ಸವಣೂರು ಕೃಷಿ ಇಲಾಖೆಯ ಕಟ್ಟಡಕ್ಕೆ ಬೇಲಿ
Team Udayavani, Nov 8, 2018, 3:07 PM IST
ಸವಣೂರು: ಸವಣೂರು ಮುಖ್ಯ ಪೇಟೆಯ ಸಮೀಪವೇ ಇರುವ ಕೃಷಿ ಇಲಾಖೆಯ ಕಟ್ಟಡವು ಯಾವುದೇ ಉಪಯೋಗವಿಲ್ಲದೆ ಅನಾಥವಾಗಿ ಪಾಳು ಬಿದ್ದಿತ್ತು. ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಉದಯವಾಣಿ ಸುದಿನ ಅ. 10ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.
ಕೃಷಿ ಇಲಾಖೆಯ ಜಾಗದಲ್ಲಿ ಖಾಸಗಿಯವರು ಮಾರ್ಗ ನಿರ್ಮಾಣ ಮಾಡಿದ್ದರು. ಆದರೂ ಈ ಕುರಿತು ಇಲಾಖೆ ಯಾವುದೇ ಗಮನ ಹರಿಸಿರಲಿಲ್ಲ. ಈ ವಿಚಾರವನ್ನು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ತಡವಾಗಿ ಎಚ್ಚೆತ್ತ ಕೃಷಿ ಇಲಾಖೆ ತನ್ನ ಜಮೀನಿಗೆ ಬೇಲಿ ಅಳವಡಿಸಿಕೊಂಡಿದೆ. ಬೇಲಿ ಅಳವಡಿಕೆ ಸಂದರ್ಭ ಕಡಬ ಹೋಬಳಿ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ, ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಸದಸ್ಯರಾದ ಗಿರಿಶಂಕರ ಸುಲಾಯ, ಸತೀಶ್ ಬಲ್ಯಾಯ, ಸತೀಶ್ ಅಂಗಡಿಮೂಲೆ ಭೇಟಿ ನೀಡಿ ಪರಿಶೀಲಿಸಿದರು.
ಕಟ್ಟಡ ಉಪಯೋಗವಾಗಲಿ
ಕೃಷಿ ಇಲಾಖೆ ತನ್ನ ಜಮೀನಿಗೆ ಬೇಲಿ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. ಹಾಗೆಯೇ ಪಾಳು ಬಿದ್ದ ಎರಡು ಸರಕಾರಿ ಕಟ್ಟಡಗಳು ಶೀಘ್ರ ದುರಸ್ತಿ ಭಾಗ್ಯ ಕಂಡು ಸದುಪಯೋಗವಾಗಬೇಕು ಎನ್ನುವುದು ಸಾರ್ವಜನಿಕರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್
YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…
ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ
Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ