ನಂಬಿಕೆ: ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಅಳೆಯಬೇಕೇ?


Team Udayavani, Dec 6, 2018, 12:30 AM IST

Prote

ಸುಪ್ರೀಮ್‌ ಕೋರ್ಟ್‌ ಶಬರಿಮಲೆಯ ಕುರಿತು ನೀಡಿದ ತೀರ್ಪಿನ ಅನಂತರ ಅದರ ಪರ ಹಾಗೂ ವಿರುದ್ಧ ನಾನಾ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಿಂದು ಧರ್ಮದಲ್ಲಿ ವಿವಿಧ ರೀತಿಯ ಧಾರ್ಮಿಕ ನಂಬಿಕೆಗಳು, ಶ್ರದ್ಧೆಗಳು, ಆಚರಣೆಗಳಿವೆ. ಆದರೆ ಇಲ್ಲಿ ಗಮನಿಸಬೇಕಾದುದು ಏನೆಂದರೆ ಇಲ್ಲಿ ಎಲ್ಲಾ ನಂಬಿಕೆಗಳು, ಆಚರಣೆಗಳನ್ನು ಅವರವರ ವಿಶ್ವಾಸಕ್ಕೆ, ಶ್ರದ್ಧೆಗೆ ಬಿಟ್ಟಿದ್ದಾರೆ.  ಯಾವುದನ್ನೇ ಆಗಲಿ ಆಚರಿಸಲೇಬೇಕು, ನಂಬಲೇ ಬೇಕು ಎಂದು ಯಾರ ಮೇಲೂ ಯಾವುದೇ ರೀತಿಯ ಕಡ್ಡಾಯವಿಲ್ಲ, ನಿರ್ಬಂಧಗಳಿಲ್ಲ, ಹೇರಿಕೆಗಳು ಇಲ್ಲ.

ಅದೇ ರೀತಿಯಲ್ಲಿ ಋತುಮತಿಯಾದ ಮಹಿಳೆ ದೇವಸ್ಥಾನಕ್ಕೆ ಹೋಗಬಾರದು, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಾರದು ಎಂಬುದು ಒಂದು ನಂಬಿಕೆ. ಇದು ನಿಜವಾಗಿಯೂ ಎಲ್ಲಾ ದೇವಸ್ಥಾನಕ್ಕೆ ಅನ್ವಯಿಸುವಂತಹ ನಂಬಿಕೆ, ಕೇವಲ ಶಬರಿಮಲೆ ದೇವಸ್ಥಾನಕ್ಕೆ ಮಾತ್ರ ಅಲ್ಲ. ಆದರೆ ಮೊದಲೆ ಹೇಳಿದ ಹಾಗೆ ನಮ್ಮ ಹೆಚ್ಚಿನ ಧಾರ್ಮಿಕ ಆಚರಣೆಗಳನ್ನು ಜನರ ಶ್ರದ್ಧೆಗೆ ಬಿಟ್ಟ ಕಾರಣ ಯಾವುದೇ ದೇವಸ್ಥಾನಗಳಲ್ಲಿ ಈ ಬಗ್ಗೆ ಅಂತಹ ಕಠಿಣ ಆಚರಣೆ ಕಾಣುವುದಿಲ್ಲ. ಎಷ್ಟೋ ಜನರು ಈಗಲೂ ಶ್ರದ್ಧೆಯಿಂದ ಅದನ್ನು ಆಚರಿಸುತ್ತಾರೆ. ಆದರೆ ಯಾವ ದೇವಸ್ಥಾನಗಳಲ್ಲೂ ಈ ಬಗ್ಗೆ ಯಾರನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಕೇವಲ ಶಬರಿಮಲೆಯಲ್ಲಿ ಮಾತ್ರ 10 ರಿಂದ 50 ವರ್ಷದವಳಗಿನ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂಬ ಕಠಿಣ ಆಚರಣೆ ಇದೆ. ಹಾಗಾದರೆ ಇದು ಏಕೆ?

ನಮ್ಮ ದೇವಸ್ಥಾನಗಳೆಂದರೆ ಕೇವಲ ಪ್ರಾರ್ಥನ ಸ್ಥಳಗಳಲ್ಲ. ಅವುಗಳು ಧಾರ್ಮಿಕ ಶಕ್ತಿ ಕೇಂದ್ರಗಳು. ಪ್ರತಿಯೊಂದು ದೇವಸ್ಥಾನಗಳಿಗೂ ಅವುಗಳದ್ದೆ ಆದ ಇತಿಹಾಸವಿದೆ, ಸ್ಥಳ ಪುರಾಣವಿದೆ, ಅಲ್ಲಿನ ದೇವರ ಬಗ್ಗೆ ಕಥೆಗಳಿವೆ. ಅವುಗಳಿಗೆ ಅನುಗುಣವಾಗಿ ವರ್ಷಾಂತರಗಳಿಂದ ಬೆಳೆದು ಬಂದ ಆಚರಣೆಗಳು, ಪೂಜಾ ವಿಧಿವಿಧಾನಗಳು ಇವೆ. ದೇವರೊಬ್ಬನೆ ಎಂದರು, ಬೇರೆ ಬೇರೆ ದೇವರುಗಳಿಗೆ ಸಂಬಂಧಪಟ್ಟಂತೆ, ಬೇರೆ ಬೇರೆ ದೇವಸ್ಥಾನಗಳಿಗೆ ಸಂಬಂಧಪಟ್ಟಂತೆ ಜನರ ನಂಬಿಕೆಗಳು ಬೇರೆ ಬೇರೆ ಇವೆ. ಬೇರೆ ಬೇರೆ ರೀತಿಯ ಸಮಸ್ಯೆಗಳಿಗೆ ಜನರು ಬೇರೆ ಬೇರೆ ದೇವಸ್ಥಾನಕ್ಕೆ ಹೋಗುತ್ತಾರೆ. ವಿವಿಧ ರೀತಿಯ ಪೂಜಾಕ್ರಮಗಳ ಮೊರೆ ಹೋಗುತ್ತಾರೆ.

ಹಾಗಾಗಿ ಇಲ್ಲಿ ನಾವು ಶಬರಿಮಲೆಯ ಸ್ಥಳಪುರಾಣ, ಅಯ್ಯಪ್ಪ ದೇವರ ಐತಿಹ್ಯ, ಅಲ್ಲಿಗೆ ಸಂಬಂಧ ಪಟ್ಟ ಕತೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಎಲ್ಲಾ ದೇವಸ್ಥಾನಗಳ ಆಚರಣೆಗಳು ಆ ದೇವಸ್ಥಾನಕ್ಕೆ ಸಂಬಂಧ ಪಟ್ಟಂತೆ ಇರುವ ಕಥೆ, ಸ್ಥಳಪುರಾಣಗಳ ಮೇಲೆ ನಿರ್ಧರಿಸಲ್ಪಡುವುದರಿಂದ ಅಯ್ಯಪ್ಪ ದೇವರ ಕುರಿತು ಇರುವ ಕತೆ, ನಂಬಿಕೆಗಳ ಆಧಾರದ ಮೇಲೆ ಇಂತಹ ಕಠಿಣ ಆಚರಣೆ ಬಂದಿರಬಹುದು. ಕೇವಲ ಹೆಣ್ಣು ಋತುಮತಿಯಾಗುತ್ತಾಳೆ ಎಂಬ ವಿಚಾರದಿಂದ ರೂಪಿತವಾದ ನಿರ್ಬಂಧ ಎನಿಸುವುದಿಲ್ಲ. ಇದು ಹಿಂದು ಧರ್ಮದಲ್ಲಿರುವ ಸಾಮಾನ್ಯ ನಂಬಿಕೆಯಾದ್ದರಿಂದ ಈ ವಿಚಾರಕ್ಕಾಗಿಯೇ ನಿರ್ಬಂಧವಿದ್ದಿದ್ದರೆ ಎಲ್ಲಾ ದೇವಸ್ಥಾನಗಳಲ್ಲಿ ಈ ಕಠಿಣ ಆಚರಣೆ ಕಾಣಬೇಕಾಗುತ್ತಿತ್ತು. ಹಾಗಿಲ್ಲವಲ್ಲ. ಅಯ್ಯಪ್ಪನನ್ನು ದೇವರೆಂದು ಮಣಿಕಂಠನ ಕುರಿತು ಇರುವ ಕತೆಯ ಆಧಾರದ ಮೇಲೆ ನಂಬುತ್ತೇವೆಯಾದರೆ, ಕತೆಯ ಆಧಾರದ ಮೇಲೆ ವರ್ಷಾಂತರಗಳಿಂದ ಬೆಳೆದು ಬಂದ ಅದಕ್ಕೆ ಸಂಬಂಧಪಟ್ಟ ಆಚರಣೆಗಳ ಬಗ್ಗೆಯೂ ವಿಶ್ವಾಸ ಬೇಕಲ್ಲವೇ? ಒಂದೊಂದು ದೇವಸ್ಥಾನಕ್ಕೆ ಒಂದೊಂದು ಸ್ಥಳ ಪುರಾಣ, ಅದರಿಂದಾಗಿ ರೂಪಿತಗೊಂಡ ನಂಬಿಕೆಗಳು, ಆಚರಣೆಗಳು, ಪೂಜಾ ವಿಧಾನಗಳು ಇರುವಾಗ ಅವನ್ನೆಲ್ಲ ಸಾಮಾಜಿಕ ನ್ಯಾಯದ ಮಾನದಂಡದಿಂದ ಅಳೆಯಲು ಸಾಧ್ಯವೇ?

 ರೂಪಾ ಬಿ. 

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.