಕೃತಿಯಲ್ಲಿ, ಒಂದೊಂದು ಹಬ್ಬದ್ದೂ ಒಂದೊಂದು ಪೌರಾಣಿಕ ಸಂದರ್ಭದ ನಂಟು ಬೆಸೆದಿರುತ್ತದೆೆ. ದೀಪಾವಳಿಯೂ ಅದರಿಂದ ಹೊರತಾಗಿಲ್ಲ. ನರಕಾಸುರ ಎಂಬ ರಾಕ್ಷಸನನ್ನು ಕೃಷ್ಣ ಪರಮಾತ್ಮ ಕೊಂದು ಹಾಕಿದ. ಆ ನೆಪದಲ್ಲಿ ಲೋಕದ ಕಂಟಕವನ್ನೂ, ಕಷ್ಟವನ್ನೂ ದೂರ ಮಾಡಿದ. ನರಕಾಸುರನ ವಧೆಯಾದ, ಅಂದರೆ, ಕಷ್ಟಗಳೆಲ್ಲ ಕಣ್ಮರೆಯಾದ ಖುಷಿಯನ್ನು ಸಿಡಿಮದ್ದು ಸಿಡಿಸುವ ಮೂಲಕ ನೆನಪಿಸಿಕೊಳ್ಳಬೇಕು ಎಂಬದು, ದೀಪಾವಳಿಯೊಂದಿಗೇ ಅಡಗಿರುವ ಒಂದು ಸಂದೇಶ. ಇದಾಗಿ ಎರಡೇ ದಿನಕ್ಕೆ ಬರುವ ಬಲಿಪಾಡ್ಯಮಿಯನ್ನು, ಆ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಬಲಿ ಚಕ್ರವರ್ತಿಯ ಕಥೆಯನ್ನು, ಅವನ ತ್ಯಾಗ ಮನೋಭಾವವನ್ನು ಯಾರು ತಾನೇ ಮರೆತಾರು? “ಒಬ್ಬ ಯಃಕಶ್ಚಿತ್‌ ರಾಜ, ಭಗವಂತನಿಗೇ ದಾನ ನೀಡಿದ ಎಂಬ ನೆನಪಿನಲ್ಲಿ ಎಲ್ಲರೂ ಸಂಭ್ರಮಿಸಲಿ. ಅವರ ಹರ್ಷೋದ್ಗಾರ ಹರಕೆಯಾಗಿ ನನ್ನನ್ನು ಕಾಯಲಿ’ ಎಂದು ಪ್ರಾರ್ಥಿಸಿದನಂತೆ ಬಲಿ ಚಕ್ರವರ್ತಿ. ಒಂದೊಂದು ಪಟಾಕಿ ಸಿಡಿತದ ಹಿಂದೆಯೂ ಇಂಥವೇ ಕಥೆಗಳು,  ಕನವರಿಕೆಗಳು… 

ಈ ಹಿಂದೆ ದೀಪಾವಳಿ ಎಂಬುದು, ಕುಟುಂಬದವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಲು ಸಿಗುತ್ತಿದ್ದ ಅನುಮಪ ಕ್ಷಣವಾಗಿತ್ತು. ಈದರೆ ಈಗ ಅದು ಬಹುತೇಕ “ಮಾರುಕಟ್ಟೆಯ ಸೇÇ’ಗಳಿಗೆ, ಸ್ಪೆಷಲ್‌ ಆಫ‌ರ್‌ನಲ್ಲಿ ಸಿಗುವ ಟಿ,ವಿ, ಫೋನ್‌ಗಳ ಹುಡುಕಾಟಕ್ಕೆ ಸೀಮಿತವಾಗುತ್ತಿದೆ. ನಗರ ಪ್ರದೇಶಗ ಳಲ್ಲಂತೂ ಜನ  ದೀಪ ಹಿಡಿದರೂ ದ್ವೀಪಗಳಾಗಿ ಹೋಗಿದ್ದಾರೆ. ಹ್ಯಾಪಿ ದೀಪಾವಳಿ ಎನ್ನುವ ಅವರ ಧ್ವನಿ ಮೊಬೈಲ್‌ನ ಸಂದೇಶಗಳಿಗೆ, ವಿಡಿಯೋ ಕಾಲ್‌ಗ‌ಳಿಗೆ ಸೀಮಿತವಾಗಿದೆ. ಮನೆಯಲ್ಲಿ ಹಚ್ಚಿರುವ ಹಣತೆ ಬೆಳಕು ಮನೆಯಾಚೆಗೆ ಕಾಣಿಸುತ್ತಿಲ್ಲ.  ದೀಪಾವಳಿ ಎಂದರೆ ಶಾಪಿಂಗ್‌ಗೆ ಸಿಗುವ ಒಂದು ನೆಪವಲ್ಲ. ಅದು ಎರಡು ದಿನ ರಜೆಯ ಸಡಗರವಲ್ಲ. ದೀಪಾವಳಿ ಎಂಬುದು ಕಿವಿಗಡಚಿಕ್ಕುವ ಪಟಾಕಿಗಳ ಸದ್ದು ಮಾತ್ರವಲ್ಲ, ಅದು ಸೆಲ್ಫಿಯಲ್ಲಿ ಫೋಟೋ ಕಳಿಸಿ ಸಂಭ್ರಮಿಸುವ ಕ್ಷಣವಷ್ಟೇ ಅಲ್ಲ. ದೀಪಾವಳಿ ಎಂದರೆ ಕಷ್ಟಗಳೆಂಬ ಕತ್ತಲೆ ಕಳೆದು ಸಂಭ್ರಮವೆಂಬ ಮತಾಪು ಬಾಳ ಆಗಸವನ್ನು ಬೆಳಗಲಿ ಎಂದು ಆಶಿಸುವ ಮಧುರ ಕ್ಷಣ. ಇಂಥದ್ದೊಂದು ಬೆಳಕಿನ ಕಿರಣ, ಎಲ್ಲರ ಬಾಳಿಗೂ ಬರಲಿ. ಬಂಧು ಬಾಂಧವರು-ಸ್ನೇಹಿತರು ಜೊತೆಯಾಗಿ ಸಂಭ್ರಮಿಸುವ ಆಪ್ತ ಹಬ್ಬವಾಗಲಿ. ಪಟಾಕಿಯ ಸಿಡಿಮದ್ದು ಯಾರ ಕಣ್ಣಿಗೂ, ಬಾಳಿಗೂ ಕಿಡಿಯಾಗಿ ಬೀಳದಿರಲಿ. ಎಲ್ಲರೂ ಜೊತೆಯಾಗಿ ನಡೆಯಲು, ನಲಿಯಲು ದೀಪಾವಳಿ ನೆಪವಾಗಲಿ. ಹಣತೆಯ ಬೆಳಕು ಮನೆ-ಮನಗಳಲ್ಲೂ ಬೆಳಗಲಿ. 

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.